ಶಿವಮೊಗ್ಗ: ಇಂದು ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭಾರೀ ಮುಖಭಂಗ ಅನುಭವಿದೆ. 13 ಸ್ಥಾನಗಳಲ್ಲಿ ಒರ್ವ ಅಭ್ಯರ್ಥಿ ಮಾತ್ರ ಗೆದ್ರೇ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಸಹಕಾರಿ ಧುರೀಣ ಆರ್.ಎಂ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಕುರಿತಂತೆ ಚುನಾವಣಾಧಿಕಾರಿ ಸತ್ಯನಾರಾಯಣ್ ಮಾಹಿತಿ ನೀಡಿದ್ದು, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಎಸ್ ಪಿ ಚಂದ್ರಶೇಖರ್ ಗೌಡ, ಎಸ್.ಕೆ ಮರಿಯಪ್ಪ, ಜಿಎನ್ ಸುಧೀರ, ಕೆ.ಪಿ ರುದ್ರಗೌಡ, ಟಿ.ಶಿವಶಂಕರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 13 ಮಂದಿ ಗೆಲುವು ಸಾಧಿಸಿದದಾರೆ ಅಂತ ತಿಳಿಸಿದ್ದಾರೆ.

ಹೀಗಿದೆ ಕ್ಷೇತ್ರವಾರು ಗೆದ್ದ ಅಭ್ಯರ್ಥಿಗಳು ಹಾಗೂ ಪಡೆದ ಮತಗಳ ವಿವರ

ಕ್ಷೇತ್ರ 1, ಶಿವಮೊಗ್ಗ ತಾಲ್ಲೂಕು : ಕೆ.ಪಿ ದುಗ್ಗಪ್ಪ ಗೌಡ – 13 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಶಿವನಂಜಪ್ಪ – 12 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಭದ್ರಾವತಿ ತಾಲ್ಲೂಕು: ಸಿ.ಹನುಮಂತಪ್ಪ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ಹೆಚ್.ಎಲ್ ಷಡಾಕ್ಷರಿ 7 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕು : ಬಸವಾನಿ ವಿಜಯದೇವ್ 14 ಮತಗಳಿಂದ ಗೆಲುವು ಕಂಡ್ರೇ, ಪ್ರತಿಸ್ಪರ್ಧಿ ಕೆ.ಎಸ್ ಶಿವಕುಮಾರ್ 9 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಸಾಗರ ತಾಲ್ಲೂಕು: ಶಾಸಕ ಬೇಳೂರು ಗೋಪಾಲಕೃಷ್ಣ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ರತ್ನಾಕರ ಹೊನಗೋಡು 14 ಮತಗಳನ್ನು ಪಡೆದರೂ 1 ಮತಗಳಿಂದ ಸೋಲು ಕಂಡಿದ್ದಾರೆ.

ಸೊರಬ ತಾಲ್ಲೂಕು: ಕೆ.ಪಿ ರುದ್ರಗೌಡ ಅವರು 14 ಮತಗಳಿಂದ ಗೆಲುವು ಸಾಧಿಸಿದ್ರೇ, ಶಿವಮೂರ್ತಿ ಗೌಡ 10 ಮತಗಳಿಂದ ಸೋತಿದ್ದಾರೆ.

ಹೊಸನಗರ ತಾಲ್ಲೂಕು : ಎಂ.ಎಂ ಪರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರ-2ರ ಶಿವಮೊಗ್ಗ ಉಪ ವಿಭಾಗ: ಆರ್.ಎಂ ಮಂಜುನಾಥ ಗೌಡ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ವಿರೂಪಾಕ್ಷಪ್ಪ 3 ಮತಗಳನ್ನು ಪಡೆದಿದ್ದಾರೆ.

ಸಾಗರ ಉಪ ವಿಭಾಗ: ಜಿಎನ್ ಸುಧೀರ್ 23 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ರೇ, ಬಿಡಿ ಭೂಕಾಂತ್ 21 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಕ್ಷೇತ್ರ-3, ಶಿವಮೊಗ್ಗ ಉಪ ವಿಭಾಗ: ಎಸ್ ಕೆ ಮರಿಯಪ್ಪ 39 ಮತ ಪಡೆದು ಗೆಲುವು, ಎಸ್ ಪಿ ದಿನೇಶ್ 16 ಮತಗಳೊಂದಿಗೆ ಸೋತಿದ್ದಾರೆ.

ಶಿಕಾರಿಪುರ ತಾಲ್ಲೂಕು: ಬಿಜೆಪಿಯ ಅಭ್ಯರ್ಥಿ ಪಿಎಲ್ ಬಸವರಾಜ್ 32 ಮತಗಳಿಂದ ಗೆಲುವು ಸಾಧಿಸಿದ್ರೇ, ರವೀಂದ್ರ ಹೆಚ್.ಎಸ್ 21 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಕ್ಷೇತ್ರ-4ರ ಶಿವಮೊಗ್ಗ ಉಪ ವಿಭಾಗ: ಮಹಾಲಿಂಗಯ್ಯ ಶಾಸ್ತ್ರಿ 47 ಮತಗಳೊಂದಿಗೆ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕೆ.ಎಲ್ ಜಗದೀಶ್ವರ್ 45, ಡಿ.ಆನಂದ್ 16, ಜೆ.ಪಿ ಯೋಗೇಶ್ 14 ಮತಗಳನ್ನು ಪಡೆದಿದ್ದಾರೆ.

ಸಾಗರ ಉಪ ವಿಭಾಗ: ಟಿ ಶಿವಶಂಕರಪ್ಪ 75 ಮತಗಳೊಂದಿಗೆ ಗೆಲುವು ಕಂಡಿದ್ದರೇ, ಎಂ.ಡಿ ಹರೀಶ್ 61 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಅಂದಹಾಗೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದಂತ ಇಂದಿನ ಚುನಾವಣೆಯ ಮತದಾನದಲ್ಲಿ 621 ಮಂದಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದ್ರು. ಇವುಗಳಲ್ಲಿ 5 ಮತಗಳು ತಿರಸ್ಕೃತಗೊಂಡಿದ್ದಾವೆ.

ವರದಿ: ವಸಂತ ಬಿ ಈಶ್ವರಗೆರೆ

BIG NEWS: ‘ರಾಕೇಶ್ ಶೆಟ್ಟಿ’ ವಿರುದ್ಧ ‘ರೌಡಿ ಶೀಟರ್’ ಓಪನ್ ಮಾಡಿ: ‘ಗಿರೀಶ್ ಮಟ್ಟೆಣ್ಣವರ’ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಆರ್‌.ಅಶೋಕ್

Share.
Exit mobile version