ಶಿವಮೊಗ್ಗ  : ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 06/08/2022 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಸವಳಂಗರಸ್ತೆ, ಸರ್ಜಿ ಕನ್ವೆಷನಲ್ ಹಾಲ್ ಎದುರು, ನವುಲೆ, ಹೊಸೂರು, ಮುರುಡಲಿಂಗೇಶ್ವರ ಬಡಾವಣೆ, ಜ್ಯೋತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ( Power Cut ) ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ( MESCOM ) ಪ್ರಕಟಣೆ ತಿಳಿಸಿದೆ.

BREAKING NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಸಿಐಡಿಯಿಂದ ಆಯ್ಕೆಪಟ್ಟಿಯಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಅರೆಸ್ಟ್

ಭವಿಷ್ಯನಿಧಿ ಅದಾಲತ್

ಶಿವಮೊಗ್ಗದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಆಗಸ್ಟ್ 10 ರಂದು ಭವಿಷ್ಯ ನಿಧಿ ಕಚೇರಿ, ಅಟಲ್ ಬಿಹಾರಿ ವಾಜಪೇಯಿ ಲೇಔಟ್, ಮಲ್ಲಿಗೇನಹಳ್ಳಿ, ಶಿವಮೊಗ್ಗ ಇಲ್ಲಿ ಇಪಿಎಫ್/ಇಪಿಎಸ್ ಸದಸ್ಯರಿಗಾಗಿ ನಿಧಿ ಆಪ್ಕೆ ನಿಕಟ್/ಭವಿಷ್ಯ ನಿಧಿ ಅದಾಲತ್‍ನ್ನು ನಡೆಸಲಿದ್ದಾರೆ.

‘ನಮ್ಮ ಕ್ಲಿನಿಕ್‌’ಗೆ ಲೋಗೊ ಡಿಸೈನ್‌ ಮಾಡಿ ‘ಪ್ರಶಸ್ತಿ ಗೆಲ್ಲಿ’

ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರೆಗೆ ಚಂದಾದಾರರು/ಪಿಎಫ್ ಸದಸ್ಯರು/ಪಿಂಚಣಿದಾರರು ಮತ್ತು ಮಧ್ಯಾಹ್ನ 12 ಗಂಟೆಯಿಂದ 01 ಗಂಟೆವರೆಗೆ ಉದ್ಯೋಗದಾತರು ಅದಾಲತ್‍ನಲ್ಲಿ ಪಾಲ್ಗೊಳ್ಳಬಹುದು.

BREAKING NEWS : ‘ಪ್ರವೀಣ್‌ ಕೊಲೆ ಮಾಡಿದ್ದು, ಕೇರಳದವರಲ್ಲ ಸ್ಥಳೀಯರು’ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ʼಆರಗ ಜ್ಞಾನೇಂದ್ರ ʼ

ಪಿಎಫ್ ಸದಸ್ಯರು, ಪಿಂಚಣಿದಾರರು, ಟ್ರೇಡ್ ಯೂನಿಯನ್ ಮತ್ತು ಉದ್ಯೋಗದಾತರು ಕುಂದುಕೊರತೆಯ ವಿವರಗಳನ್ನು ಪಿಎಫ್ ಅಕೌಂಟ್ ಸಂಖ್ಯೆ/ಪಿಂಚಣಿ ಸಂಖ್ಯೆ, ಸಂಸ್ಥೆಯ ಕೋಡ್ ನಂಬರ್, ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ಮುಂಚಿತವಾಗಿ ಒದಗಿಸುವಂತೆ ಸೂಚಿಸಲಾಗಿದ್ದು, ವಿವರಗಳನ್ನು ಆ.08 ರಂದು ಅಥವಾ ಮೊದಲು ಇಮೇಲ್ ಐಡಿ ro.shivamogga@epfindia.gov.in ಗೆ ಕಳುಹಿಸಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

Share.
Exit mobile version