Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದ ವಕೀಲನನ್ನು ಕೊಲೆಗೆ ಯತ್ನ, ಐವರು ಅರೆಸ್ಟ್

16/01/2026 10:02 PM

BREAKING : ಗ್ರೀನ್ ಲ್ಯಾಂಡ್ ಜೊತೆ ಒಪ್ಪಂದ ಮಾಡಿಕೊಳ್ಳದ ದೇಶಗಳ ಮೇಲೆ ಸುಂಕ ; ‘ಟ್ರಂಪ್’ ಹೊಸ ಬೆದರಿಕೆ!

16/01/2026 9:59 PM

BREAKING : ನ್ಯೂಜಿಲೆಂಡ್ ವಿರುದ್ಧದ T20I ಸರಣಿಗೆ ನವೀಕರಿಸಿದ ಭಾರತ ತಂಡ ಪ್ರಕಟ ; ಅಯ್ಯರ್ ಕಂಬ್ಯಾಕ್!

16/01/2026 9:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಕಾನಹಳ್ಳಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ, ರಕ್ತದಾನದ ಮೂಲಕ ಕನ್ನಡಾಭಿಮಾನ ಪ್ರದರ್ಶನ
KARNATAKA

ಶಿವಮೊಗ್ಗ: ಕಾನಹಳ್ಳಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ, ರಕ್ತದಾನದ ಮೂಲಕ ಕನ್ನಡಾಭಿಮಾನ ಪ್ರದರ್ಶನ

By kannadanewsnow0918/11/2024 8:01 PM

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೇ ರಕ್ತದಾನ ಮಾಡುವ ಮೂಲಕ ಸದೃಢ ನಾಡಿನ ನಿರ್ಮಾಣಕ್ಕಾಗಿ ಕನ್ನಡಾಭಿಮಾನವನ್ನು ಪ್ರದರ್ಶಿಸಲಾಯಿತು.

ಗ್ರಾಮ ಪಂಚಾಯ್ತಿ ಉಳವಿ ಹಾಗೂ ದೂಗೂರು ಇವರ ಸಂಯುಕ್ತ ಆಶ್ರಯದೊಂದಿಗೆ ಕಾನಹಳ್ಳಿಯ ಕುವೆಂಪು ಕನ್ನಡ ಯುವಕರ ಸಂಘದಿಂದ ಗಡೆಗದ್ದೆಯ ಕುವೆಂಪು ಬಯಲು ರಂಗಮಂದಿರದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಯುವಕ, ಯುವತಿಯರು ರಕ್ತದಾನ ಮಾಡುವ ಮೂಲಕ ಈ ನಾಡಿನ ಸದೃಢ ನಿರ್ಮಾಣಕ್ಕಾಗಿ ಕನ್ನಡಾಭಿಮಾನವನ್ನು ಮರೆಯಲಾಯಿತು.

ಈ ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಮಹಿಳೆಯರು ಪೂರ್ಣಕುಂಭದ ಸ್ವಾಗತವನ್ನು ಗಣ್ಯರಿಗೆ ನೀಡಿದರು. ಗ್ರಾಮದ ಶ್ರೀನವದುರ್ಗೇಶ್ವರಿಯ ಸನ್ನಿಧಿಯವರೆಗೆ ಭುವನೇಶ್ವರಿ ದೇವಿಯ ಮೆರವಣಿಗೆ ಸಾಗಿತು.

ಶ್ರೀನವದುರ್ಗೇಶ್ವರಿಯ ಸನ್ನಿಧಿಯಲ್ಲಿ ಪ್ರಾರ್ಥನೆಯ ನಂತ್ರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ.ಕೆ.ಇ ಅವರು ಧ್ವಜಾರೋಹಣ ನೆರವೇರಿಸಿದರು. ನಂತ್ರ ಗ್ರಾಮ ಪಂಚಾಯ್ತಿ ಉಳವಿ ಅಧ್ಯಕ್ಷೆ ಸರಸ್ವತಿ ಗಣಪತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ಇನ್ನೂ ದೂಗೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗಮ್ಮ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹದೇವ್ ಪವಾರ್ ಅವರು ರಕ್ತ ದಾನವನ್ನು ಯಾರು ಮಾಡಬಹುದು. ಯಾರು ಮಾಡಬಾರದು ಎಂಬುದನ್ನು ತಿಳಿಸಿದರು. ಅಲ್ಲದೇ ರಕ್ತದಾನದ ಮಹತ್ವ, ಪ್ರಯೋಜವನ್ನು ತಿಳಿಸಿಕೊಟ್ಟರು.

ಉಳವಿಯ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿರೂಪಾಕ್ಷಪ್ಪ ಅವರು ಮಾತನಾಡಿ ಈ ಗ್ರಾಮದಲ್ಲಿ ಕನ್ನಡಿಗರ ಸಂಸ್ಕಾರ ಮತ್ತು ಸಂಸ್ಕೃತಿಗಳು ಮೇಳೈಸಿದ್ದಾವೆ. ಇದು ಮುಂದುವರೆಯಲಿ ಎಂದರು.

ಬೆಂಗಳೂರಿನ ಉದ್ಯಮಿ ಮಂಜುನಾಥ್.ಡಿ ಅವರು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಮಾತನಾಡಿ ಕುವೆಂಪು ಕನ್ನಡ ಯುವಕರ ಸಂಘವು ಸಮಾಜ ಮುಖಿ ಚಟುವಟಿಕೆಯನ್ನು ಮುಂದುವರೆಸಿದೆ. ಈ ಮೂಲಕ ಅಪ್ಪಟ ಕನ್ನಡಾಭಿಮಾನವನ್ನು ಹೊರಹೊಮ್ಮಿಸುತ್ತಿರುವುದನ್ನು ಶ್ಲಾಘನೀಯವೆಂದರು.

ಗ್ರಾಮ ಪಂಚಾಯ್ತಿ ಸದಸ್ಯರಾದಂತ ವಿನಾಯಕ.ಬಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಇದೇ ವೇಳೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಯುವಕರ ಸಂಘದ ಅಧ್ಯಕ್ಷರಾದ ಮಂಜಪ್ಪ.ಕೆ.ಪಿ ವಹಿಸಿದ್ದರು.

ರಾತ್ರಿ 8.30ರಿಂದ ಗ್ರಾಮದಲ್ಲಿ ಅತಿಥಿ ಕಲಾವಿದರು ಹಾಗೂ ಹಿರಿಯ ಯಕ್ಷಗಾನ ಕಲಾವಿದರಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ಧಳೆ ಪ್ರದರ್ಶಿಸಲಾಯಿತು.

ಈ ಕಾರ್ಯಕ್ರಮದ ವೇಳೆ ಉಳವಿ ಪ್ರೌಢ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದಂತ ಮಂಜುನಾಥ.ಬಿ, ಕಾನಹಳ್ಳಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದಂತ ಸೋಮೇಶ.ಎಂ, ಗ್ರಾಮ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ.ಎಂ ಉಪಸ್ಥಿತರಿದ್ದರು.

ಈ ವೇಳೆ ಕುಮಾರಿ ಸುಮನ್ವಿತಾ.ಪಿ ಮತ್ತು ಕುಮಾರಿ ಶ್ರದ್ಧಾ.ಪಿ ಪ್ರಾರ್ಥಿಸಿದರೇ, ಶಿಕ್ಷಕಿ ನಂದಿನಿ ಸ್ವಾಗತಿಸಿದರು. ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರೇ, ಕುವೆಂಪು ಕನ್ನಡ ಯುವಕ ಸಂಘದ ಸದಸ್ಯ ನಿಂಗರಾಜ ವಂದಿಸಿದರು. ಕಾನಹಳ್ಳಿ, ಗಡೆಗದ್ದೆ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮ ಯಶಸ್ವಿಯಾಗೋದಕ್ಕೆ ಸಾಥ್ ನೀಡಿದ್ದು ಕುವೆಂಪು ಕನ್ನಡ ಯುವಕ ಸಂಘದ ಉಪಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಆದರ್ಶ, ಸದಸ್ಯರಾದಂತ ಪುಟ್ಟಸ್ವಾಮಿ.ಎಲ್. ಇವರೆಲ್ಲರಿಗೂ ಅಧ್ಯಕ್ಷರಾದಂತ ಮಂಜಪ್ಪ.ಕೆ.ಪಿ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ಸಾಗರದಲ್ಲಿ ಅರಣ್ಯಾಧಿಕಾರಿಗಳ ದಾಳಿ: ಕರವೇ ತಾಲ್ಲೂಕು ಅಧ್ಯಕ್ಷ ಜಯರಾಂ ಸೂರನಗದ್ದೆ ಮನೆಯಲ್ಲಿ ‘ಜಿಂಕೆ ಮಾಂಸ ಸೀಜ್’

ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದ ಆತಿಥ್ಯ ನೆನೆಯಬೇಕು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ

‘ಒಂದೇ ದಿನದಲ್ಲಿ 5 ಲಕ್ಷ ನಾಗರಿಕರು ಪ್ರಯಾಣ’ : ಇತಿಹಾಸ ನಿರ್ಮಿಸಿದ ‘ಭಾರತೀಯ ವಾಯುಯಾನ’

Share. Facebook Twitter LinkedIn WhatsApp Email

Related Posts

BIG NEWS: ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದ ವಕೀಲನನ್ನು ಕೊಲೆಗೆ ಯತ್ನ, ಐವರು ಅರೆಸ್ಟ್

16/01/2026 10:02 PM2 Mins Read

ಶಿವಮೊಗ್ಗ: ಜ.18ರಂದು ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

16/01/2026 8:56 PM1 Min Read

ಜಿ ರಾಮ್ ಜಿ ಕಾಯ್ದೆ : ನ್ಯಾಯ ಸಿಗವವರೆಗೂ ಹೋರಾಟ ನಿಲ್ಲಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

16/01/2026 7:56 PM2 Mins Read
Recent News

BIG NEWS: ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದ ವಕೀಲನನ್ನು ಕೊಲೆಗೆ ಯತ್ನ, ಐವರು ಅರೆಸ್ಟ್

16/01/2026 10:02 PM

BREAKING : ಗ್ರೀನ್ ಲ್ಯಾಂಡ್ ಜೊತೆ ಒಪ್ಪಂದ ಮಾಡಿಕೊಳ್ಳದ ದೇಶಗಳ ಮೇಲೆ ಸುಂಕ ; ‘ಟ್ರಂಪ್’ ಹೊಸ ಬೆದರಿಕೆ!

16/01/2026 9:59 PM

BREAKING : ನ್ಯೂಜಿಲೆಂಡ್ ವಿರುದ್ಧದ T20I ಸರಣಿಗೆ ನವೀಕರಿಸಿದ ಭಾರತ ತಂಡ ಪ್ರಕಟ ; ಅಯ್ಯರ್ ಕಂಬ್ಯಾಕ್!

16/01/2026 9:41 PM

BREAKING : ವಾಯು ರಕ್ಷಣೆಗೆ ಆನೆ ಬಲ ; 114 ಹೆಚ್ಚುವರಿ ‘ರಫೇಲ್ ಜೆಟ್’ಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ

16/01/2026 9:26 PM
State News
KARNATAKA

BIG NEWS: ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದ ವಕೀಲನನ್ನು ಕೊಲೆಗೆ ಯತ್ನ, ಐವರು ಅರೆಸ್ಟ್

By kannadanewsnow0916/01/2026 10:02 PM KARNATAKA 2 Mins Read

ಶಿವಮೊಗ್ಗ: ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ ದೂರು ನೀಡಿದಂತ ವಕೀಲರೊಬ್ಬರನ್ನು ಕೊಲೆಗೆ ಯತ್ನಿಸಿದಂತ ಘಟನೆ ಆನಂದಪುರ ಪೊಲೀಸ್ ಠಾಣೆ…

ಶಿವಮೊಗ್ಗ: ಜ.18ರಂದು ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

16/01/2026 8:56 PM

ಜಿ ರಾಮ್ ಜಿ ಕಾಯ್ದೆ : ನ್ಯಾಯ ಸಿಗವವರೆಗೂ ಹೋರಾಟ ನಿಲ್ಲಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

16/01/2026 7:56 PM

ರಾಮನಾಮ ಮಹಿಮೆ ಉಪದೇಶ ಮಾಡಿದ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿ ಮಹಾರಾಜರು: ಇಲ್ಲಿದೆ ಮಹಿಮೆ

16/01/2026 7:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.