Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿಗೆ ಕಪಿಲ್ ಶರ್ಮಾ ಕೆಫೆ ಪ್ರತಿಕ್ರಿಯೆ | Kapil sharma cafe

11/07/2025 9:02 AM

SHOCKING : ಬೆಂಗಳೂರಲ್ಲಿ ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ‘ಲೈಂಗಿಕ ದೌರ್ಜನ್ಯ’ : `FIR’ ದಾಖಲು

11/07/2025 8:55 AM

Big News: 200 ಔಷಧಗಳ ಮೇಲಿನ ಆಮದು ಸುಂಕ ಸಡಿಲಿಸಲು ಕೇಂದ್ರ ಸರ್ಕಾರ ಚಿಂತನೆ

11/07/2025 8:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ವಿಶ್ವಗುರು ಭಾರತದೊಳಗೆ ಅಸ್ಪೃಶ್ಯಭಾರತ ಜೀವಂತ- ಹಿರಿಯ ಪತ್ರಕರ್ತ ಎನ್.ರವಿಕುಮಾರ್
KARNATAKA

ಶಿವಮೊಗ್ಗ: ವಿಶ್ವಗುರು ಭಾರತದೊಳಗೆ ಅಸ್ಪೃಶ್ಯಭಾರತ ಜೀವಂತ- ಹಿರಿಯ ಪತ್ರಕರ್ತ ಎನ್.ರವಿಕುಮಾರ್

By kannadanewsnow0913/09/2024 9:01 PM

ಶಿವಮೊಗ್ಗ: ವೈವಿಧ್ಯಮಯ ಭಾರತದೊಳಗೊಂದು ಅಸ್ಪೃಶ್ಯಭಾರತವಿದೆ. ಇದು ನಮಗೆ ಕಾಣಬೇಕಾದರೆ ನಾವು ಅಂಬೇಡ್ಕರ್ ಕಣ್ಣುಗಳಿಂದ ನೋಡಿದಾಗ ಮಾತ್ರ ಕಾಣುತ್ತದೆ ಎಂದು ಪತ್ರಕರ್ತ, ಚಿಂತಕ ಎನ್. ರವಿಕುಮಾರ್ ಹೇಳಿದರು.

ಬಹುಮುಖಿ ಆಯೋಜಿಸಿದ್ದ ’ದಲಿತ-ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದ ಅವರು,  ದಲಿತರು, ದಲಿತತ್ವ ಎಂಬುದರ ಕುರಿತು ಮಾತನಾಡುವುದು ಎಂದರೆ ಅಂತಿಮವಾಗಿ ಭಾರತದ ಮೂಲನಿವಾಸಿಗಳ ಅಸ್ತಿತ್ವ , ಅಸ್ಮಿತೆ ಮತ್ತು ಅವರು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸವಾಲುಗಳ ಕುರಿತು ಮಾತನಾಡುವುದೇ ಆಗಿದೆ. ದಿನ ನಿತ್ಯ ಭಾರತದಲ್ಲಿ ಜಾತಿ ಆಧಾರಿತ ಕ್ರೌರ್ಯ ನಡೆಯುತ್ತಿದ್ದು ಸ್ವಾತಂತ್ರ್ಯ ಬಂದ ನಂತರದಲ್ಲೂ ಮುಂದುವರೆದಿರುವುದು ವಿಪರ್ಯಾಸ ಎಂದರು.

ನಾವು ಇವತ್ತಿನ ವಿಶ್ವಗುರು ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ದೇಶದ ಸಾಮಾಜಿಕ ಸಂರಚನೆಯನ್ನು ಆರ್ಥಮಾಡಿಕೊಳ್ಳಬೇಕು. ಅಸಲಿಗೆ ಭಾರದಲ್ಲಿರುವುದು ಧರ್ಮವಲ್ಲ, ಜಾತಿ ಮಾತ್ರವೇ ಆಗಿದೆ ಎನ್ನುವುದಕ್ಕೆ ಜಾತಿ ಹೆಸರಿನಲ್ಲಿ ದಿನನಿತ್ಯ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಇಂದು ಜಾತೀಯತೆ ರೂಪಾಂತರವಾಗಿದೆಯೇ ವಿನಃ ಅದು ನಾಶವಾಗಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಹೋಗಿದ್ದರೆ ಭಾರತದ ದಲಿತರ ಪಾಡು ಇನ್ನಷ್ಟು ಭೀಕರವಾಗಿರುತ್ತಿತ್ತು. ಮನುಷ್ಯರನ್ನು ದೂರ ನಿಲ್ಲಿಸಿ ಮಾತನಾಡುವುದು ನಿವಾರಣೆಯಾಗಿದೆ ,ಆದರೆ ಅವರನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಳದೆ ದೂರವಿಟ್ಟು ಯಾವುದೋ ಕಾಲವಾಗಿದೆ. ಜೊತೆಯಲ್ಲಿ ಉಣ್ಣುವುದು, ಓಡಾಡುವುದು ಇದ್ದರೂ ಅಂತಿಮವಾಗಿ ಜಾತಿಗೆ ಬಂದು ನಿಲ್ಲುತ್ತಾರೆ ಎಂದು ರವಿಕುಮಾರ್ ವಿಶ್ಲೇಷಿಸಿದರು.

ಜಾತಿಯತೆ ಜೀವಂತವಾಗಿರುವಾಗಲೂ ಸಂವಿಧಾನದ ಸೌಲತ್ತುಗಳನ್ನು ಪಡೆದುಕೊಂಡ ದಲಿತರು ತಮ್ಮ ಅಸ್ಮಿತೆಯನ್ನು ಮರೆಮಾಚಿಕೊಳ್ಳಲು ಸವರ್ಣ ಸಂಸ್ಕೃತಿಯ ಧರಿಸಲು ತವಕಿಸುತ್ತಿದ್ದಾರೆ. ಇದು ದಲಿತತ್ವದಲ್ಲಿ ಅಡಗಿರುವ ವೈಚಾರಿಕತೆಗೆ ಬಗೆವ ದ್ರೋಹವೇ ಆಗಿದೆ. ಇಂದು ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲೂ ಸಮಾಜ ಜಾತಿಯನ್ನು ನೋಡುತ್ತಿದೆ. ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಹತ್ಯೆಗಳಿಗೆ ಸಮಾಜ ಒಕ್ಕೊರಲಿನಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇಂದು ಜಾತಿ-ಜಾತಿಗಳ ನಡುವೆ ಸಮಾನತೆ ತರುವ ಮೂಲಕ ಜಾತ್ಯಾತೀತ ಭಾರತವನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಶೋಷಕ ಜಾತಿಗಳು ಶೋಷಿತ ಜಾತಿಗಳ ಬಗೆಗೆ ಅಂತಃಕರಣ, ಸಮಭಾವದಿಂದ ನೋಡಬೇಕು. ಇದೇ ಬುದ್ದಭಾರತದ ಮರುಹುಟ್ಟು ಎಂದು ಎನ್. ರವಿಕುಮಾರ್ ಕರೆ ನೀಡಿದರು.

ಕಾರ್ಯಕ್ರಮವನ್ನು ಕೆ.ಜಿ ವೆಂಕಟೇಶ್ ನಿರೂಪಿಸಿದರು. ಬಹುಮುಖಿಯ ಪ್ರೋ.ಹೆಚ್. ಎಸ್ ನಾಗಭೂಷಣ್ ಉಪಸ್ಥಿತರಿದ್ದರು.

ಕೆಲವು ದೇಶಗಳಲ್ಲಿ ಬಳಸಲು ‘ಎಂಪಾಕ್ಸ್’ ವಿರುದ್ಧ ವಿಶ್ವದ ಮೊದಲ ಲಸಿಕೆಗೆ ‘WHO’ ಅನುಮೋದನೆ | Mpox MVA-BN vaccine

BREAKING: ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ | Nandini Milk Price Hike

Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಲ್ಲಿ ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ‘ಲೈಂಗಿಕ ದೌರ್ಜನ್ಯ’ : `FIR’ ದಾಖಲು

11/07/2025 8:55 AM1 Min Read

SHOCKING : ಬೆಳಗಾವಿಯಲ್ಲಿ ಎದೆನೋವಿನಿಂದ ಕುಸಿದು ಬಿದ್ದು `ಹೃದಯಾಘಾತ’ದಿಂದ ಯೋಧ ಸಾವು.!

11/07/2025 8:31 AM1 Min Read

Rain Alert : ರಾಜ್ಯಾದ್ಯಂತ ಜುಲೈ 15ರ ಬಳಿಕ `ಮುಂಗಾರು ಮಳೆ’ ಚುರುಕು : ಹವಾಮಾನ ಇಲಾಖೆ ಮುನ್ಸೂಚನೆ

11/07/2025 8:27 AM1 Min Read
Recent News

ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿಗೆ ಕಪಿಲ್ ಶರ್ಮಾ ಕೆಫೆ ಪ್ರತಿಕ್ರಿಯೆ | Kapil sharma cafe

11/07/2025 9:02 AM

SHOCKING : ಬೆಂಗಳೂರಲ್ಲಿ ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ‘ಲೈಂಗಿಕ ದೌರ್ಜನ್ಯ’ : `FIR’ ದಾಖಲು

11/07/2025 8:55 AM

Big News: 200 ಔಷಧಗಳ ಮೇಲಿನ ಆಮದು ಸುಂಕ ಸಡಿಲಿಸಲು ಕೇಂದ್ರ ಸರ್ಕಾರ ಚಿಂತನೆ

11/07/2025 8:52 AM

ಮತದಾರರ ಪರಿಶೀಲನೆಯಲ್ಲಿ ಆಧಾರ್ , EPIC ಜೊತೆಗೆ ಪಡಿತರ ಚೀಟಿಯನ್ನು ಪರಿಗಣಿಸಿ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶ

11/07/2025 8:48 AM
State News
KARNATAKA

SHOCKING : ಬೆಂಗಳೂರಲ್ಲಿ ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ‘ಲೈಂಗಿಕ ದೌರ್ಜನ್ಯ’ : `FIR’ ದಾಖಲು

By kannadanewsnow5711/07/2025 8:55 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು ಯಂತ್ರದಾರ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿ…

SHOCKING : ಬೆಳಗಾವಿಯಲ್ಲಿ ಎದೆನೋವಿನಿಂದ ಕುಸಿದು ಬಿದ್ದು `ಹೃದಯಾಘಾತ’ದಿಂದ ಯೋಧ ಸಾವು.!

11/07/2025 8:31 AM

Rain Alert : ರಾಜ್ಯಾದ್ಯಂತ ಜುಲೈ 15ರ ಬಳಿಕ `ಮುಂಗಾರು ಮಳೆ’ ಚುರುಕು : ಹವಾಮಾನ ಇಲಾಖೆ ಮುನ್ಸೂಚನೆ

11/07/2025 8:27 AM

SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!

11/07/2025 8:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.