Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

03/08/2025 9:21 PM

‘ಗೊರಕೆ’ ಹೊಡೆಯೋದನ್ನ ಹಗುರವಾಗಿ ತೆಗೆದುಕೊಳ್ತೀರಾ.? ಅಯ್ಯೋ, ನೀವು ಅಪಾಯದಲ್ಲಿದ್ದೀರಿ ಮರೆಯಬೇಡಿ!

03/08/2025 9:14 PM

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಪತ್ರಕರ್ತರ ಸುದ್ದಿ ಸಮಾಜವನ್ನು ದಿಕ್ಕು ತಪ್ಪಿಸುವ ಹಾಗೆ ಇರಬಾರದು- ಚಾರ್ವಾಕ ರಾಘವೇಂದ್ರ
KARNATAKA

ಶಿವಮೊಗ್ಗ: ಪತ್ರಕರ್ತರ ಸುದ್ದಿ ಸಮಾಜವನ್ನು ದಿಕ್ಕು ತಪ್ಪಿಸುವ ಹಾಗೆ ಇರಬಾರದು- ಚಾರ್ವಾಕ ರಾಘವೇಂದ್ರ

By kannadanewsnow0928/09/2024 8:23 PM

ಶಿವಮೊಗ್ಗ: ಪತ್ರಕರ್ತರು ಸುದ್ದಿ ಮಾಡುವಾಗ ಸಮಾಜಿಕ ಹೊಣೆಗಾರಿಕೆಯನ್ನು ಹೊಂದಿರಬೇಕು. ಅವರು ಮಾಡುವ ಸುದ್ದಿಯು ಸಮಾಜವನ್ನು ದಿಕ್ಕು ತಪ್ಪಿಸಬಾರದು ಎಂದು ಪತ್ರಕರ್ತ ಡಿ ಎಮ್ ಪಿ ಸಿ ಅಧ್ಯಕ್ಷ ಚಾರ್ವಾಕ ರಾಘವೇಂದ್ರ ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿನಗರದಲ್ಲಿರುವ DMPC ಕಚೇರಿಯಲ್ಲಿ ಪತ್ರಕರ್ತರಿಗೆ ಏರ್ಪಡಿಸಲಾಗಿದ್ದ ಸುದ್ದಿ ಬಗೆಯುವ ಬಗೆ ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪತ್ರಕರ್ತರು ಸುದ್ದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಪತ್ರಕರ್ತರು ಸಮಾಜವನ್ನು ಕೂಡಿಸುವ ಕೊಂಡಿಯಾಗಬೇಕೆ ವಿನಃ ಸಮಾಜವನ್ನು ಒಡೆಯುವ ಅಸ್ತ್ರವಾಗಬಾರದು. ಪತ್ರಕರ್ತರು ಮಾಡಿದ ಸುದ್ದಿಯಿಂದ ಜಗತ್ತಿನಲ್ಲಿ ಹಲವಾರು ಸಮಾಜಿಕ ಬದಲಾವಣೆಯಾಗಿದೆ ಎನ್ನುವುದನ್ನು ಹಲವು ಹಲವು ಘಟನೆಗಳನ್ನು ಉಲ್ಲೇಖಿಸಿ ವಿವರಿಸಿದರು.ಇತ್ತೀಚಿಗೆ ಆಪ್ರೀಖಾದ ಪಟಗ್ರಾಫರ್ ಒಬ್ಬ ತೆಗೆದ ಒಂದು ಚಿತ್ರದಿಂದ ಆ ಕುಟುಂಬದ ಭವಿಷ್ಯವೇ ಬದಲಾಯ್ತು. ಹಾಗೆ ದ್ವೇಶ ಕಾರುವ ಪತ್ರಕರ್ತರ ಸುಳ್ಳು ವರದಿಗಳಿಂದಾಗಿ ಸಮಾಜದಲ್ಲಿ ದೊಂಬಿ ಹಿಂಸೆ ಸಾವು ನೋವುಗಳಿಗೆ ಕಾರಣವಾಗಿರುವುದನ್ನು ಉದಾಹರಿಸಿದರು.

ಸುದ್ದಿ ಮಾಡುವಾಗ ಯಾವುದೇ ರಾಗ ದ್ವೇಷವಿರದೆ ಸತ್ಯದ ಬೆನ್ನು ಹತ್ತಿ ಹೋಗಬೇಕು ಮತ್ತು ಸತ್ಯದ ನೆಲೆಯಲ್ಲಿ ಸುದ್ದಿ ಮಾಡಬೇಕು ಎಂದ ಇವರು ಪತ್ರಿಕಾ ವೃತ್ತಿ ಅಮೂಲ್ಯವಾದ ವೃತ್ತಿ. ಇದರ ಘನತೆ ಗೌರವವನ್ನು ಕಾಪಾಡಿಕೊಂಡು ಸಮಾಜದ ಸ್ವಾಸ್ಥ್ಯ ಕ್ಕೆ ಕನ್ನಡಿಯಾಗಬೇಕು ಎಂದರು. ಸುದ್ದಿಯಲ್ಲಿ ಹಲವು ಬಗೆಗಳು ಇವೆ.ಈ ಎಲ್ಲ ಬಗೆಗಳಲ್ಲೂ ಸುದ್ದಿ ಜನಸಾಮಾನ್ಯರಿಗೆ ಸಹಾಯವಾಗುವ ಹಾಗೆ ಇರಬೇಕು. ಪತ್ರಕರ್ತರಿಗೆ ಅಧ್ಯಯನ ಬಹಳ ಮುಖ್ಯ. ವಿವಿಧ ಸ್ತರಗಳ ಓದಿನಿಂದ ಗುಣಮಟ್ಟದ ಸುದ್ದಿ ನೀಡಲು ಸಾಧ್ಯವಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಇಂದು ಹಾದಿ ತಪ್ಪುವ ಸುದ್ದಿ ಮಾಡುವಲ್ಲಿ ಪೈಪೋಟಿಗೆ ಇಳಿದಿವೆ. ಇದರಿಂದ ಸಮಾಜದ ಆರೋಗ್ಯ ಹದಗೆಡುತ್ತಿದೆ ಎಂದರು.

ಮಾಧ್ಯಮ ಕ್ಷೇತ್ರಕ್ಕೆ ಹೊಸತಲೆಮಾರು ಬರುವ ಅಗತ್ಯವಿದೆ. ಹೊಸ ತಲೆಮಾರನ್ನು ಪ್ರಭಾವಿಸುವಂತ ಸುದ್ದಿಯ ಅಗತ್ಯ ವಿದೆ ಎಂದರು.ಸುದ್ದಿ ಮಾಡುವಾಗ ನಿಖರತೆ ಕಾಪಾಡಿಕೊಳ್ಳುವಲ್ಲಿ ವಿಶೇಷ ಗಮನ ಕೊಡಬೇಕು ಎಂದರು. ಉಪನ್ಯಾಸದ ನಂತರ ಸಂವಾದ ನಡೆಯಿತು.

ಈ ಕಾರ್ಯಾಗಾರದ ಆರಂಭದಲ್ಲಿ ಗಣಪತಿ ತಾಳಗುಪ್ಪ ಪ್ರಾರ್ಥಿಸಿದರು. ಸುದ್ದಿ ಸಹ್ಯಾದ್ರಿ ಸಂಪಾದಕ ರಾಘವೇಂದ್ರ ತಾಳಗುಪ್ಪ ಸ್ವಾಗತಿಸಿದರು. ಸಂದೀಪ್ ಕುಮಾರ್ ವಂದಿಸಿದರು. ಸೌಮ್ಯ ನಿರೂಪಿಸಿದರು. ಡಿ ಎಮ್ ಪಿಸಿ ಸದಸ್ಯರಾದ ಅಣ್ಣಪ್ಪ ಕೆಳದಿಪುರ, ಶಿವಕುಮಾರ್ ಕಾರ್ಗಲ್, ಮೋಹನ್, ನಟರಾಜ್ ಮೊದಲಾದವರು ಭಾಗವಹಿಸಿದ್ದರು. ಕೊನೆಯಲ್ಲಿ ಡಿ ಎಮ್ ಪಿಸಿಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ALERT: ನೀವು ಯಾವುದೇ ಪ್ರಾಣಿಯಿಂದ ಕಡಿತಕ್ಕೆ, ಪರಚುವಿಕೆಗೆ ಒಳಗಾಗಿದ್ದೀರಾ.? ನಿರ್ಲಕ್ಷ್ಯಿಸಬೇಡಿ, ತಪ್ಪದೇ ಈ ಕೆಲಸ ಮಾಡಿ

BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Share. Facebook Twitter LinkedIn WhatsApp Email

Related Posts

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

03/08/2025 9:21 PM1 Min Read

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM1 Min Read

BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

03/08/2025 9:07 PM1 Min Read
Recent News

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

03/08/2025 9:21 PM

‘ಗೊರಕೆ’ ಹೊಡೆಯೋದನ್ನ ಹಗುರವಾಗಿ ತೆಗೆದುಕೊಳ್ತೀರಾ.? ಅಯ್ಯೋ, ನೀವು ಅಪಾಯದಲ್ಲಿದ್ದೀರಿ ಮರೆಯಬೇಡಿ!

03/08/2025 9:14 PM

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM

BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

03/08/2025 9:07 PM
State News
KARNATAKA

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

By kannadanewsnow0903/08/2025 9:21 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಹೊಸನಗರದ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಐದನೇ ತರಗತಿ…

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM

BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

03/08/2025 9:07 PM

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಈ ತಿರುಗೇಟು

03/08/2025 9:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.