ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಗುರೂಜಿಯನ್ನು ದೇವರಂತೆ ಕಾಣುತ್ತಿದ್ದೆವು. ಅವರು ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ನನ್ನ ಗಂಡನೇ ಹತ್ಯೆ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದು ವನಜಾಕ್ಷಿ ಕಣ್ಣೀರು ಹಾಕಿದ್ದಾರೆ.
ನಾನು ೧೫ ವರ್ಷ ಗುರೂಜಿ ಜೊತೆ ಕೆಲಸ ಮಾಡಿದ್ದೆ. ಆಗಾ ಅವರು ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರು ನಮಗೆ ದೇವರು, ತಂದೆಯ ತರಹ ಎಂದು ಹೇಳಿದ್ದಾರೆ.
ಇನ್ನು ನನ್ನ ಮತ್ತು ಗಂಡ ಹತ್ತಿರ ಯಾವುದೇ ಬೇನಾಮಿ ಆಸ್ತಿ ಇಲ್ಲ. ಗುರೂಜಿ ನಮಗೆ ಆಸ್ತಿ ನೀಡಿರಲಿಲ್ಲ. ಒಂದೇ ಪ್ಲ್ಯಾಟ್ ಇತ್ತು. ಆದರೆ ಅದನ್ನ ಸಾಲ ಮಾಡಿ ಖರೀದಿ ಮಾಡಿದ್ದೀವಿ ಎಂದು ಬೇಸರ ವ್ಯಕ್ತಪಡಿದ್ರು.
Subscribe to Updates
Get the latest creative news from FooBar about art, design and business.