ಹಾಸನ : ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದ್ದು, ಹೆತ್ತ ತಾಯಿಯೇ 6 ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲಿನಲ್ಲಿ ತಾಯಿಯೇ ಮಗಳನ್ನು ಮಾಡಿದ್ದಾಳೆ. ಸಾನ್ವಿ (6) ಕೊಲೆಯಾದ ಬಾಲಕಿ. ಶ್ವೇತಾ ಆರೋಪಿ.ಮಗಳನ್ನು ಬೆಳಿಗ್ಗೆ ತೋಟಕ್ಕೆ ಕರೆದೊಯ್ದು ನೀರಿನ ಗುಂಡಿಯಲ್ಲಿ ಮುಳುಗಿಸಿ ಕಾಲಿನಿಂದ ತುಳಿದು ಸಾಯಿಸಿದ್ದಾಳೆ.
ಗ್ರಾಮಸ್ಥರು ಅಲ್ಲಿಗೆ ಹೋಗಿ ನೋಡಿದಾಗ ಸಣ್ಣ ಗುಂಡಿಯಲ್ಲಿ ಸಾನ್ವಿ ಮೃತದೇಹ ಸಿಕ್ಕಿದೆ. ಈ ಬಗ್ಗೆ ಕೇಳಿದಾಗ ವಿಚ್ಛೇದನ ಸಿಕ್ಕ ಮೇಲೆ ಮಗಳನ್ನು ಗಂಡ ಕರೆದುಕೊಂಡು ಹೋಗುತ್ತಾನೆ, ಅದಕ್ಕೆ ಅವಕಾಶ ಆಗದಿರಲೆಂದು ಎಂದು ಕೊಲೆ ಮಾಡಿರುವುದಾಗಿ ಗ್ರಾಮಸ್ಥರ ಮುಂದೆ ಹೇಳಿದ್ದಾಳೆ.
ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಶ್ವೇತಾ ಅವರನ್ನು 2018ರಲ್ಲಿ ಶಿವಮೊಗ್ಗ ಮೂಲದ ರಘು ಅವರಿಗೆ ಮದುವೆ ಮಾಡಲಾಗಿತ್ತು. ಆದರೆ, ಮದುವೆಯಾದ ಎರಡು ವರ್ಷಗಳಲ್ಲೇ ದಂಪತಿಗಳ ನಡುವೆ ಜಗಳ ಶುರುವಾಯಿತು. ಕಳೆದ ನಾಲ್ಕು ವರ್ಷಗಳಿಂದ ಶ್ವೇತಾ ತನ್ನ ಪತಿಯಿಂದ ದೂರವಾಗಿದ್ದಳು. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಶ್ವೇತಾ, ಮಗಳ ಆರೈಕೆಯ ಜವಾಬ್ದಾರಿಯನ್ನು ರಘುವಿನ ಪೋಷಕರಿಗೆ ವಹಿಸಲಾಗಿತ್ತು. ಆದರೆ, ಶನಿವಾರ ಶ್ವೇತಾ ಸಾನ್ವಿಯನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದಳು.
ಸ್ಥಳಕೆ ಎಸ್ಪಿ ಮೊಹಮ್ಮದ್ ಸುಜಿತಾ, ಡಿವೈಎಸ್ಪಿ ಕುಮಾರ್, ಸಿಪಿಐ ಸಂತೋಷ್ ಭೇಟಿ ನೀಡಿದ್ದರು. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.