ಶಿವಮೊಗ್ಗ: ಜಿಲ್ಲೆಯ ಸಾಗರ ಸಮೀಪದ ಮಾಸೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಅಮಾಯಕ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಾಸೂರಿನಲ್ಲಿರುವಂತ ನಾಗಾರ್ಜುನ ಎನ್ನುವಂತ ಬಾರ್ ಮುಂದೆ ಕಳೆದ ರಾತ್ರಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ದುಷ್ಕರ್ಮಿಯೊಬ್ಬ ಬಾರ್ ಮುಂದೆ ಸಾಗುತ್ತಿದ್ದಂತ ವ್ಯಕ್ತಿಯೊಬ್ಬರ ಮೇಲೆ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರೋರು ಸಿಸಿಟಿವಿ ವೀಡಿಯೋದಲ್ಲಿ ದಾಖಲಾಗಿದೆ.
ದಿನವೂ ಕಂಠಪೂರ್ತಿ ಕುಡಿದು ನಾಗಾರ್ಜುನ ಬಾರ್ ಮುಂದೆ ಗಲಾಟೆ ಮಾಡುವುದೇ ಮನೆಗಟ್ಟ ಗ್ರಾಮದ ರಾಜೇಶ್ ಎಂಬಾತನ ನಡೆಯಾಗಿದೆ ಎನ್ನಲಾಗುತ್ತಿದೆ. ಇಂತಹ ದುಷ್ಕರ್ಮಿ ದಿಢೀರ್ ಬಾರ್ ಮುಂದಿನ ಬಾಟಲಿ ಹಿಡಿದು ಎಸೆದಿದ್ದರಿಂದ ಮಂಡಗಳಲೆಯ ನಿವಾಸಿ ಪರಶುರಾಮ್ ಎಂಬುವರು ಗಾಯಗೊಂಡಿದ್ದಾರೆ.
ದುಷ್ಕರ್ಮಿ ಬಾಟಲಿಯಿಂದ ಹೊಡೆಯುವಂತ ಹಲ್ಲೆಯ ವೀಡಿಯೋ ಈ ಕೆಳಗಿದೆ ಕ್ಲಿಕ್ ಮಾಡಿ ನೋಡಿ..
ರಾಜೇಶ್ ನಡೆಸಿದಂತ ಬಾಟಲಿಯ ಹಲ್ಲೆಯಿಂದಾಗಿ ಪರಶುರಾಮ್ ಅವರ ತುಟಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆ ಬಳಿಕ ಸಾಗರ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡುವಂತ ಸಂದರ್ಭದಲ್ಲಿ ಮುಖಂಡರು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಅಂದಹಾಗೇ ಮಾಸೂರಿನಲ್ಲಿರುವಂತ ನಾಗಾರ್ಜುನ ಬಾರ್ ಬಳಿಯಲ್ಲಿ ಇಂತಹ ಘಟನೆಗಳು ಮಾಮೂಲಿ ಎಂಬುದು ಹಲವರ ಮಾತಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಖಡಿವಾಣ ಹಾಕಿ, ಸಾರ್ವಜನಿಕರು ನೆಮ್ಮದಿಯಿಂದ ಬದುಕುವಂತ ವಾತಾವರಣವನ್ನು ಕಲ್ಪಿಸಿಕೊಡಲಿ ಎಂಬುದಾಗಿ ಒತ್ತಾಯಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill