ಶಿವಮೊಗ್ಗ: ಪತ್ರಕರ್ತರು ಸುದ್ದಿ ಮಾಡುವಾಗ ಸಮಾಜಿಕ ಹೊಣೆಗಾರಿಕೆಯನ್ನು ಹೊಂದಿರಬೇಕು. ಅವರು ಮಾಡುವ ಸುದ್ದಿಯು ಸಮಾಜವನ್ನು ದಿಕ್ಕು ತಪ್ಪಿಸಬಾರದು ಎಂದು ಪತ್ರಕರ್ತ ಡಿ ಎಮ್ ಪಿ ಸಿ ಅಧ್ಯಕ್ಷ ಚಾರ್ವಾಕ ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿನಗರದಲ್ಲಿರುವ DMPC ಕಚೇರಿಯಲ್ಲಿ ಪತ್ರಕರ್ತರಿಗೆ ಏರ್ಪಡಿಸಲಾಗಿದ್ದ ಸುದ್ದಿ ಬಗೆಯುವ ಬಗೆ ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪತ್ರಕರ್ತರು ಸುದ್ದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಪತ್ರಕರ್ತರು ಸಮಾಜವನ್ನು ಕೂಡಿಸುವ ಕೊಂಡಿಯಾಗಬೇಕೆ ವಿನಃ ಸಮಾಜವನ್ನು ಒಡೆಯುವ ಅಸ್ತ್ರವಾಗಬಾರದು. ಪತ್ರಕರ್ತರು ಮಾಡಿದ ಸುದ್ದಿಯಿಂದ ಜಗತ್ತಿನಲ್ಲಿ ಹಲವಾರು ಸಮಾಜಿಕ ಬದಲಾವಣೆಯಾಗಿದೆ ಎನ್ನುವುದನ್ನು ಹಲವು ಹಲವು ಘಟನೆಗಳನ್ನು ಉಲ್ಲೇಖಿಸಿ ವಿವರಿಸಿದರು.ಇತ್ತೀಚಿಗೆ ಆಪ್ರೀಖಾದ ಪಟಗ್ರಾಫರ್ ಒಬ್ಬ ತೆಗೆದ ಒಂದು ಚಿತ್ರದಿಂದ ಆ ಕುಟುಂಬದ ಭವಿಷ್ಯವೇ ಬದಲಾಯ್ತು. ಹಾಗೆ ದ್ವೇಶ ಕಾರುವ ಪತ್ರಕರ್ತರ ಸುಳ್ಳು ವರದಿಗಳಿಂದಾಗಿ ಸಮಾಜದಲ್ಲಿ ದೊಂಬಿ ಹಿಂಸೆ ಸಾವು ನೋವುಗಳಿಗೆ ಕಾರಣವಾಗಿರುವುದನ್ನು ಉದಾಹರಿಸಿದರು.
ಸುದ್ದಿ ಮಾಡುವಾಗ ಯಾವುದೇ ರಾಗ ದ್ವೇಷವಿರದೆ ಸತ್ಯದ ಬೆನ್ನು ಹತ್ತಿ ಹೋಗಬೇಕು ಮತ್ತು ಸತ್ಯದ ನೆಲೆಯಲ್ಲಿ ಸುದ್ದಿ ಮಾಡಬೇಕು ಎಂದ ಇವರು ಪತ್ರಿಕಾ ವೃತ್ತಿ ಅಮೂಲ್ಯವಾದ ವೃತ್ತಿ. ಇದರ ಘನತೆ ಗೌರವವನ್ನು ಕಾಪಾಡಿಕೊಂಡು ಸಮಾಜದ ಸ್ವಾಸ್ಥ್ಯ ಕ್ಕೆ ಕನ್ನಡಿಯಾಗಬೇಕು ಎಂದರು. ಸುದ್ದಿಯಲ್ಲಿ ಹಲವು ಬಗೆಗಳು ಇವೆ.ಈ ಎಲ್ಲ ಬಗೆಗಳಲ್ಲೂ ಸುದ್ದಿ ಜನಸಾಮಾನ್ಯರಿಗೆ ಸಹಾಯವಾಗುವ ಹಾಗೆ ಇರಬೇಕು. ಪತ್ರಕರ್ತರಿಗೆ ಅಧ್ಯಯನ ಬಹಳ ಮುಖ್ಯ. ವಿವಿಧ ಸ್ತರಗಳ ಓದಿನಿಂದ ಗುಣಮಟ್ಟದ ಸುದ್ದಿ ನೀಡಲು ಸಾಧ್ಯವಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಇಂದು ಹಾದಿ ತಪ್ಪುವ ಸುದ್ದಿ ಮಾಡುವಲ್ಲಿ ಪೈಪೋಟಿಗೆ ಇಳಿದಿವೆ. ಇದರಿಂದ ಸಮಾಜದ ಆರೋಗ್ಯ ಹದಗೆಡುತ್ತಿದೆ ಎಂದರು.
ಮಾಧ್ಯಮ ಕ್ಷೇತ್ರಕ್ಕೆ ಹೊಸತಲೆಮಾರು ಬರುವ ಅಗತ್ಯವಿದೆ. ಹೊಸ ತಲೆಮಾರನ್ನು ಪ್ರಭಾವಿಸುವಂತ ಸುದ್ದಿಯ ಅಗತ್ಯ ವಿದೆ ಎಂದರು.ಸುದ್ದಿ ಮಾಡುವಾಗ ನಿಖರತೆ ಕಾಪಾಡಿಕೊಳ್ಳುವಲ್ಲಿ ವಿಶೇಷ ಗಮನ ಕೊಡಬೇಕು ಎಂದರು. ಉಪನ್ಯಾಸದ ನಂತರ ಸಂವಾದ ನಡೆಯಿತು.
ಈ ಕಾರ್ಯಾಗಾರದ ಆರಂಭದಲ್ಲಿ ಗಣಪತಿ ತಾಳಗುಪ್ಪ ಪ್ರಾರ್ಥಿಸಿದರು. ಸುದ್ದಿ ಸಹ್ಯಾದ್ರಿ ಸಂಪಾದಕ ರಾಘವೇಂದ್ರ ತಾಳಗುಪ್ಪ ಸ್ವಾಗತಿಸಿದರು. ಸಂದೀಪ್ ಕುಮಾರ್ ವಂದಿಸಿದರು. ಸೌಮ್ಯ ನಿರೂಪಿಸಿದರು. ಡಿ ಎಮ್ ಪಿಸಿ ಸದಸ್ಯರಾದ ಅಣ್ಣಪ್ಪ ಕೆಳದಿಪುರ, ಶಿವಕುಮಾರ್ ಕಾರ್ಗಲ್, ಮೋಹನ್, ನಟರಾಜ್ ಮೊದಲಾದವರು ಭಾಗವಹಿಸಿದ್ದರು. ಕೊನೆಯಲ್ಲಿ ಡಿ ಎಮ್ ಪಿಸಿಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ