ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್‌ ಶಿರೂರು ತಾಯಿ ಬಸಮ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಗುರೂಜಿ ಸಾವಿನ ಸುದ್ದಿ ಕೇಳಿ ನಿಜಕ್ಕೂ ಶಾಕ್‌ ಆಗಿದೆ. ಆದರೆ ನನ್ನ ಮಗ ಯಾಕೆ ಹಾಗೆ ಮಾಡಿದ ಅಂತಾ ಗೊತ್ತಾಗಿಲ್ಲ. ನನಗೆ ವಿಷಯನೇ ಗೊರ್ತಿಲಿಲ್ಲ , ಟಿವಿ ನೋಡಿದ ಮೇಲೆ ಗೊತ್ತಾಗಿದ್ದು. ಗುರೂಜಿ ಜೊತೆ ಅವರ ಸಂಬಂಧ ಚೆನ್ನಾಗಿ ಇತ್ತು ಎಂದು ತಾಯಿ ಬೇಸರ ವ್ಯಕ್ತಪಡಿಸಿದ್ರು.

BIGG NEWS: ಗುರೂಜಿ ನಮಗೆ ದೇವರು, ತಂದೆಯ ತರ-ಹಂತಕನ ಪತ್ನಿ ವನಜಾಕ್ಷಿ ಕಣ್ಣೀರು

 

ನಾವು ಕಲಘಟಗಿಯಲ್ಲಿ ಇದ್ದೀವಿ. ಅವನ ಪಾಡಿಗೆ ದುಡಿದುಕೊಂಡು ಜೀವನ ಮಾಡುತ್ತಿದ್ದ. ಒಂದು ದಿನನೂ ಮಗ ಮತ್ತು ಸೊಸೆ ನಡುವೆ ಯಾವುದೇ ಜಗಳವಾಗಿರಲಿಲ್ಲ. ಅಪಾರ್ಟ್‌ ಮೆಂಟ್‌ , ಪ್ಲ್ಯಾಟ್‌ ಬಗ್ಗೆ ನನಗೆ ಏನು ಗೊತ್ತಿಲ್ಲ. ಆದರೆ  ಇದೀಗ ನನ್ನ ಮಗನ ಕೃತ್ಯ ನೋಡಿ ಶಾಕ್‌ ಆಯ್ತು ಎಂದು ಬೇಸರ ವ್ಯಕ್ತಪಡಿಸಿದ್ರು.

Share.
Exit mobile version