ಶಿವಮೊಗ್ಗ: ಜಿಲ್ಲೆಯ ಸಾಗರದ ಮರ್ಕಝ್ ಮ್ಯಾನೇಜರ್ ಶರೀಫ್ ಸಖಾಫಿ ಅವರು ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮರ್ಕಝ್ ಮ್ಯಾನೇಜರ್ ಶರೀಫ್ ಸಖಾಫಿ ಅವರು ಶಿಕ್ಷಣ ಪ್ರೇಮಿಯೆಂದೇ ಗುರುತಿಸಿಕೊಂಡಿದ್ದಂತವರು. ಕಳೆದ 15 ವರ್ಷಗಳಿಂದ ಮರ್ಕಝ್ ಸಂಸ್ಥೆಯ ಜವಾಬ್ದಾರಿ ಹೊತ್ತು, ಶಿಕ್ಷಣ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.
ಹಗಲು ರಾತ್ರಿಯೆನ್ನದೇ ಶಿಕ್ಷಣ ಸೇವೆಗೈಯ್ಯುತ್ತಿದ್ದಂತ ಶರೀಫ್ ಸಖಾಫಿ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣ ಪ್ರೇಮಿಯೆಂದೇ ಪ್ರಸಿದ್ಧಿ. ಇವರ ಪರಿಶ್ರಮದಿಂದಾಗಿ ಮರ್ಕಝ್ ಮೈದಾನ ಎದ್ದು ಕಾಣುವಂತೆ ಆಗಿದೆ. ಮರ್ಕಝ್ ಸಂಸ್ಥೆಯಿಂದ ಎಲ್ ಕೆಜಿಯಿಂದ ಪಿಯು ಕಾಲೇಜುವರೆಗೆ ಶಿಕ್ಷಣವನ್ನು ಸಿಗುವಂತೆ ಮಾಡಿದ್ದರು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಮರ್ಕಝ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ, ಶೇ.100ರಷ್ಟು ಫಲಿತಾಂಶ ಶಾಲಾ-ಕಾಲೇಜಿಗೆ ಬರುತ್ತಿದ್ದರ ಹಿಂದೆ ಶರೀಫ್ ಸಖಾಫಿ ಅವರ ಪಾತ್ರವಿತ್ತು.
ಇಂತಹ ಶರೀಫ್ ಸಖಾಫಿ ಅವರು ಅನಾರೋಗ್ಯದ ಕಾರಣದಿಂದ ಕೆಲ ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಈ ಮೂಲಕ ಸೌಮ್ಯ ಸ್ವಭಾವದ, ಸಮಾಜದ ಏಳಿಗೆ ಬಯಸುತ್ತಾ, ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿದ್ದಂತ ಶಿಕ್ಷಣ ಪ್ರೇಮಿ ಶರೀಫ್ ಸಖಾಫಿ ಅವರು ಇನ್ನಿಲ್ಲವಾಗಿದ್ದಾರೆ. ಅವರ ನಿಧನಕ್ಕೆ ಶಿವಮೊಗ್ಗ, ಸಾಗರದ ಸಮುದಾಯದ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿಂದು 41 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದಂತ 48 ಮಂದಿ ಡಿಸ್ಚಾರ್ಜ್
ಬೆಂಗಳೂರು ಕಾಲ್ತುಳಿತ ದುರಂತ ಕೇಸ್: ಸಿಎಂ, ಡಿಸಿಎಂ ರಾಜೀನಾಮೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ