Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕಾರಿನ ಮೇಲೆ ಮಗುಚಿ ಬಿದ್ದ ಟಿಪ್ಪರ್ : ಐವರು ಮಕ್ಕಳು ಸೇರಿ ಒಂದೇ ಕುಟುಂಬದ 9 ಜನ ದುರ್ಮರಣ!

04/06/2025 1:06 PM

BREAKING : ತೆರೆದ ವಾಹನದಲ್ಲಿ ‘ಆರ್‌ಸಿಬಿ’ ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ

04/06/2025 1:00 PM

ಪಿಎಂ ಕಿಸಾನ್ 20 ನೇ ಕಂತು: ಬಿಡುಗಡೆ ದಿನಾಂಕ, ಫಲಾನುಭವಿ ಪಟ್ಟಿ ಮತ್ತು ಸಂಪೂರ್ಣ ಯೋಜನೆಯ ವಿವರಗಳನ್ನು ಪರಿಶೀಲಿಸಿ | PM kisan

04/06/2025 12:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸಾಗರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ- ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಶಿವಮೊಗ್ಗ: ಸಾಗರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ- ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0903/06/2025 12:40 PM

ಶಿವಮೊಗ್ಗ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಗರ ಕರ್ನಾಟಕದಲ್ಲಿ 15ನೇ ಸ್ಥಾನ, ಶಿವಮೊಗ್ಗ ಜಿಲ್ಲೆಯಲ್ಲಿ 2ನೇ ಸ್ಥಾನವನ್ನು ಪಡೆಯುವಂತೆ ಫಲಿತಾಂಶ ಪಡೆದಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಸಾಗರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಂದು ಸಾಗರ ನಗರದ ನಗರಸಭೆ ಆವರಣದಲ್ಲಿನ ಗಾಂಧಿ ಮೈದಾನದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ಹಾಗೂ 615ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಭಿನಂದಿಸಿದರು.

ಪ್ರಾಸ್ತಾವಿಕ ನುಡಿ ಆಡಿದಂತ ಬಿಇಓ ಪರಮೇಶ್ವರಪ್ಪ ಅವರು, ಈ ವರ್ಷ ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಶೇ.100% ಫಲಿತಾಂಶ ಪಡೆದು ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಸಾಗರಕ್ಕೆ 15ನೇ ಸ್ತಾನ, ಹೊಸನಗರ 17ನೇ ಸ್ಥಾನವನ್ನು ಪಡೆದುಕೊಂಡಿದೆ. 56 ಶಾಲೆಗಳಲ್ಲಿ 21 ಶಾಲೆಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ನೇ ಸ್ಥಾನ ಪಡೆದಿದೆ. 33 ಶಾಲೆಗಳು ಶೇ.90% ಫಲಿತಾಂಶ ಪಡೆದಿವೆ. ಎಂದರು.

ಸಾಗರ ತಾಲ್ಲೂಕಿನಲ್ಲಿ 107 ವಿದ್ಯಾರ್ಥಿಗಳು 600 ರಿಂದ 615 ಅಂಕ ಪಡೆದಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಮುಂದೆ ಮತ್ತಷ್ಟು ಸಾಧನೆ ಮಾಡಲು ಹುರುಪು ತುಂಬೋ ಕೆಲಸವನ್ನು ಶಾಸಕರು ಇಂದು ಮಾಡಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಈ ನಿರ್ಧಾರ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆಗೆ ಸ್ಪೂರ್ತಿ ತುಂಬಿದಂತೆ ಆಗಿದೆ. ಶಾಸಕರು ಆಯೋಜಿಸಿರುವಂತ ಈ ಕಾರ್ಯಕ್ರಮ ಮುಂದೆಯು ನಡೆಯಲಿ, ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದರು.

ಈ ಬಳಿಕ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಬಹಳ ಖುಷಿ ಆಯ್ತು. ಸಾಗರ ತಾಲ್ಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2 ಸ್ಥಾನ ಪಡೆದದ್ದು ಹೆಮ್ಮೆಯ ವಿಚಾರ. ಇದಕ್ಕೆ ಕಾರಣರಾದಂತ ಎಲ್ಲರಿಗೂ ಅಭಿನಂದನೆಗಳು ಎಂದರು.

ಕಟ್ಟಿನ ಕಾರು, ನಾಗವಳ್ಳಿಗೆ ಪ್ರೌಢ ಶಾಲೆ ನೀಡಲಾಯಿತು. ಆ ಶಾಲೆಯಲ್ಲಿ 100% ಫಲಿತಾಂಶ ಬರುತ್ತಿದೆ. ಅದನ್ನು ಕಂಡು ಖುಷಿ ಆಗುತ್ತಿದೆ. ಬಿಇಓ ಸಹಕಾರ, ಬಿ ಆರ್ ಸಿ ಸೇರಿ ಇತರರ ಸಹಕಾರವೇ ಸಾಗರ-ಹೊಸನಗರ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬರಲು ಕಾರಣ ಎಂದರು.

ಶಾಲೆಗಳ ದುರಸ್ತಿ ಇದ್ದರೇ ತಿಳಿಸಲು ಸೂಚಿಸಿದ್ದೇನೆ. ತುರ್ತಾಗಿ ಅವುಗಳನ್ನು ರಿಪೇರಿ ಮಾಡಿಸಿ ಕೊಡಲಾಗುತ್ತದೆ. ಈಗ ಶಿಕ್ಷಣದ ವ್ಯವಸ್ಥೆ ಬದಲಾಗಿದೆ. ಶೇ.90% ಮೇಲೆ ಫಲಿತಾಂಶ ಪಡೆಬೇಕು ಎಂಬುದೇ ಆಗಿದೆ. ಕರ್ನಾಟಕದಲ್ಲಿ ಸಾಗರ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ 15ನೇ ಸ್ಥಾನ ಪಡೆಯುವಂತೆ ಆಗಿದೆ. ಇದು ತಾಲ್ಲೂಕಿನ ಎಲ್ಲಾ ಶಿಕ್ಷಣ ಪರಿಶ್ರಮ ಕಾರಣ ಎಂದರು.

ಯಾವುದೇ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು. ಅರ್ಧದಲ್ಲಿ ಶಾಲೆ ಬಿಡಿಸಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಬಾರದು. ಹಾಗೆ ಯಾವುದೇ ಪೋಷಕರು ಮಾಡಬಾರದು. ಮಕ್ಕಳು ಚೆನ್ನಾಗಿ ಓದಬೇಕು ಎಂದು ಕಿವಿಮಾತು ಹೇಳಿದರು.

ನಿಜವಾಗಿಯೂ ಸಾಗರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಸುಭಾಷ್ ನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತನಿಷ್ಕ 624 ಅಂಕ ಪಡೆದು ರಾಜ್ಯಕ್ಕೆ ಸಾಗರದ ಕೀರ್ತಿ ತರುವಂತೆ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ತೆಗೆದಿದ್ದಾರೆ. ಇದು ಮುಂದೆಯೂ ಸಾಗಲಿ ಎಂದರು.

ಸಾಗರದಿಂದ ಉಡುಪಿಗೆ ತೆರಳಿದಂತ ಕೆಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊಟ್ಟಿರಲಿಲ್ಲ. ಉಡುಪಿ ಡಿಸಿ ಬಳಿ ತೆರಳಿ, ಹಾಸ್ಟೆಲ್ ವಾರ್ಡನ್ ಕರೆಸಿ ಮಾತನಾಡಿ ವ್ಯವಸ್ಥೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಆರ್ ಜಯಂತ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಭಲೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ನಗರಸಭೆ ಸದಸ್ಯರಾದಂತ ಗಣಪತಿ ಮಂಡಗಳಲೆ, ಮಧು ಮಾಲತಿ, ಹೊಳೆಯಪ್ಪ, ಜಾಕೀರ್, ಚಂದ್ರಪ್ಪ, ಹಮೀದ್, ರವಿ ಲಿಂಗನಮಕ್ಕಿ, ಬಿಇಓ ಪರಶುರಾಮ್ ಸೇರಿದಂತೆ ಇತರರು ಹಾಜರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ..

Share. Facebook Twitter LinkedIn WhatsApp Email

Related Posts

BREAKING : ತೆರೆದ ವಾಹನದಲ್ಲಿ ‘ಆರ್‌ಸಿಬಿ’ ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ

04/06/2025 1:00 PM1 Min Read

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

04/06/2025 12:13 PM1 Min Read

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM1 Min Read
Recent News

BREAKING : ಕಾರಿನ ಮೇಲೆ ಮಗುಚಿ ಬಿದ್ದ ಟಿಪ್ಪರ್ : ಐವರು ಮಕ್ಕಳು ಸೇರಿ ಒಂದೇ ಕುಟುಂಬದ 9 ಜನ ದುರ್ಮರಣ!

04/06/2025 1:06 PM

BREAKING : ತೆರೆದ ವಾಹನದಲ್ಲಿ ‘ಆರ್‌ಸಿಬಿ’ ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ

04/06/2025 1:00 PM

ಪಿಎಂ ಕಿಸಾನ್ 20 ನೇ ಕಂತು: ಬಿಡುಗಡೆ ದಿನಾಂಕ, ಫಲಾನುಭವಿ ಪಟ್ಟಿ ಮತ್ತು ಸಂಪೂರ್ಣ ಯೋಜನೆಯ ವಿವರಗಳನ್ನು ಪರಿಶೀಲಿಸಿ | PM kisan

04/06/2025 12:38 PM

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

04/06/2025 12:13 PM
State News
KARNATAKA

BREAKING : ತೆರೆದ ವಾಹನದಲ್ಲಿ ‘ಆರ್‌ಸಿಬಿ’ ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ

By kannadanewsnow0504/06/2025 1:00 PM KARNATAKA 1 Min Read

ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಬೆಂಗಳೂರಿಗೆ ಆಗಮಿಸಿದೆ. ಇಂದು…

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

04/06/2025 12:13 PM

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.