Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯ ಬಿಸಿಲಿಗೆ ಬಾಡದಿರಲಿ ನಿಮ್ಮ ಆರೋಗ್ಯ: ಮನೆಯಲ್ಲೇ ಮಾಡಬಹುದಾದ 5 ‘ಡಿಟಾಕ್ಸ್’ ಪಾನೀಯಗಳು ಇಲ್ಲಿವೆ!

30/04/2026 8:45 PM

ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ

30/04/2026 8:31 PM

ಒಂದೇ ಮನೆಯಲ್ಲಿ LPG ಮತ್ತು PNG ಎರಡೂ ಇರುವಂತಿಲ್ಲ: ಸರ್ಕಾರದ ಹೊಸ ರೂಲ್ಸ್! ಪೆಟ್ರೋಲಿಯಂ ಸಚಿವಾಲಯದಿಂದ ಸಮೀಕ್ಷೆ ಆರಂಭ

30/04/2026 8:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ
KARNATAKA

ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ

By kannadanewsnow0930/04/2026 8:31 PM

ಶಿವಮೊಗ್ಗ: 2026 ರಿಂದ 2031ನೇ ಸಾಲಿನ ಅವಧಿಗಾಗಿ ನಡೆಯಲಿರುವ ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ಕಳೆಗಟ್ಟಿದೆ. ನಾಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ವು ತಾಲೂಕಿನಾದ್ಯಂತ ಸಂಚರಿಸಿ ಮತದಾರರ ಪ್ರಭುಗಳಾದ ಶಿಕ್ಷಕರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದೆ.

ಈ ಕುರಿತು ತಂಡದ ಶಿಕ್ಷಕರಾದಂತ ದೇವೇಂದ್ರಪ್ಪ.ಕೆ ಅವರು ಮಾತನಾಡಿ, ತಮ್ಮ ತಂಡದ ಪ್ರಮುಖ ಅಂಶಗಳನ್ನು ಹಂಚಿಕೊಂಡರು :

ಚುನಾವಣಾ ದಿನಾಂಕ:

ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಣಿ ಚುನಾವಣೆಯು ಮೇ 1, 2026ರ ನಾಳೆ ನಡೆಯಲಿದೆ.

ಸ್ವಾಭಿಮಾನಿ ಶಿಕ್ಷಕರ ತಂಡದ ಉದ್ದೇಶ ಮತ್ತು ಭರವಸೆಗಳು:

  • ಶಿಕ್ಷಕ ಸ್ನೇಹಿ ಕಾರ್ಯಕ್ರಮ: ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನೇಕ ಶಿಕ್ಷಕ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

  • ಒತ್ತಡ ನಿವಾರಣೆ: ಪ್ರಸ್ತುತ ಶಿಕ್ಷಕರು ಬಿ.ಎಲ್.ಒ (BLO) ಕರ್ತವ್ಯ, ಗಣತಿ ಕಾರ್ಯ ಸೇರಿದಂತೆ ಇಲಾಖೆಯ ಕೆಲಸದ ಒತ್ತಡದಲ್ಲಿದ್ದಾರೆ. ವಿಶೇಷವಾಗಿ ನಿವೃತ್ತಿಯ ಅಂಚಿನಲ್ಲಿರುವವರು, ಅನಾರೋಗ್ಯ ಪೀಡಿತರು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸದ ಒತ್ತಡದಿಂದ ವಿಮುಖಗೊಳಿಸಲು ಶ್ರಮಿಸುವುದಾಗಿ ತಂಡ ಭರವಸೆ ನೀಡಿದೆ.

  • ಸಮಸ್ಯೆಗಳ ಪರಿಹಾರ: ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ, ಇಲಾಖೆ ಹಾಗೂ ಮೇಲಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಈಗಾಗಲೇ ಮಾಡಲಾದ ಕಾರ್ಯಗಳು:

ತಂಡವು ಈಗಾಗಲೇ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲಕ ಸುಮಾರು 70 ಲಕ್ಷ ರೂಪಾಯಿಗೂ ಹೆಚ್ಚು ವೈದ್ಯಕೀಯ ಮರುಪಾವತಿ (Reimbursement) ಹಣವನ್ನು ಮಂಜೂರು ಮಾಡಿಸಿ, ಶಿಕ್ಷಕರ ಖಾತೆಗಳಿಗೆ ವರ್ಗಾವಣೆಯಾಗುವಂತೆ ಕ್ರಮ ಕೈಗೊಂಡಿರುವುದಾಗಿ ಶಿಕ್ಷಕ ದೇವೇಂದ್ರಪ್ಪ.ಕೆ ತಿಳಿಸಿದ್ದಾರೆ.

ಸಂಘಟನಾತ್ಮಕವಾಗಿ ಉತ್ತಮ ತಂಡವನ್ನು ಕಟ್ಟಿಕೊಂಡಿರುವ ‘ಸ್ವಾಭಿಮಾನಿ ಶಿಕ್ಷಕರ ತಂಡ’ಕ್ಕೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಅಭೂತಪೂರ್ವ ಯಶಸ್ಸು ತಂದುಕೊಡಬೇಕು ಎಂದು ಸಮಸ್ತ ಶಿಕ್ಷಕ ವೃಂದದಲ್ಲಿ ತಂಡವು ವಿನಂತಿಸಿದ್ದಾರೆ.

ಸ್ವಾಭಿಮಾನಿ ಶಿಕ್ಷಕರ ತಂಡದಲ್ಲಿ

ಜಗನ್ನಾಥ್ ಕೆ. ಮತ್ತು ದೇವೇಂದ್ರಪ್ಪ ಕೆ. ಅವರ ಸಮರ್ಥ ಹಾಗೂ ಅನುಭವಿ ಮುಂದಾಳತ್ವದಲ್ಲಿ ಈ ಬಾರಿ “ಸ್ವಾಭಿಮಾನಿ ಶಿಕ್ಷಕ ಬಳಗ”ವು ಶಿಕ್ಷಕರ ಹಿತರಕ್ಷಣೆ ಮತ್ತು ಸಂಘಟನೆಯ ಆಶಯದೊಂದಿಗೆ ಮತದಾರರ ಮುಂದೆ ಬಂದಿದೆ. ಶಿಕ್ಷಕರ ವೃತ್ತಿ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಂಘವನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವುದು ಈ ತಂಡದ ಪ್ರಮುಖ ಗುರಿಯಾಗಿದೆ.

ಆಯ್ಕೆ ನಿಮ್ಮದು – ಸೇವೆ ನಮ್ಮದು

ತಮ್ಮ ತಂಡವನ್ನು ಬೆಂಬಲಿಸುವಂತೆ ಕೋರುತ್ತಿರುವ ‘ಸ್ವಾಭಿಮಾನಿ ಶಿಕ್ಷಕ ಬಳಗ’ವು “ಆಯ್ಕೆ ನಿಮ್ಮದು – ಸೇವೆ ನಮ್ಮದು” ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಮತದಾರರ ವಿಶ್ವಾಸ ಗೆಲ್ಲಲು ಮುಂದಾಗಿದೆ. ಶಿಕ್ಷಕರ ಸಂಘದ ಈ ಚುನಾವಣೆಯು ಕೇವಲ ಒಂದು ಅಧಿಕಾರ ಹಂಚಿಕೆಯ ಪ್ರಕ್ರಿಯೆಯಾಗದೆ, ತಾಲೂಕಿನ ಶಿಕ್ಷಣ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

Share. Facebook Twitter LinkedIn WhatsApp Email

Related Posts

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

30/04/2026 7:48 PM1 Min Read

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

30/04/2026 7:45 PM2 Mins Read

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM1 Min Read
Recent News

ಬೇಸಿಗೆಯ ಬಿಸಿಲಿಗೆ ಬಾಡದಿರಲಿ ನಿಮ್ಮ ಆರೋಗ್ಯ: ಮನೆಯಲ್ಲೇ ಮಾಡಬಹುದಾದ 5 ‘ಡಿಟಾಕ್ಸ್’ ಪಾನೀಯಗಳು ಇಲ್ಲಿವೆ!

30/04/2026 8:45 PM

ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ

30/04/2026 8:31 PM

ಒಂದೇ ಮನೆಯಲ್ಲಿ LPG ಮತ್ತು PNG ಎರಡೂ ಇರುವಂತಿಲ್ಲ: ಸರ್ಕಾರದ ಹೊಸ ರೂಲ್ಸ್! ಪೆಟ್ರೋಲಿಯಂ ಸಚಿವಾಲಯದಿಂದ ಸಮೀಕ್ಷೆ ಆರಂಭ

30/04/2026 8:20 PM

ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್ 2026: ಅಸ್ಸಾಂನಲ್ಲಿ ಬಿಜೆಪಿ ಸುನಾಮಿ, ಕೇರಳದಲ್ಲಿ ಯುಡಿಎಫ್‌ಗೆ ಸಣ್ಣ ಮುನ್ನಡೆ, ತಮಿಳುನಾಡಿನಲ್ಲಿ ಡಿಎಂಕೆ ದರ್ಬಾರ್!

30/04/2026 8:09 PM
State News
KARNATAKA

ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ

By kannadanewsnow0930/04/2026 8:31 PM KARNATAKA 2 Mins Read

ಶಿವಮೊಗ್ಗ: 2026 ರಿಂದ 2031ನೇ ಸಾಲಿನ ಅವಧಿಗಾಗಿ ನಡೆಯಲಿರುವ ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ…

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

30/04/2026 7:48 PM

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

30/04/2026 7:45 PM

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.