ತುಮಕೂರು: ಕಾಲೇಜಿಗೆ ಹೋಗಿ ಸಂಜೆ ಮನೆಗೆ ವಾಪಾಸ್ ಬರುವ ವೇಳೆ ವಿದ್ಯಾರ್ಥಿನಿಯನ್ನು ಎಳೆದಾಡಿ ಬಲವಂತಾಗಿ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ ಯುವಕನ ಬಗ್ಗೆ ದೂರು ನೀಡಿದರೆ,ಆ ಠಾಣೆ ಪೊಲೀಸರು ಮಾತ್ರ ವಿದ್ಯಾರ್ಥಿನಿ ತಂದೆ ಯಿಂದ ಪ್ರಕರಣಕ್ಕೆ ಸಂಪೂರ್ಣ ವಿರುದ್ಧವಾದ ಹೇಳಿಕೆ ಪಡೆದು ಎನ್ಆರ್ ದಾಖಲಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗಡಿ ಠಾಣೆಗಳಲ್ಲಿ ಹುಳಿಯಾರು ಪೊಲೀಸ್ ಠಾಣೆಯಲ್ಲಿರುವ ಪೊಲೀಸರು ವಿದ್ಯಾರ್ಥಿನಿಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಯುವಕನ ಪ್ರಭಾವಕ್ಕೆ ಒಳಗಾಗಿ ಯುವಕನು ಏನು ಮಾಡಿಲ್ಲವೆಂಬದಂತೆ ಸಣ್ಣಪುಟ್ಟಸಬೂಬುಗಳನ್ನು ಉಲ್ಲೇಖಿಸಿ ಎನ್ ಸಿಆರ್ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಪ್ರಕರಣವೇನು..? ಬುಕ್ಕಾಪಟ್ಟಣ ಅರಣ್ಯದಂಚಿನ ಅಂಬಾರಪುರದಿಂದ ಗ್ರಾಮದಿಂದ ಬೆಳ್ಳಾರ ಗ್ರಾಮಕ್ಕೆ ಕಾಡಲ್ಲಿ ನಡೆದುಕೊಂಡು ಹೋಗಿ ಅಲ್ಲಿಂದಬುಕ್ಕಾಪಟ್ಟಣದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಇದೇ ಫೆ.25ರಂದು ಬೆಳಿಗ್ಗೆ 9ರ ಸರಿಸುಮಾರಿಗೆ ಊರಿಂದ ಕಾಡಿನಲ್ಲಿ ನಡೆದುಕೊಂಡು ಬೆಳ್ಳಾರ ಗ್ರಾಮಕ್ಕೆ ಬರುವವೇಳೆಗೆ ಬುಕ್ಕಾಪಟ್ಟಣಕ್ಕೆ ಹೋಗುವ ಬಸ್ ಮಿಸ್ ಆಗಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಗಿರೀಶ್ ವಿದ್ಯಾರ್ಥಿನಿಗೆ ಬಂದೂಕಿನಿಂದ ಸುಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಕಾಡಂಚಿನ ಗ್ರಾಮವಾಗಿರುವುದರಿಂದ ಬೆಳೆರಕ್ಷಣೆಗಾಗಿ ರೈತರು ಬಂದೂಕು ಇಟ್ಟುಕೊಳ್ಳುವುದು ಸಾಮಾನ್ಯ ವಾದರೂ, ಅಂಬಾರಪುರದಲ್ಲಿ ಪರವಾನಿಗೆ ಇಲ್ಲದ ಬಂದೂಕುಗಳ ಸಂಖ್ಯೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಬಸ್ ಸಿಗದ ವಿದ್ಯಾರ್ಥಿನಿ ವಾಪಾಸ್ ಮನೆಗೆ ಹೋಗುವ ಮುಂಚೆ ಸ್ವಲ್ಪ ಸುಧಾರಿಸಿಕೊಳ್ಳಲು ಅಲ್ಲಿಯೇ ಇದ್ದ ಅಂಗಡಿ ಬಳಿ ಕುಳಿತಿರಬೇಕಾದವೇಳೆ ಬೈಕ್ನಲ್ಲಿ ಬಂದ ಅಂಬಾರಪುರದ ಯುವಕ ಗಿರೀಶ್ ವಿದ್ಯಾರ್ಥಿನಿಯನ್ನು ಊರಿಗೆ ಬಿಡುತ್ತೇನೆಬಾಎಂದು ಬೆಳ್ಳಾರದಿಂದ ಬೈಕ್ನಲ್ಲಿ ಕೂರಿಸಿಕೊಂಡುಮಾರ್ಗ ಮಧ್ಯೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಬಲವಂತವಾಗಿ ತುಟಿಗೆ ಮುತ್ತಿಟ್ಟು, ಮೈ ಮೇಲೆ ಕೈ ಹಾಕಿದ್ದಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿದ್ಯಾರ್ಥಿನಿ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದರೆ ಕೂದಲು ಹಿಡಿದು ಎಳೆದಾಡಿ ಯಾರಿಗಾದರೂ ಹೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾನೆ, ಆಕೆಗೆ ಬೈಯುತ್ತಲೇಊರಿಗೆ ಕರೆದುಕೊಂಡು ಬಿಟ್ಟು ಆತ ಮನೆಗೆ ಹೋದರೆ ಇತ್ತ ವಿದ್ಯಾರ್ಥಿನಿ ಮನೆಗೆ ಬಂದು ಅಳುತ್ತ ಕುಳಿತಿದ್ದಾಳೆ. ಸಂಜೆ ಮನೆಗೆ ಬಂದ ಪೋಷಕರಿಗೆ ಮಗಳೊಂದಿಗೆ ಗಿರೀಶ್ ಎಂಬಾತ ಅನುಚಿತವಾಗಿವರ್ತಿಸಿರುವುದು
ಗೊತ್ತಾದ ಬಳಿಕ ಹುಳಿಯಾರು ಪೊಲೀಸ್ ಠಾಣೆಗೆ ಹೋಗಿಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದೇಕ್ರಮಕೈಗೊಳ್ಳದೇ ಯುವಕನ ಪರವಾಗಿ ಎನ್ ಸಿಆರ್ ಮಾಡಿಸಿ ಕೈ ತೊಳೆದುಕೊಂಡಿದ್ದಾರೆ. ಎನ್ಸಿಆರ್ ನಲ್ಲಿಯೂ ನಡೆದಿರುವ ಘಟನೆಯನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ ಎಂದು ವಿದ್ಯಾರ್ಥಿನಿಯ ಮಾವ ರಂಗಸ್ವಾಮಿ (ಹೆಸರು ಬದಲಿಸಲಾಗಿದೆ) ಆರೋಪಿಸಿದ್ದಾರೆ.
ಠಾಣೆಯಲ್ಲಿ ನಡೆದಿದ್ದೇನು?
ಪ್ರಕರಣದ ಬಗ್ಗೆ ಅದೇ ದಿನ ಮಧ್ಯರಾತ್ರಿ ಸ್ಟೇಷನ್ಗೆ ಹೋಗಿ ಕಂಪ್ಲೇಂಟ್ ನೀಡಲು ಹೋದಾಗ ಎಸ್ಐ ಸಾಹೇಬರು ಇಲ್ಲ ಬೆಳಿಗ್ಗೆ ಬನ್ನಿ ಎಂದು ಹಿಂದೆ ಕಳಿಸಿದ್ದಾರೆ ಮತ್ತೆ ಮರುದಿನ ಬೆಳಿಗ್ಗೆ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡಲು ಅದೇ ಊರಿನ ಗಿರೀಶ್ ಎಂಬಾತ ಹಾಗೂ ಅವರ ಮನೆಯವರು ಕಂಪ್ಲೇಂಟ್ ಕೊಡಲು ಬಿಡದೇ ಇಲ್ಲೇ ಬಗೆಹರಿಸಿಕೊಳ್ಳೋಣ ಎಂದು ಧಮ್ಮಿ ಹಾಕಿದ್ದಾರೆ.
ಅದೇ ರೀತಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣವನ್ನು ದಾಖಲಿಸದೇ ಯುವಕನ ಪರವಾಗಿ ಪೊಲೀಸ್ ಸಿಬ್ಬಂದಿ ಬ್ಯಾಟಿಂಗ್ ಮಾಡಿದ್ದು, ವಿದ್ಯಾರ್ಥಿನಿಯ ತಂದೆಯ ಹೇಳಿಕೆ ಹಾಗೂ ಸಹಿಯೊಂದಿಗೆ ಎನ್ಸಿಆರ್ ಮಾಡಿ ಕೈತೊಳೆದುಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆಯದೇ ಇಡೀ ಪ್ರಕರಣವನ್ನು ಲಘುವಾಗಿ ಪರಿಗಣಿಸಿಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದೇ ದಿನದಲ್ಲಿ ಎನ್ ಸಿಆರ್ನಿಂದ ಎಫ್ಐಆರ್..?
ಬುಧವಾರ ಇದೇ ಪ್ರಕರಣದಲ್ಲಿಎನ್ಸಿಆರ್ ಮಾಡಿ ಕೈ ತೊಳೆದುಕೊಂಡಪೊಲೀಸರು ಗುರುವಾರ ಮಹಿಳಾ ಆಯೋಗದ ಮಧ್ಯಪ್ರವೇಶದ ನಂತರ ಎಫ್ಐಆರ್ ದಾಖಲಿಸಿದ್ದಾರೆ.ಬುಧವಾರ ವಿದ್ಯಾರ್ಥಿನಿಯತಂದೆ ಹೇಳಿಕೆಯನ್ನೇ ಮುಂದಿಟ್ಟು ಯುವಕನ ಪರವಾಗಿ ಎನ್ಸಿಆರ ಮಾಡಿದ್ದರು. ಆದರೆ ವಿದ್ಯಾರ್ಥಿನಿಯದಿಟ್ಟ ಹೋರಾಟದಿಂದಾಗಿ ಹುಳಿಯಾರು ಪೊಲೀಸರು ಅನಿವಾರ್ಯವಾಗಿ ಎಫ್ಐಆರ್ ದಾಖಲಿಸುವಂತಾಗಿದ್ದು, ಮಹಿಳಾ ಆಯೋಗಕ್ಕೆ ಕರೆ ಮಾಡಿದ್ದ ವಿದ್ಯಾರ್ಥಿನಿಎಫ್ಐಆರ ದಾಖಲಿಸದ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗದ ಸೂಚನೆ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯವು ನಕಲಿ: UGC ಘೋಷಣೆ
ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮತ








