Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

07/03/2026 9:19 PM

‘ಇದು ಐತಿಹಾಸಿಕ ಮೈಲಿಗಲ್ಲು’ : ನೇಪಾಳದಲ್ಲಿ ‘ಬಾಲೇಂದ್ರ ಶಾ’ ಗೆಲುವಿಗೆ ‘ಪ್ರಧಾನಿ ಮೋದಿ’ ಅಭಿನಂದನೆ

07/03/2026 9:03 PM

ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವಲ್ಲಿ ನಂಬಿಕೆ ಇಲ್ಲ- ಮಾಜಿ ಸಚಿವ ಹರತಾಳು ಹಾಲಪ್ಪ

07/03/2026 8:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸೊರಬದ ಕಂತನಹಳ್ಳಿಯಲ್ಲಿ ಅಕ್ರಮ ಮರ ಕಡಿತಲೆ ಮಾಡಿದ ‘ಮೂವರು ಅರೆಸ್ಟ್’
KARNATAKA

ಶಿವಮೊಗ್ಗ: ಸೊರಬದ ಕಂತನಹಳ್ಳಿಯಲ್ಲಿ ಅಕ್ರಮ ಮರ ಕಡಿತಲೆ ಮಾಡಿದ ‘ಮೂವರು ಅರೆಸ್ಟ್’

By kannadanewsnow5706/02/2025 8:43 PM

ಶಿವಮೊಗ್ಗ : ಜಿಲ್ಲೆಯ ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಂತನಹಳ್ಳಿ ಗ್ರಾಮದ ಸ.ನಂ:08 ರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಪ್ರಕರಣ ಸಂಬಂಧ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಮೂವರನ್ನು ಬಂಧಿಸಿದ್ದಾರೆ.

ಈ ಕುರಿತು ಸೊರಬ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷ ಅಂಗಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೆರೆಗೆ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಮರ ಕಡಿತಲೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಸ್ಥಳದಲ್ಲೆ 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

1ನೇ ಆರೋಪಿಯಾದ ಕೃಷ್ಣಮೂರ್ತಿ ಬಿನ್ ಶ್ರೀಕಾಂತ್ ಗುಂಜನೂರು ಗ್ರಾಮ ಸೊರಬ (ತಾ), 2ನೇ ಆರೋಪಿಯಾದ ಅನೀಲ್ ಕುಮಾರ್ ಬಿನ್ ಚಂದ್ರಪ್ಪ ಗುಂಜನೂರು ಗ್ರಾಮ ಸೊರಬ (ತಾ) ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ. ಸದರಿ ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಮತ್ತೋರ್ವ 03 ನೇ ಆರೋಪಿಯಾದ ಪುಟ್ಟರಾಜ ಗೌಡ ಬಿನ್ ಬಾಲಚಂದ್ರ ಗುಂಜನೂರು ಗ್ರಾಮ ಸೊರಬ (ತಾ), ಜೆ.ಎಂ.ಎಪ್,ಸಿ ವ್ಯವಹಾರಿಕ ನ್ಯಾಯಾಲಯ ಸೊರಬರಿಂದ ಅನುಮತಿ ಪಡೆದು ಸದರಿಯವರ ಮೇಲೆ ಅರಣ್ಯ ಮೊಕದ್ದಮೆ ಸಂಖ್ಯೆ:40/2024-25 ದಿನಾಂಕ:23.01.2025 ಅನ್ನು ದಾಖಲಿಸಿ. ಬಂದಿತರಿಂದ 02 ಮರ ಕುಯ್ಯುವ ಯಂತ್ರಗಳನ್ನು ಹಾಗೂ 22 ನಾಟಾ ತುಂಡುಗಳಿಂದ=2.976 ಅಂದಾಂಜು ಮೊತ್ತ ರೂ. 47,000 ಹಾಗೂ ಸೌದೆ= 5.000ಎಂ3 ಅಂದಾಜು ಮೊತ್ತ ರೂ. 3,000 ಒಟ್ಟು ಮೊತ್ತ ರೂ. 50,000 ಇಲಾಖಾ ಪರ ಜಪ್ತು ಪಡಿಸಲಾಗಿರುತ್ತದೆ ಎಂದಿದ್ದಾರೆ.

ಸದರಿ ಪ್ರದೇಶವು ಇಲಾಖಾ ವಶದಲ್ಲಿದ್ದು ಒತ್ತುವರಿ ತಡೆಯುವ ದೃಷ್ಟಿಯಿಂದ ಜಾನುವಾರು ನಿರೋಧಕ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಇನ್ನೂ ಕೆಲವು ಜನರು ಬಾಗಿಯಾಗಿರಬಹುದಾದ ಸಂಶಯವಿದ್ದು ವಲಯ ಅರಣ್ಯಾಧಿಕಾರಿಯವರಿಂದ ತನಿಖೆ ನಡೆಸಲಾಗುತ್ತಿದೆ. ಕಂತನಹಳ್ಳಿ ಕಿರು ಅರಣ್ಯ ಪ್ರದೇಶವಾಗಿದ್ದು, ಸದರಿ ಪ್ರದೇಶದಲ್ಲಿ ಈಗಾಗಲೆ ಕೆಲವರಿಗೆ ಅಕ್ರಮ ಮಂಜೂರಾತಿಯಾಗಿದ್ದು, ಅಕ್ರಮ ಮಂಜುರಾತಿಯನ್ನು ರದ್ದುಗೊಳಿಸುವಂತೆ ಮಾನ್ಯ ಉಪ ವಿಭಾಗಾಧಿಕಾರಿಗಳು ಸಾಗರ ಉಪ ವಿಭಾಗ, ಸಾಗರ ಅವರಿಗೆ ಮೇಲ್ಮನವಿ ಸಲ್ಲಿಸಲಾಗಿರುತ್ತದೆ ಎಂದು ಹೇಳುತ್ತಾರೆ.

ಉಳಿದ ಒತ್ತುವರಿದಾರರ ವಿರುದ್ಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸೊರಬ ಉಪ ವಿಭಾಗ ಸೊರಬರವರಿಗೆ ಒತ್ತುವರಿ ತೆರವುಗೊಳಿಸಲು 64 (ಎ)ರಡಿ ವಿಚಾರಣೆ ನೆಡೆಸಿ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನ ಸಲ್ಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸದರಿ ಪ್ರಕರಣವನ್ನು ಪತ್ತೇಹಚ್ಚುವಲ್ಲಿ ಮೋಹನ್‌ ಕುಮಾರ್ ಡಿ.,(ಭಾ.ಅ.ಸೇ) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ವಿಭಾಗ, ಸಾಗರ ಮತ್ತು ಸುರೇಶ್ ಅರ್ಜುನ್ ಕುಳೊಳ್ಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸೊರಬ ಉಪ ವಿಭಾಗ ಸೊರಬರವರ ಮಾರ್ಗದರ್ಶನದಲ್ಲಿ, ಜಾವೆದ್ ಬಾಷಾ ಅಂಗಡಿ, ವಲಯ ಅರಣ್ಯಾಧಿಕಾರಿಗಳು, ಸೊರಬ ವಲಯ, ಸೊರಬರವರ ಮುಂದಾಳತ್ವದಲ್ಲಿ ಗುಂಜನೂರು ಶಾಖಾ ಉಪ ವಲಯ ಅರಣ್ಯಾಧಿಕಾರಿಯಾದ ಶರಣಪ್ಪ ಎಂ. ವೈ., ಆನಂದ ಗಸ್ತು ಅರಣ್ಯ ಪಾಲಕ, ಹರೀಶ.ವಿ., ಗಸ್ತು ಅರಣ್ಯ ಪಾಲಕ ಮುಂತಾದವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Shivamogga: Three arrested for illegal tree felling at Kanthanahalli in Soraba ಶಿವಮೊಗ್ಗ: ಸೊರಬದ ಕಂತನಹಳ್ಳಿಯಲ್ಲಿ ಅಕ್ರಮ ಮರ ಕಡಿತಲೆ ಮಾಡಿದ 'ಮೂವರು ಅರೆಸ್ಟ್'
Share. Facebook Twitter LinkedIn WhatsApp Email

Related Posts

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

07/03/2026 9:19 PM2 Mins Read

ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವಲ್ಲಿ ನಂಬಿಕೆ ಇಲ್ಲ- ಮಾಜಿ ಸಚಿವ ಹರತಾಳು ಹಾಲಪ್ಪ

07/03/2026 8:26 PM1 Min Read

ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

07/03/2026 8:14 PM1 Min Read
Recent News

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

07/03/2026 9:19 PM

‘ಇದು ಐತಿಹಾಸಿಕ ಮೈಲಿಗಲ್ಲು’ : ನೇಪಾಳದಲ್ಲಿ ‘ಬಾಲೇಂದ್ರ ಶಾ’ ಗೆಲುವಿಗೆ ‘ಪ್ರಧಾನಿ ಮೋದಿ’ ಅಭಿನಂದನೆ

07/03/2026 9:03 PM

ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವಲ್ಲಿ ನಂಬಿಕೆ ಇಲ್ಲ- ಮಾಜಿ ಸಚಿವ ಹರತಾಳು ಹಾಲಪ್ಪ

07/03/2026 8:26 PM

ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

07/03/2026 8:14 PM
State News
KARNATAKA

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

By kannadanewsnow0907/03/2026 9:19 PM KARNATAKA 2 Mins Read

ಉತ್ತರ ಕನ್ನಡ: ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು ಪರಿಗಣಿಸಲಾಗಿದ್ದು, 2022 ವರ್ಷದ ಅಂಕಿ ಅಂಶಗಳ…

ನನಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವಲ್ಲಿ ನಂಬಿಕೆ ಇಲ್ಲ- ಮಾಜಿ ಸಚಿವ ಹರತಾಳು ಹಾಲಪ್ಪ

07/03/2026 8:26 PM

ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

07/03/2026 8:14 PM

ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯ ಪರಿಕಲ್ಪನೆಯನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿದೆ: ತೀ.ನ.ಶ್ರೀನಿವಾಸ್ ಕಿಡಿ

07/03/2026 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.