Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ದ್ವಿಪಕ್ಷೀಯ ಸಹಕಾರಕ್ಕೆ ವೇಗ

09/03/2026 7:23 PM

OMG : ಇದೊಂತರ ಕೃಷಿ, ಹಾವುಗಳನ್ನ ಸಾಕಿ, ಕೋಟಿಗಟ್ಟಲೆ ಸಂಪಾದಿಸ್ತಿರುವ ರೈತರು ; ಎಲ್ಲಿ ಗೊತ್ತಾ?

09/03/2026 7:21 PM

GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ

09/03/2026 7:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಪೇಟೆ ಠಾಣೆ ಪೊಲೀಸರಿಂದ ATMನಿಂದ ಹಣ ತೆಗೆಯುತ್ತಿದ್ದವರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ
KARNATAKA

ಸಾಗರ ಪೇಟೆ ಠಾಣೆ ಪೊಲೀಸರಿಂದ ATMನಿಂದ ಹಣ ತೆಗೆಯುತ್ತಿದ್ದವರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

By kannadanewsnow0911/02/2025 10:18 PM

ಶಿವಮೊಗ್ಗ: ಎಟಿಎಂಗೆ ಹಣ ತೆಗೆಯಲು ಬಂದ ಮುಗ್ದ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನು ವಂಚಿಸುತ್ತಿದ್ದಂತ ಇಬ್ಬರು ಆರೋಪಿಗಳನ್ನು ಸಾಗರ ಪೇಟೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಅಕ್ಟೋಬರ್ ನಲ್ಲಿ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಗಲ್ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುತ್ತಿದ್ದಂತ ವಯೋ ವೃದ್ಧರನ್ನು ವಂಚಿಸಿದ್ದ ಬಗ್ಗೆ ದೂರು ದಾಖಲಾಗಿತ್ತು. ವಯೋ ವೃದ್ಧರಿಂದ ಎಟಿಎಂ ಹಾಗೂ ಅದರ ಪಿನ್ ಪಡೆದು ತಾಳಗುಪ್ಪ ಎಸ್ ಬಿ ಐ ಬ್ಯಾಂಕ್ ಎಟಿಎಂನಿಂದ 1,49,999 ಹಣವನ್ನು ಡ್ರಾ ಮಾಡಿಕೊಂಡಿರೋ ಬಗ್ಗೆ ದೂರು ದಾಖಲಾಗಿತ್ತು ಎಂದಿದ್ದಾರೆ.

ಇದೇ ರೀತಿಯಲ್ಲಿ ಶಿರಾಳಕೊಪ್ಪದಲ್ಲಿಯೂ ಒಬ್ಬ ಮಹಿಳೆಯನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್, ಪಿನ್ ಪಡೆದು ಸುಮಾರು 95,000 ಹಣವನ್ನು ಡ್ರಾ ಮಾಡಿಕೊಂಡಿದ್ದ ಬಗ್ಗೆಯೂ ಶಿರಾಳಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂಬುದಾಗಿ ಮಾಹಿತಿ ನೀಡಿದರು.

ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮ್ ರೆಡ್ಡಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಕಾರಿಯಪ್ಪ.ಎಜಿ ಅವರು ತಮ್ಮ ಮೇಲ್ವಿಚಾರಣೆಯಲ್ಲಿ ತಂಡವನ್ನು ರಚಿಸಿದ್ದರು ಎಂದರು.

ಎಟಿಎಂನಿಂದ ಹಣ ತೆಗೆಯುತ್ತಿದ್ದ ಮುಗ್ದರವನ್ನು ವಂಚಿಸಿದ ಆರೋಪಿಗಳ ಪತ್ತೆಗಾಗಿ ಸಾಗರ ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್, ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್ಐ ಯಲ್ಲಪ್ಪ ಹಿರಗಣ್ಣನವರ, ಕಾರ್ಗಲ್ ಠಾಣೆ ಪಿಎಸ್ಐ ಹೊಳೆಬಸಪ್ಪ ಹೊಳಿ, ಸಿಬ್ಬಂದಿಗಳಾದ ಹೆಡ್ ಕಾನ್ ಸ್ಟೇಬಲ್ ಸನಾವುಲ್ಲ, ಪಿಸಿ ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ, ಮೆಹಬೂಬ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದಾಗಿ ಹೇಳಿದರು.

ಈ ತಂಡವು ವಿವಿಧೆಡೆ ತನಿಖೆಯನ್ನು ನಡೆಸಿ, ಟೆಕ್ನಿಕಲ್ ಎವಿಡೆನ್ಸ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿದೆ. ಈ ಎರಡು ಪ್ರಕರಣ ಸಂಬಂಧ ಆರೋಪಿಗಳಾದಂತ ಜೋಗಿನ್ ದಾರ್ ಹಾಗೂ ಮುಖೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬಂಧಿತ ಆರೋಪಿಗಳಿಂದ ಕಾರ್ಗಲ್ ಠಾಣೆಯಲ್ಲಿ ದಾಖಲಾಗಿದ್ದಂತ ಪ್ರಕರಣ ಸಂಬಂಧ ರೂ.60,000 ಹಾಗೂ ಶಿರಾಳಕೊಪ್ಪ ಠಾಣೆಯಲ್ಲಿ ದಾಖಲಾಗಿದ್ದಂತ ಕೇಸ್ ಸಂಬಂಧ ರೂ.40,000 ಜೊತೆಗೆ ಸುಮಾರು 3,00,000 ಮೌಲ್ಯದ ರಾಯಲ್ ಎನ್ ಪೀಲ್ಡ್ ಹಂಟರ್ ಬೈಕ್ ಸೀಜ್ ಮಾಡಲಾಗಿದೆ ಎಂದಿದ್ದಾರೆ.

ದೇವಸ್ಥಾನ ಕಳ್ಳತನದ ಕುಖ್ಯಾತ ಆರೋಪಿ ಅರೆಸ್ಟ್

ಇನ್ನೂ ಸಾಗರ ಪೇಟೆಯ ಎಸ್ ಪಿ ಎಂ ರಸ್ತೆಯಲ್ಲಿರುವಂತ ನಗರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿ ಶಿರವಂತೆಯ ಶಿವಕುಮಾರ್ ಬಂಧಿಸಲಾಗಿದ್ದು, ಬಂದಿತ ಆರೋಪಿಯಿಂದ 30 ಗ್ರಾಂ 570 ಮಿಲಿ ತೂಕದ ಅಂದಾಜು 2,00,000 ಬಂಗಾರದ ಮಾಂಗಲ್ಯ ಸರವನ್ನು ಸಾಗರ ಪೇಟೆ ಠಾಣೆಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಗಮನಿಸಿ : ನಿಮ್ಮ ‘ಮೊಬೈಲ್’ ಕಳೆದುಹೋದ್ರೆ ತಪ್ಪದೇ ಈ ಕೆಲಸ ಮಾಡಿ.!

ತಾಯಿ ಕೋಕಿಲಾ ಬೆನ್ ಸೇರಿ ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

Share. Facebook Twitter LinkedIn WhatsApp Email

Related Posts

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ದ್ವಿಪಕ್ಷೀಯ ಸಹಕಾರಕ್ಕೆ ವೇಗ

09/03/2026 7:23 PM3 Mins Read

GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ

09/03/2026 7:18 PM2 Mins Read

JOB ALERT: ಫಿಸಿಯೋಥೆರಪಿಸ್ಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

09/03/2026 6:38 PM1 Min Read
Recent News

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ದ್ವಿಪಕ್ಷೀಯ ಸಹಕಾರಕ್ಕೆ ವೇಗ

09/03/2026 7:23 PM

OMG : ಇದೊಂತರ ಕೃಷಿ, ಹಾವುಗಳನ್ನ ಸಾಕಿ, ಕೋಟಿಗಟ್ಟಲೆ ಸಂಪಾದಿಸ್ತಿರುವ ರೈತರು ; ಎಲ್ಲಿ ಗೊತ್ತಾ?

09/03/2026 7:21 PM

GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ

09/03/2026 7:18 PM

BREAKING: ಇರಾನ್‌ನ ಮಾನವರಹಿತ ವಿಮಾನ ಹೊಡೆದುರುಳಿಸಿದ ಇಸ್ರೇಲ್; ಆಕಾಶದಲ್ಲೇ ಸುಟ್ಟು ಭಸ್ಮ, ವೀಡಿಯೋ ರಿಲೀಸ್!

09/03/2026 7:01 PM
State News
KARNATAKA

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ದ್ವಿಪಕ್ಷೀಯ ಸಹಕಾರಕ್ಕೆ ವೇಗ

By kannadanewsnow0909/03/2026 7:23 PM KARNATAKA 3 Mins Read

ಬೆಂಗಳೂರು: ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ…

GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ

09/03/2026 7:18 PM

JOB ALERT: ಫಿಸಿಯೋಥೆರಪಿಸ್ಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

09/03/2026 6:38 PM

BREAKING: ಬೆಂಗಳೂರಲ್ಲಿ ಯುವಕನ ಮೇಲೆ ಭೀಕರ ಹಲ್ಲೆ; ಇಬ್ಬರು ದುಷ್ಕರ್ಮಿಗಳಿಂದ ಡೆಡ್ಲಿ ಅಟ್ಯಾಕ್

09/03/2026 6:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.