Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಸೂರು–ಅಜ್ಮೀರ್ ವಿಶೇಷ ರೈಲುಗಳ ಅವಧಿ ವಿಸ್ತರಣೆ

22/08/2025 7:11 PM

ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರ ಸಮಯ ಬಂದಿದೆ: ಆಂಕರ್ ಅನುಶ್ರೀ

22/08/2025 7:10 PM

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ

22/08/2025 7:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ
KARNATAKA

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ

By kannadanewsnow0922/08/2025 7:03 PM

ಬೆಂಗಳೂರು: ರಾಜ್ಯದಲ್ಲಿ ನಮ್ಮ ಸರ್ಕಾರ ಮೇ 2023 ರಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 7460 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 6393, 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ ಬಾಕಿ ಪ್ರಕರಣಗಳಿದ್ದವು. ಅದರಲ್ಲಿ 5 ವರ್ಷಕ್ಕೂ ಹೆಚ್ಚು ಮೇಲ್ಪಟ್ಟ 4894 ಪ್ರಕರಣಗಳು ಬಾಕಿ ಇದ್ದವು ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಪ್ರಯತ್ನದಿಂದ 3729 ಬಾಕಿ ಇದ್ದ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿ, ವಿಲೆ ಮಾಡಲಾಗಿದೆ. ಅದಾಗ್ಯೂ ಇದೇ ಅವಧಿಯಲ್ಲಿ 1545 ಹೊಸ ಪ್ರಕರಣಗಳೂ ದಾಖಲಾಗಿವೆ. ಪ್ರಸ್ತುತ 5276 ಪ್ರಕರಣಗಳು ಬಾಕಿ ಇದ್ದು, ಪ್ರತಿ ತಿಂಗಳು ಸರಾಸರಿಯಾಗಿ 143 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಈ ವಿಳಂಬವು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸೂಕ್ತ ನ್ಯಾಯಾಲಯದ ಆದೇಶವನ್ನು ಪಡೆಯುವಲ್ಲಿ ವಿಳಂಬವು ಸಾಮಾನ್ಯ ಜನರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡುವುದಲ್ಲದೆ ಜನಸಾಮಾನ್ಯರ ಕಿರುಕುಳಕ್ಕೂ ಕಾರಣವಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ನ್ಯಾಯ ಸಿಗದೇ ಹೋದಲ್ಲಿ ನ್ಯಾಯ ವಂಚಿತವಾದ ಹಾಗೆ ಆಗುತ್ತದೆ. (Justice delayed can, in some cases, be justice denied)

ಆದ್ದರಿಂದ, ಸಾಮಾನ್ಯ ಜನರಿಗೆ ಸಕಾಲಿಕ ನ್ಯಾಯವನ್ನು ಖಾತ್ರಿಪಡಿಸಲು, ವಿಳಂಬ ಮತ್ತು ಕಿರುಕುಳವನ್ನು ತಡೆಗಟ್ಟಲು, ಕಾಲಮೀತಿಯಲ್ಲಿ ಜನರಿಗೆ ನ್ಯಾಯ ಒದಗಿಸಲು ನಮ್ಮ ಸರ್ಕಾರವು ಬೆಂಗಳೂರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಹಳೆಯ ಪ್ರಕರಣಗಳ ವಿಲೇವಾರಿಗಾಗಿ ಹೆಚ್ಚುವರಿಯಾಗಿ 07 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಲು ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಐ.ಎ.ಎಸ್‌ ಅಧಿಕಾರಿಗಳಾದ ರಮೇಶ್ ಕೆ.ಎನ್, ಎಚ್.ಎನ್. ಗೋಪಾಲಕೃಷ್ಣ, ಮುಲ್ಲೈಮುಗಿಲನ್ ಎಂ.ಪಿ., ಡಾ. ಅರುಂಧತಿ ಚಂದ್ರಶೇಖರ್, ಸೆಲ್ವಮಣಿ, ಹೊನ್ನಾಂಬ ಹಾಗೂ ವಿದ್ಯಾಕುಮಾರಿ ರವರುಗಳನ್ನು ಬೆಂಗಳೂರು ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇದಲ್ಲದೇ, ಎಸ್.ಎನ್.‌ ಬಾಲಚಂದ್ರ ಹಾಗೂ ಅರ್ಚನಾ ಮುಂಚಿನಿಂದಲೂ ವಿಶೇಷ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇದರೊಂದಿಗೆ ವಿಶೇಷ ಜಿಲ್ಲಾಧಿಕಾರಿಗಳ ಸಂಖ್ಯೆ 09ಕ್ಕೆ ಏರಿದೆ. ಇದಲ್ಲದೆ, ಜಿಲ್ಲಾಧಿಕಾರಿಗಳೂ ಸಹ ತಮ್ಮ ಕತ್ಯವ್ಯದ ಜೊತೆಗೆ ತಮ್ಮ ಬಳಿಯಲ್ಲಿರುವ ಕೋರ್ಟ್ ಕೇಸ್ ವಿಲೇವಾರಿಗೂ ಗಮನ ನೀಡಲಿದ್ದಾರೆ.

ಎಲ್ಲಾ ವಿಶೇಷ ಜಿಲ್ಲಾಧಿಕಾರಿಗಳಿಗೂ 500 ರಿಂದ 700 ಪ್ರಕರಣಗಳನ್ನು ನಿಗದಿಗೊಳಿಸಿ, ಅವುಗಳನ್ನು ಇತ್ಯರ್ಥಗೊಳಿಸಿ ಆದೇಶ ಹೊರಡಿಸಿ ಅನೇಕ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ವಿಲೆ ಮಾಡಬೇಕು ಎಂಬ ಗುರಿಯನ್ನು ನಿಗಧಿಪಡಿಸಲಾಗಿದೆ. ಈ ಪ್ರಯತ್ನದ ಮೂಲಕ ನಮ್ಮ ಸರ್ಕಾರವು ಮುಂದಿನ 6 ತಿಂಗಳೊಳಗೆ ದೀರ್ಘಕಾಲದಿಂದ ಬಾಕಿ ಇರುವ ಈ ಪ್ರಕರಣಗಳನ್ನು ವಿಲೇವಾರಿ ಮಾಡಲು ದೃಢಪ್ರಯತ್ನವನ್ನು ಮಾಡುತ್ತಿದೆ.

BREAKING: ಕಲಬುರ್ಗಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಶಾಲಾ ಮೇಲ್ಛಾವಣಿ ಕುಸಿದು ಬಿದ್ದು ಮೂವರು ವಿದ್ಯಾರ್ಥಿಗಳಿಗೆ ಗಾಯ

ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?

Share. Facebook Twitter LinkedIn WhatsApp Email

Related Posts

ಮೈಸೂರು–ಅಜ್ಮೀರ್ ವಿಶೇಷ ರೈಲುಗಳ ಅವಧಿ ವಿಸ್ತರಣೆ

22/08/2025 7:11 PM1 Min Read

ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರ ಸಮಯ ಬಂದಿದೆ: ಆಂಕರ್ ಅನುಶ್ರೀ

22/08/2025 7:10 PM1 Min Read

BREAKING: ಕರ್ನಾಟಕದ ‘ಉಭಯ ಸದನ’ಗಳಲ್ಲಿ ಬರೋಬ್ಬರಿ ’37 ಮಸೂದೆ’ಗಳು ಅಂಗೀಕಾರ

22/08/2025 6:43 PM3 Mins Read
Recent News

ಮೈಸೂರು–ಅಜ್ಮೀರ್ ವಿಶೇಷ ರೈಲುಗಳ ಅವಧಿ ವಿಸ್ತರಣೆ

22/08/2025 7:11 PM

ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರ ಸಮಯ ಬಂದಿದೆ: ಆಂಕರ್ ಅನುಶ್ರೀ

22/08/2025 7:10 PM

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ

22/08/2025 7:03 PM

ಸಂದರ್ಶನಗಳಿಲ್ಲ, ಕಾಗದಪತ್ರಗಳಿಲ್ಲ: ಡಿಜಿಟಲ್ ನೇಮಕಾತಿ ಮಾರ್ಗಕ್ಕೆ ಬದಲಾಗ್ತಿರುವ ‘SSC’

22/08/2025 6:56 PM
State News
KARNATAKA

ಮೈಸೂರು–ಅಜ್ಮೀರ್ ವಿಶೇಷ ರೈಲುಗಳ ಅವಧಿ ವಿಸ್ತರಣೆ

By kannadanewsnow0922/08/2025 7:11 PM KARNATAKA 1 Min Read

ಮೈಸೂರು: ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿ 06281/06282 ಮೈಸೂರು–ಅಜ್ಮೀರ್– ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಣೆಯನ್ನು ಅನುಮೋದಿಸಿದೆ. ಈ…

ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರ ಸಮಯ ಬಂದಿದೆ: ಆಂಕರ್ ಅನುಶ್ರೀ

22/08/2025 7:10 PM

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಕೋರ್ಟ್ ಕೇಸ್ ವಿಲೇಗೆ 7 ಜನ ವಿಶೇಷ ಜಿಲ್ಲಾಧಿಕಾರಿಗಳ ನೇಮಕ

22/08/2025 7:03 PM

BREAKING: ಕರ್ನಾಟಕದ ‘ಉಭಯ ಸದನ’ಗಳಲ್ಲಿ ಬರೋಬ್ಬರಿ ’37 ಮಸೂದೆ’ಗಳು ಅಂಗೀಕಾರ

22/08/2025 6:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.