ಗದಗ : ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? ಪಿಎಫ್ಐ ಸಂಘಟನೆ  ಸಿದ್ದರಾಮಯ್ಯರ ಕೂಸು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಗದಗದಲ್ಲಿ ಮಾನಾಡಿದ ಕಟೀಲ್ ‘ ಎಸ್. ಸಿ , ಎಸ್ ಟಿ ಮೀಸಲಾತಿ ನಮ್ಮ ಕೂಸು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಕಟೀಲ್ ತಿರುಗೇಟು ನೀಡಿದ್ದು, ಈ ಹಿಂದೆ ಸಿದ್ದರಾಮಯ್ಯಅಧಿಕಾರದಲ್ಲಿದ್ದಾಗ ಏನು ಮಾಡಿದರು. ಎಸ್ ಸಿ , ಎಸ್ ಟಿಗೆ ಮೀಸಲಾತಿ ಹೆಚ್ಚಳ ಮಾಡಬಹುದಿತ್ತಲ್ವಾ  ? ಎಂದು ಪ್ರಶ್ನಿಸಿದ್ದಾರೆ.

ಇಂದು ಎಸ್. ಸಿ , ಎಸ್ ಟಿ ಬೇಡಿಕೆಗೆ ಗೌರವ ನೀಡಿದ್ದೇ ಸಿಎಂ ಬೊಮ್ಮಾಯಿ ಸರ್ಕಾರ, ಐದು ವರ್ಷ ಸಿಎ  ಆಗಿದ್ದರು. ಅಂದು ಆ ಕೆಲಸ ಮಾಡದೇ ಕಾಲಹರಣ ಮಾಡಿದರು,ಯಾರೋ ಹುಟ್ಟಿಸಿದ  ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯರದ್ದು ಅನೈತಿಕ ಸಂಬಂಧದ ರಾಜಕಾರಣ ಮಾಡಿದ್ದಾರೆ. H.D.ದೇವೇಗೌಡರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಗುರುಗಳನ್ನೇ ಮೆಟ್ಟಿ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋದರು ಎಂದು ವಾಗ್ಧಾಳಿ ನಡೆಸಿದರು.

BIGG NEWS : ಭಕ್ತರಿಗೆ ಮುಖ್ಯ ಮಾಹಿತಿ ; ಸೂರ್ಯ, ಚಂದ್ರ ಗ್ರಹಣ ಎಫೆಕ್ಟ್: ಈ 2 ದಿನ ‘ತಿರುಪತಿ ತಿಮ್ಮಪ್ಪ’ನ ದರ್ಶನ ಭಾಗ್ಯ ಇಲ್ಲ

BREAKING NEWS: ಕಾಂಗ್ರೆಸ್‌ ಮಾಜಿ ಶಾಸಕ ಎನ್‌ಟಿ ಬೊಮ್ಮಣ್ಣ ನಿಧನ; ಗಣ್ಯರ ಸಂತಾಪ

Share.
Exit mobile version