ಶಿವಮೊಗ್ಗ: ರಂಗಭೂಮಿ ಎನ್ನುವ ಪದದಲ್ಲಿ ಭೂಮಿ ಎನ್ನುವ ಪದವಿದೆ. ಭೂಮಿ ಎಂದರೆ ಹೆಣ್ಣು, ಫಲವತ್ತತೆ. ಹೀಗಾಗಿ ಹೆಣ್ಣು ರಂಗಭೂಮಿಯ ಅವಿಭಾಜ್ಯ ಅಂಗವೆಂದು ಖ್ಯಾತ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅಭಿಪ್ರಾಯ ಪಟ್ಟರು.
ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ಮತ್ತು ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿದ್ದ ರಂಗಭೂಮಿ ಮತ್ತು ಮಹಿಳೆ ಎಂಬ ವಿಶೇಷ ಉಪನ್ಯಾಸ ನೀಡುತ್ತಾ ಹೇಳಿದರು.
ಗಂಡಾಳ್ವಿಕೆಯ ನೆಲೆಯಲ್ಲಿ ರಂಗಭೂಮಿ ಚಟುವಟಿಕೆ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಹಲವು ಮಹಿಳಾ ಹೋರಾಟಗಾರರು, ಬರಹಗಾರರು ಸೌಂದರ್ಯ ಸ್ಪರ್ಧೆಯ ಸಮಯದಲ್ಲಿ ಸಿಡಿದು ವಿರೋಧಿಸಿದರು ಎಂದರು.
ರಂಗಭೂಮಿ ಸಾಹಿತ್ಯ, ಪ್ರದರ್ಶನ ಮತ್ತು ತಾಂತ್ರಿಕ ಅಂಶವನ್ನು ಒಳಗೊಂಡಿರುತ್ತದೆ. ಇಲ್ಲಿ ಆಡುವವರು, ನೋಡುವವರು ಇರಬೇಕು. ಕೆಲವು ಮನುಷ್ಯರು ಹಲವು ಮನುಷ್ಯರ ಜೊತೆಗೆ ಮನುಷ್ಯರ ಕಥೆಗಳನ್ನ ಹೇಳುತ್ತಾರೆ. ಇವರು ರಂಗಭೂಮಿ ಜಗತ್ತಿನ ಎಲ್ಲ ಅವಸ್ಥೆಗಳನ್ನು ನೋಡಲು ಇರುವ ಒಂದು ಜಾತ್ಯಾತೀತ ಸ್ಪೇಸ್. ನಾಲ್ಕು ವೇದಗಳು ಜನ ಸಮಾನ್ಯರಿಗೆ ಅರ್ಥವಾಗದೆ ಇರುವ ಕಾರಣಕ್ಕೆ ನಾಟ್ಯವೇದದ ಹುಟ್ಟಿಗೆ ಕಾರಣವಾಯಿತು. ಇದರಲ್ಲಿ ಮಹಿಳೆಗೆ ಪ್ರಮುಖ ಪಾತ್ರವಿದೆ ಎಂದರು.
ಭರತನ ನಾಟ್ಯಶಾಸ್ತ್ರ ಚಲಿಸುತ್ತಿರು ಪಠ್ಯ. ಆದರೆ ವಿದೇಶದಲ್ಲಿ ಹದಿನಾರನೇ ಶತಮಾನದಲ್ಲಿ ಮಹಿಳೆ ವೇದಿಕೆಯಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಯಿತು. ಭೀಕರ ಯುದ್ದಗಳನ್ನು ನಿಲ್ಲಿಸುವ ಸಾಮರ್ಥ್ಯ ಮಹಿಳೆಯರಿಗೆ ಇದೆ. ಇವರು ಹೆಣ್ಣನ್ನು ಆಸ್ತಿಯಂತೆ ನೋಡುತ್ತಿದ ಗಂಡು ಸಮಾಜ ರಂಗಭೂಮಿಯಲ್ಲೂ ಇದೆ ಕೆಲಸ ಮಾಡಿಕೊಂಡು ಬಂದಿದೆ ಎಂದು ಅವರು ಹೇಳಿದರು.
ಡಿಜಿಟಲ್ ಮೀಡಿಯಾ ಅಧ್ಯಕ್ಷ ಹೆಚ್.ಬಿ. ರಾಘವೇಂದ್ರ ಮಾತನಾಡಿ ಅಂಚಿಗೆ ಸರಿಸಲ್ಪಟ್ಟ ಮಹಿಳಾ ವಿಚಾರಗಳನ್ನು ಹಲವು ನಾಟಕಕಾರರು ಮತ್ತು ಬರಹಗಾರರು ಮುನ್ನಲೆಗೆ ತಂದು ಬಿಡುಗಡೆಯ ಮಾರ್ಗ ತೋರಿದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಹೆಚ್. ರಾಜೇಶ್ವರಿ ಅವರು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅಗಾಧವಾದ ಅವಕಾಶವಿದೆ. ಬಳಸಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಿಎಂಪಿಸಿ ಕಾರ್ಯದರ್ಶಿ ರಾಘವೇಂದ್ರ ತಾಳಗುಪ್ಪ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಾರುತಿಗೌಡ ಪ್ರಸ್ತಾವಿಕ ಮಾತುಗಳನ್ನ ಆಡಿದರು. ಕನ್ನಡ ವಿಭಾಗದ ಮುಖ್ಯಸ್ಥ ರಾಜು ವಂದಿಸಿದರು. ಕು.ನೇಹಾ ಮತ್ತು ವಸಂತ್ ಕುಗ್ವೆ ರಂಗಗೀತೆಗಳನ್ನು ಆಡಿದರು. ಕು. ಸಿಂಚನ ನಿರೂಪಿಸಿದರು. ಈ ವೇಳೆ ಅಣ್ಣಪ್ಪ ಕೆಳದಿಪುರ, ಸಂದೀಪ್ ಸಾಗರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಾಗಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ, ಸಾಗರ
BREAKING : 18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ | Om Birla
BREAKING : ಅಬಕಾರಿ ನೀತಿ ಹಗರಣ : ʻCBIʼ ನಿಂದ ದೆಹಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ | Arvind Kejriwal arrested