Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಿರುಪತಿ ತಿಮ್ಮಪ್ಪನಿಗೆ ಭಕ್ತನಿಂದ ಬರೋಬ್ಬರಿ 121 ಕೆಜಿ `ಚಿನ್ನ’ ಕಾಣಿಕೆ : ವಿಡಿಯೋ ವೈರಲ್ | WATCH VIDEO

20/08/2025 7:45 AM

BIG NEWS : ಕ್ರಿಮಿನಲ್ ಕೇಸ್ ಗಳಲ್ಲಿ ಪ್ರಧಾನಿ, ಸಿಎಂ, ಸಚಿವರ ಬಂಧನವಾದ್ರೆ ಹುದ್ದೆಯಿಂದ ವಜಾ : ಇಂದು ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆ ಮಂಡನೆ

20/08/2025 7:35 AM

ಗುಂಡಿಗಳಿಂದ ಕೂಡಿದ, ಜನದಟ್ಟಣೆಯಿಂದ ಕೂಡಿದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವಿಲ್ಲ: ಸುಪ್ರೀಂ ಕೋರ್ಟ್

20/08/2025 7:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ‘ಸಾಗರ ಗಂಗೋತ್ರಿ B.Ed’ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ‘ಕುವೆಂಪು ವಿವಿ’ ಅನುಮತಿ
KARNATAKA

ಶಿವಮೊಗ್ಗ: ‘ಸಾಗರ ಗಂಗೋತ್ರಿ B.Ed’ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ‘ಕುವೆಂಪು ವಿವಿ’ ಅನುಮತಿ

By kannadanewsnow0915/08/2024 9:30 PM

ಶಿವಮೊಗ್ಗ: 2023-24ನೇ ಸಾಲಿನ ಪ್ರಥಮ ಸೆಮಿಸ್ಟರ್ ಬಿಇಡಿ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯುವುದಕ್ಕೆ ಕುವೆಂಪು ವಿಶ್ವವಿದ್ಯಾಲಯವು ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿದು ಬಂದಿದೆ.

NCTEಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಉಳ್ಳೂರಿನಲ್ಲಿರುವಂತ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ದಿನಾಂಕ 14-12-2023ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಸಂಯೋಜನೆಯನ್ನು ಮುಂದಿನ ಆದೇಶದವರೆಗೂ ರದ್ದುಪಡಿಸಲಾಗಿದೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಇದಷ್ಟೇ ಅಲ್ಲದೇ 2023-24ನೇ ಸಾಲಿನಿಂದ ಬಿ.ಎಡ್ ಗೆ ಹೊಸ ದಾಖಲಾತಿಗಳನ್ನು ಮಾಡಿಕೊಳ್ಳಲು ಅವಕಾಶವಿಲ್ಲ. ಕುವೆಂಪು ವಿವಿಯ ಅಭಿವೃದ್ಧಿ ಪರಿಷತ್ ಕಾರ್ಯಾಲಯವು 2023-24ನೇ ಸಾಲಿನ ಸಂಯೋಜನೆಯನ್ನು ಹಿಂಪಡೆಯಲಾಗಿದೆ ಎಂಬುದಾಗಿಯೂ ಸ್ಪಷ್ಟವಾಗಿ ತಿಳಿಸಿತ್ತು.

ಆದರೇ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಈ ವಿಷಯವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಸಾಗರ ಗಂಗೋತ್ರಿಯ ಮನವಿಯನ್ನು ಪುರಸ್ಕರಿಸಿ, ಎನ್ ಸಿ ಟಿ ಇಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ದಿನಾಂಕ 06-02-2024ರಂದು ಸೂಚಿಸಿತ್ತು.

NCTEಯ ಅಫೀಲ್ ಕಮಿಟಿ ಹಾಗೂ ಪ್ರಾದೇಶಿಕ ಸಮಿತಿಯು ಚರ್ಚಿಸಿ, ಕರ್ನಾಟಕ ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿತ್ತು. ಅಲ್ಲದೇ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತ್ತು. ಆದರೇ ಸೂಕ್ತ ದಾಖಲೆಗಳನ್ನು ಆಡಳಿತ ಮಂಡಳಿ ಸಲ್ಲಿಸದ ಕಾರಣ, ಮಾನ್ಯತೆ ನೀಡಲು ನಿರಾಕರಿಸಿತ್ತು.

ಹೀಗಾಗಿ ಮತ್ತೆ ಮತ್ತೆ ಕರ್ನಾಟಕ ಹೈಕೋರ್ಟ್ ಗೆ ಸಾಗರ ಗಂಗೋತ್ರಿ ಶಿಕ್ಷಣ ಮಹಾ ವಿದ್ಯಾಲಯದ ಆಡಳಿತ ಮಂಡಳಿಯು ಮೇಲ್ಮನವಿಯನ್ನು ಸಲ್ಲಿಸಿತ್ತು. ದಿನಾಂಕ 08-08-2024ರಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅದರಲ್ಲಿ 2023-24ನೇ ಸಾಲಿನ ಸಾಗರ ಗಂಗೋತ್ರಿ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಹಾಗೂ ಪ್ರಥಮ ಸೆಮಿಸ್ಟರ್ ಬಿಎಡ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಧ್ಯಂತ ಆದೇಶವನ್ನು ಮಾಡಿತ್ತು. ಅಲ್ಲೇ ಮುಂದಿನ ಅಂತಿಮ ಆದೇಶಕ್ಕೆ ಒಳಪಡುವ ಷರತ್ತು ವಿಧಿಸಿತ್ತು.

ಕೋರ್ಟ್ ಆದೇಶದ ಕಾರಣ ಕುವೆಂಪು ವಿವಿಯಿಂದ ಮೊದಲ ಸೆಮಿಸ್ಟರ್ ಬಿಎಡ್ ಪರೀಕ್ಷೆಗೆ ಅವಕಾಶ ನೀಡುಲಾಗುತ್ತಿದೆ. ಅಲ್ಲದೇ ಆಗಸ್ಟ್.16ರಿಂದ ಆರಂಭಗೊಳ್ಳುತ್ತಿರುವಂತ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುತ್ತಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಕುವೆಂಪು ವಿವಿಯ ರಿಜಿಸ್ಟರ್ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವರನ್ನು ಅವರನ್ನು ಕನ್ನಡ ನ್ಯೂಸ್ ನೌ ಸಂಪರ್ಕಿಸಿತು. ಅವರು ಹೈಕೋರ್ಟ್ ಆದೇಶವಿದೆ. ಅದರಂತೆ ಕುವೆಂಪು ವಿಶ್ವವಿದ್ಯಾಲಯದಿಂದ ಸಾಗರ ಗಂಗೋತ್ರಿ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡುತ್ತಿರುವುದಾಗಿ ಮೌಖಿಕವಾಗಿ ಸ್ಪಷ್ಟ ಪಡಿಸಿದ್ದಾರೆ.

ಸದ್ಯಕ್ಕೆ ತಾತ್ಕಾಲಿಕವಾಗಿ ಸಾಗರ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿಗೆ ರಿಲೀಫ್ ಸಿಕ್ಕಂತೆ ಆಗಿದೆ. ಆದರೇ ಪರೀಕ್ಷೆಯನ್ನು ಬರೆದಂತ ವಿದ್ಯಾರ್ಥಿಗಳ ಫಲಿತಾಂಶವನ್ನು ಕುವೆಂಪು ವಿವಿ ಪ್ರಕಟಿಸುತ್ತೋ ಇಲ್ಲವೋ ಗೊತ್ತಿಲ್ಲ. ಕಾರಣ ಹೈಕೋರ್ಟ್ ಸೂಚನೆ ಪರೀಕ್ಷೆಗೆ ಪೀಸ್ ಕಟ್ಟಿಸಿಕೊಂಡು, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಮಾತ್ರವೇ ಸೂಚಿಸಲಾಗಿದೆ. ಇದರ ನಡುವೆ ಇನ್ನುಳಿದಂತ ಸಾಗರ ಗಂಗೋತ್ರಿ ಶಿಕ್ಷಣ ಮಹಾ ವಿದ್ಯಾಲಯದ ಬಿಎಡ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಅವಕಾಶ ನೀಡುತ್ತೋ ಇಲ್ಲವೋ ಎಂಬ ಡೋಲಾಯಮಾನ ಸ್ಥಿತಿಯಂತೂ ಮುಂದುವರೆದಿದೆ.

ಇನ್ನೂ ಒಂದಂತೂ ಸತ್ಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯವು NCTEಯಿಂದ ಮಾನ್ಯತೆಯನ್ನು ಪಡೆದಿಲ್ಲ. ಕುವೆಂಪು ವಿಶ್ವವಿದ್ಯಾಲಯದಿಂದ ಸಂಯೋಜನೆಯನ್ನು ನೀಡಲಾಗಿಲ್ಲ. ಇದು ದೊರೆತಾಗ ಮಾತ್ರವೇ 2023-24ನೇ ಸಾಲಿಗೆ ಬಿಎಡ್ ವ್ಯಾಸಂಗಕ್ಕೆ ದಾಖಲಾಗಿರುವಂತ ವಿದ್ಯಾರ್ಥಿಗಳು ನಿರಾಳವಾಗುವಂತೆ ಆಗಲಿದೆ. ಇಲ್ಲವಾದಲ್ಲಿ ಮುಂದೆಯೂ ಅತಂತ್ರ ಸ್ಥಿತಿಯಂತೂ ಮುಂದುವರೆಯೋದು ಗ್ಯಾರಂಟಿ.

ವರದಿ: ಉಮೇಶ್ ಮೊಗವೀರ, ಸಾಗರ

BREAKING: BJP ಹಿರಿಯ ನಾಯಕ, ಮಾಜಿ ಶಾಸಕ ಎ.ಎಸ್ ಬಸವರಾಜು ವಿಧಿವಶ | A.S Basavaraju No More

GOOD NEWS : 545 ‘PSI’ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ಪತ್ರ ವಿತರಣೆ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

vidhana soudha

BIG NEWS : ವಿಧಾನ ಸಭೆಯಲ್ಲಿ `ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ’ ಅಂಗೀಕಾರ.!

20/08/2025 6:53 AM1 Min Read

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

20/08/2025 6:51 AM1 Min Read

ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ : ಷರತ್ತಿನಡಿ ‘ಬಗರ್ ಹುಕುಂ’ ಮಂಜೂರು.!

20/08/2025 6:36 AM3 Mins Read
Recent News

ತಿರುಪತಿ ತಿಮ್ಮಪ್ಪನಿಗೆ ಭಕ್ತನಿಂದ ಬರೋಬ್ಬರಿ 121 ಕೆಜಿ `ಚಿನ್ನ’ ಕಾಣಿಕೆ : ವಿಡಿಯೋ ವೈರಲ್ | WATCH VIDEO

20/08/2025 7:45 AM

BIG NEWS : ಕ್ರಿಮಿನಲ್ ಕೇಸ್ ಗಳಲ್ಲಿ ಪ್ರಧಾನಿ, ಸಿಎಂ, ಸಚಿವರ ಬಂಧನವಾದ್ರೆ ಹುದ್ದೆಯಿಂದ ವಜಾ : ಇಂದು ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆ ಮಂಡನೆ

20/08/2025 7:35 AM

ಗುಂಡಿಗಳಿಂದ ಕೂಡಿದ, ಜನದಟ್ಟಣೆಯಿಂದ ಕೂಡಿದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವಿಲ್ಲ: ಸುಪ್ರೀಂ ಕೋರ್ಟ್

20/08/2025 7:33 AM

Ganesha Chaturthi: ಗಣಪ ಹಲ್ಲು ಮುರಿದುಕೊಂಡಿದ್ದು ಹೇಗೆ? ವಿನಾಯಕ ವಕ್ರತುಂಡನಾದ ಬಗ್ಗೆ ಒಂದಲ್ಲ 4 ಕಥೆಗಳಿವೆ!

20/08/2025 7:28 AM
State News
vidhana soudha KARNATAKA

BIG NEWS : ವಿಧಾನ ಸಭೆಯಲ್ಲಿ `ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ’ ಅಂಗೀಕಾರ.!

By kannadanewsnow5720/08/2025 6:53 AM KARNATAKA 1 Min Read

ಬೆಂಗಳೂರು : ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ…

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

20/08/2025 6:51 AM

ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ : ಷರತ್ತಿನಡಿ ‘ಬಗರ್ ಹುಕುಂ’ ಮಂಜೂರು.!

20/08/2025 6:36 AM

ರಾಜ್ಯ ಸರ್ಕಾರದಿಂದ `ಪರಿಶಿಷ್ಟ ಪಂಗಡದವರಿಗೆ’ ಗುಡ್ ನ್ಯೂಸ್ : `ಭೂ ಒಡೆತನ, ಗಂಗಾ ಕಲ್ಯಾಣ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

20/08/2025 6:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.