Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

21/03/2026 2:10 PM

ನಿಮ್ಮನ್ನು ‘ಪೊಲೀಸರು ಅರೆಸ್ಟ್’ ಮಾಡಿದಾಗ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

21/03/2026 1:56 PM

BREAKING : ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ : ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡಲ್ಲ : ಸಚಿವ ರಾಮಲಿಂಗಾರೆಡ್ಡಿ

21/03/2026 1:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ
KARNATAKA

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ

By kannadanewsnow0929/10/2025 7:33 PM

ಬೆಂಗಳೂರು: ಸಾಗರ ತಾಲ್ಲೂಕಿನ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಹೊರಟಿರುವಂತ ಸರ್ಕಾರದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶವಾಗಲಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ, ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಲ್ಲಿಸಬೇಕೆಂದು ಪರಿಸರಾಸಕ್ತರೂ, ರೈತರ ದುಂಡುಮೇಜಿನ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಕೇವಲ 300 ರಿಂದ 400 ಎಕ್ರೆ ಜಮೀನು ಮಾತ್ರ ಉಪಯೋಗಿಸುತ್ತೇವೆಂದು ಹೇಳುತ್ತಾರೆ. ಆದರೆ ಸುಮಾರು ಸಾವಿರದಿಂದ 1000 ಎಕರೆ ಅರಣ್ಯ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಲಕ್ಷಾಂತರ ಮರಗಳು ಧರೆಗೆ ಉರುಳುತ್ತಿವೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ, ಕೇಂದ್ರ ಸರ್ಕಾರದಿಂದ ಅನುಮತಿಯನ್ನು ಪಡೆಯದೆ, ರಾಜ್ಯ ಸರ್ಕಾರವು ಯೋಜನೆಗೆ ಹಣವನ್ನು ಬಿಡುಗಡೆಗೊಳಿಸಿದೆ ಎಂಬುದಾಗಿ ಕಿಡಿಕಾರಿದರು.

1 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ನಾಲ್ಕರಿಂದ ಐದು ರೂಪಾಯಿ ಖರ್ಚಾಗುವ ಬದಲು, ಸುಮಾರು 20 ರಿಂದ 25 ರೂಪಾಯಿ ವೆಚ್ಚ ತೋರಿಸುತ್ತಿದ್ದಾರೆ. ( ಇದು ಸಾವಿರಾರು ಕೋಟಿಗಳ ಲೆಕ್ಕಚಾರದಲ್ಲಿ) ರಾಜ್ಯದ ಕೆಲ ಶಾಸಕರಿಗೂ ಹಾಗೂ ಸಂಬಂಧ ಪಟ್ಟಂತಹ ಸಂಸದರು ಇದರ ಬಗ್ಗೆ ಮಾಹಿತಿ ಗೊತ್ತಿಲ್ಲವೆಂದು ಹೇಳುತ್ತೀದ್ದಾರೆ. ಈ ಯೋಜನೆಯನ್ನು ನಿಲ್ಲಿಸಲು ಕೇಂದ್ರದಿಂದ ಒತ್ತಡ ಹೇರುವುದಾಗಿ ಹೇಳುತ್ತಿದ್ದಾರೆ ಎಂದರು.

ರೈತ ಬಾಂಧವರೇ ಬನ್ನಿ ಮುಂದಿನ ಪೀಳಿಗೆಗಾಗಿ, ವನ್ಯಜೀವಿಗಳ ಸಂರಕ್ಷಣೆಗಾಗಿ, ಸಸ್ಯ ಸಂಕುಲಗಳ ರಕ್ಷಣೆಗಾಗಿ, ದಟ್ಟ ಅರಣ್ಯ ಪ್ರದೇಶಗಳನ್ನು ಉಳಿಸೋಣ, ಹೋರಾಡೋಣ, ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳನ್ನು ಉಳಿಸೋಣ, ಪಶ್ಚಿಮ ಘಟ್ಟಗಳು ಏನಾದರೂ ನಾಶವಾದರೆ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಮೂಲ ನದಿಗಳೆಲ್ಲವೂ ಬತ್ತಿ ಹೋಗುತ್ತವೆ. ಮುಂದೆ ಕುಡಿಯುವ ನೀರಿಗೂ ಕಷ್ಟವಾಗಿ, ನೀರಿಲ್ಲದೆ ವ್ಯವಸಾಯದಿಂದ ಬದುಕು ಕಟ್ಟಿ ಕೊಳ್ಳಲು ಕಷ್ಟವಾಗುತ್ತದೆ. ಬನ್ನಿ ರೈತ ಬಾಂಧವರೇ ಜೊತೆಯಾಗಿ ಹೋರಾಡೋಣ ಜೊತೆಯಾಗಿ ಬಾಳೋಣ ಎಂಬುದಾಗಿ ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಎ ಟಿ ರಾಮಸ್ವಾಮಿ, ನಿವೃತ್ತ ನ್ಯಾಯಾಧೀಶರಾದಂತಹ ಗೋಪಾಲ ಗೌಡ್ರು, ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್, ರೈತ ಹೋರಾಟಗಾರ ಕೆ ಟಿ ಗಂಗಾಧರ್, ಮಾಜಿ ಶಾಸಕ ಹರತಾಳು ಹಾಲಪ್ಪ, ಕೃಷಿ ತಜ್ಞರಾದ ಪ್ರಕಾಶ್ ಕಮ್ಮರಡಿ, ಪಾಂಡೋಮಟ್ಟಿ ವಿರಕ್ತ ಮಠದ ಪೂಜ್ಯರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ರೈತ ಸಂಘದ ಪದಾಧಿಕಾರಿಗಳು, ಪರಿಸರವಾದಿಗಳು, ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?

BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!

Share. Facebook Twitter LinkedIn WhatsApp Email

Related Posts

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

21/03/2026 2:10 PM2 Mins Read

ನಿಮ್ಮನ್ನು ‘ಪೊಲೀಸರು ಅರೆಸ್ಟ್’ ಮಾಡಿದಾಗ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

21/03/2026 1:56 PM2 Mins Read

BREAKING : ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ : ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡಲ್ಲ : ಸಚಿವ ರಾಮಲಿಂಗಾರೆಡ್ಡಿ

21/03/2026 1:47 PM1 Min Read
Recent News

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

21/03/2026 2:10 PM

ನಿಮ್ಮನ್ನು ‘ಪೊಲೀಸರು ಅರೆಸ್ಟ್’ ಮಾಡಿದಾಗ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

21/03/2026 1:56 PM

BREAKING : ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ : ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡಲ್ಲ : ಸಚಿವ ರಾಮಲಿಂಗಾರೆಡ್ಡಿ

21/03/2026 1:47 PM

BREAKING : ಬೆಳಗಾವಿಯಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ಉದ್ಯಮಿಗೆ 15 ಕೋಟಿ ವಂಚನೆ : ಪ್ರಕರಣ ದಾಖಲು!

21/03/2026 1:44 PM
State News
KARNATAKA

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

By kannadanewsnow0921/03/2026 2:10 PM KARNATAKA 2 Mins Read

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಜನರನ್ನು ಹೆದರಿಸಿ ಹಣ ದೋಚಲು ಬಳಸುತ್ತಿರುವ ಹೊಸ ತಂತ್ರವೇ ‘ಡಿಜಿಟಲ್…

ನಿಮ್ಮನ್ನು ‘ಪೊಲೀಸರು ಅರೆಸ್ಟ್’ ಮಾಡಿದಾಗ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

21/03/2026 1:56 PM

BREAKING : ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ : ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡಲ್ಲ : ಸಚಿವ ರಾಮಲಿಂಗಾರೆಡ್ಡಿ

21/03/2026 1:47 PM

BREAKING : ಬೆಳಗಾವಿಯಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ಉದ್ಯಮಿಗೆ 15 ಕೋಟಿ ವಂಚನೆ : ಪ್ರಕರಣ ದಾಖಲು!

21/03/2026 1:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.