Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ತಮಿಳುನಾಡಿನ ಶಿವಕಾಶಿ ಪಟಾಕಿ ಘಟಕದಲ್ಲಿ ಸ್ಫೋಟ; 5 ಸಾವು | Blast at firecrackers unit

01/07/2025 10:51 AM

BIG NEWS : ಇಂದಿನಿಂದ ರೈಲು ಟಿಕೆಟ್ ದರ ಏರಿಕೆ : ಆಧಾರ್ ಕಡ್ಡಾಯ, ರೈಲ್ವೆಯಲ್ಲಿ ಹಲವು ಬದಲಾವಣೆ | Railway Fare Hike

01/07/2025 10:48 AM

BIG NEWS : ಹೊಸ AI ಆಧಾರಿತ ವೈಶಿಷ್ಟ್ಯ `AskDISHA 2.0’ ರಿಲೀಸ್ : ರೈಲು ಟಿಕೆಟ್ ಬುಕ್ಕಿಂಗ್ ಇನ್ನೂ ಸುಲಭ.!

01/07/2025 10:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂಡೂರು ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು- ಚುನಾವಣಾ ಆಯೋಗ ಘೋಷಣೆ
KARNATAKA

ಸಂಡೂರು ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು- ಚುನಾವಣಾ ಆಯೋಗ ಘೋಷಣೆ

By kannadanewsnow0923/11/2024 5:00 PM

ಬಳ್ಳಾರಿ : 95-ಸಂಡೂರು (ಪ.ಪಂ) ವಿಧಾನಸಭೆ ಉಪಚುನಾವಣೆಯ ಫಲಿತಾಂಶವು ಶನಿವಾರ ಹೊರಬಿದ್ದಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದು, 9,649 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರ ಪ್ರತಿಸ್ಪರ್ಧಿಯಾದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಬಂಗಾರ ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.

ಉಳಿದಂತೆ, ಕರ್ನಾಟಕ ಜನತಾ ಪಕ್ಷದ ಅಂಜಿನಪ್ಪ.ಎನ್ ಅವರು 632 ಮತ ಗಳಿಸಿದರೆ, ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿ ಅವರು 211, ಟಿ.ರ‍್ರಿಸ್ವಾಮಿ ಅವರು ಅವರು 271 ಮತ್ತು ಎನ್.ವೆಂಕಣ್ಣ ಅವರು 461 ಮತ ಗಳಿಸಿದ್ದಾರೆ. ನೋಟಾಗೆ ಒಟ್ಟು 1,040 ಮತಗಳು ದಾಖಲಾಗಿವೆ.

ಅಂಚೆ ಮತದಾನಕ್ಕೆ ಸಂಬAಧಿಸಿದAತೆ ಒಟ್ಟು 20 ಮತಗಳು ಚಲಾಯಿಸಲಾಗಿದ್ದು, ಈ ಪೈಕಿ ಕಾಂಗ್ರೆಸ್‌ನ ಈ.ಅನ್ನಪೂರ್ಣ ಅವರಿಗೆ 10 ಅಂಚೆ ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ ಅವರಿಗೆ 06 ಮತಗಳು ಬಂದಿದ್ದು, 04 ಅಂಚೆ ಮತಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತಗೊಂಡವು.

253 ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲು ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಒಟ್ಟು 19 ಸುತ್ತುಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು.

ಮತ ಎಣಿಕೆ ಕೇಂದ್ರಕ್ಕೆ ಬಿಗಿ-ಬಂದೋಬಸ್ತ್

ಮತ ಎಣಿಕೆಗಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸಂಬAಧಿಸಿದAತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯೂ ಕೈಗೊಂಡು, ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು ಎರಡು ಹಂತಗಳಲ್ಲಿ ತಪಾಸಣೆ ನಡೆಸಿ, ಕೇಂದ್ರಕ್ಕೆ ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು.

ಪೂರ್ವ ನಿಗದಿಯಂತೆ ಶನಿವಾರದಂದು ಬೆಳಿಗ್ಗೆ 7.30 ಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ.ದಿವ್ಯಾ ಎಸ್.ಅಯ್ಯರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿಜೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಂಡೂರು ತಹಶೀಲ್ದಾರ ಅನಿಲ್ ಕುಮಾರ್ ಸೇರಿದಂತೆ ಚುನಾವಣಾ ಏಜೆಂಟರುಗಳ ಹಾಗೂ ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ಟಾçಂಗ್ ರೂಂನ್ನು ತೆರೆಯಲಾಯಿತು.

ಬಳಿಕ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರಾರಂಭಿಸಲಾಯಿತು. ನಂತರ ಭದ್ರತಾ ಕೋಣೆಯಲ್ಲಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕಾ ಕೊಠಡಿಗಳಿಗೆ ಆಯಾ ಸುತ್ತು ಮತ ಎಣಿಕೆಯ ಸಂದರ್ಭದಲ್ಲಿ ಒಯ್ಯಲಾಯಿತು.

ಮತ ಎಣಿಕೆ ಪ್ರಾರಂಭವಾದ ಮೊದಲ ಸುತ್ತಿನಿಂದ ಆರು ಸುತ್ತಿನವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರು ಸಮೀಪದ ಸ್ಪರ್ಧಿ ಬಿಜೆಪಿ ಪಕ್ಷದ ಬಂಗಾರ ಹನುಮಂತ ಅವರಿಗಿಂತಲೂ ಮತ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

ಆರು ಮತ್ತು ಏಳನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

ಬಿಜೆಪಿ ಪಕ್ಷದ ಬಂಗಾರ ಹನುಮಂತ ಅವರು ಆರನೇ ಸುತ್ತಿನಲ್ಲಿ 253 ಮತ ಮತ್ತು ಏಳನೇ ಸುತ್ತಿನಲ್ಲಿ 867 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಉಳಿದ ಎಲ್ಲ ಸುತ್ತುಗಳಲ್ಲಿ ಈ.ಅನ್ನಪೂರ್ಣ ಅವರೇ ಮುನ್ನಡೆ ಪಡೆದರು.

ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು 14+1 ಟೇಬಲ್ ಕಾಯ್ದಿರಿಸಲಾಗಿತ್ತು. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸವರ‍್ಸ್ಗಳನ್ನು ನಿಯೋಜಿಸಲಾಗಿತ್ತು. ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ‍್ಸ್ಗಳನ್ನು ನೇಮಿಸಿದ್ದು, ಸಂಡೂರು ಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮತ ಎಣಿಕಾ ಕೇಂದ್ರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿ ಮತ್ತು ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಭದ್ರತೆ ನೀಡಲಾಗಿತ್ತು. ಮಾಧ್ಯಮ ಕೇಂದ್ರದ ಮೂಲಕ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಜನತೆಗೆ ತಲುಪಿಸಲು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು.

ಮತ ಎಣಿಕೆಯ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಹೊರಗಡೆ ಮತ್ತು ಒಳಗಡೆ ಸೂಕ್ತವಾದ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಕ್ತಾಯಗೊಂಡ ನಂತರ ಸಂಡೂರು ವಿಧಾನಸಭೆಯ ಉಪಚುನಾವಣೆಯ ಚುನಾವಣಾಧಿಕಾರಿ ಅವರು ಫಲಿತಾಂಶ ಪ್ರಕಟಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.

‘ವಿಪಕ್ಷಗಳ ನಾಯಕ’ರು ಉಪ ಚುನಾವಣೆ ಸೋಲಿನ ನೈತಿಕತೆ ಹೊತ್ತು ರಾಜೀನಾಮೆ ನೀಡಿ: ರಮೇಶ್ ಬಾಬು ಆಗ್ರಹ

ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS

Share. Facebook Twitter LinkedIn WhatsApp Email

Related Posts

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಒಂದುವರೆ ತಿಂಗಳ ಬಾಣಂತಿ ಬಲಿ : 40 ದಿನಗಳಲ್ಲಿ 25 ಜನರು ಸಾವು!

01/07/2025 10:45 AM1 Min Read

BREAKING : MP ಎಲೆಕ್ಷನ್ ನಲ್ಲಿ 4.8 ಕೋಟಿ ನಗದು ಪತ್ತೆ ಕೇಸ್ : ಸಂಸದ ಕೆ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

01/07/2025 10:36 AM1 Min Read

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

01/07/2025 10:27 AM1 Min Read
Recent News

BREAKING: ತಮಿಳುನಾಡಿನ ಶಿವಕಾಶಿ ಪಟಾಕಿ ಘಟಕದಲ್ಲಿ ಸ್ಫೋಟ; 5 ಸಾವು | Blast at firecrackers unit

01/07/2025 10:51 AM

BIG NEWS : ಇಂದಿನಿಂದ ರೈಲು ಟಿಕೆಟ್ ದರ ಏರಿಕೆ : ಆಧಾರ್ ಕಡ್ಡಾಯ, ರೈಲ್ವೆಯಲ್ಲಿ ಹಲವು ಬದಲಾವಣೆ | Railway Fare Hike

01/07/2025 10:48 AM

BIG NEWS : ಹೊಸ AI ಆಧಾರಿತ ವೈಶಿಷ್ಟ್ಯ `AskDISHA 2.0’ ರಿಲೀಸ್ : ರೈಲು ಟಿಕೆಟ್ ಬುಕ್ಕಿಂಗ್ ಇನ್ನೂ ಸುಲಭ.!

01/07/2025 10:45 AM

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಒಂದುವರೆ ತಿಂಗಳ ಬಾಣಂತಿ ಬಲಿ : 40 ದಿನಗಳಲ್ಲಿ 25 ಜನರು ಸಾವು!

01/07/2025 10:45 AM
State News
KARNATAKA

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಒಂದುವರೆ ತಿಂಗಳ ಬಾಣಂತಿ ಬಲಿ : 40 ದಿನಗಳಲ್ಲಿ 25 ಜನರು ಸಾವು!

By kannadanewsnow0501/07/2025 10:45 AM KARNATAKA 1 Min Read

ಹಾಸನ : ಹಾಸನದಲ್ಲಿ ದಿನೇ ದಿನೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ತಾನೆ ಹೃದಯಾಘಾಟಕ್ಕೆ ಹಾಸನ ಜಿಲ್ಲೆಯ…

BREAKING : MP ಎಲೆಕ್ಷನ್ ನಲ್ಲಿ 4.8 ಕೋಟಿ ನಗದು ಪತ್ತೆ ಕೇಸ್ : ಸಂಸದ ಕೆ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

01/07/2025 10:36 AM

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

01/07/2025 10:27 AM

BIG NEWS : ಬೆಂಗಳೂರಲ್ಲಿ ನೀರಜ್ ಚೋಪ್ರಾ ಜೊತೆ ಫೋಟೋ ತೆಗೆಸಿಕೊಂಡ ವಿದ್ಯಾರ್ಥಿ ನಾಪತ್ತೆ : ದೂರು ದಾಖಲು!

01/07/2025 10:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.