Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ‘ಖಾಸಗಿ ಶಾಲೆ’ಗಳ ಶುಲ್ಕ ಹೆಚ್ಚಳಕ್ಕೆ ‘ಸರ್ಕಾರದ ಮುಂಚಿತ ಅನುಮತಿ’ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

​ಟ್ವಿಶಾ ಶರ್ಮಾ ಪ್ರಕರಣ : ದೆಹಲಿ ‘ಏಮ್ಸ್’ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆ; ಉನ್ನತ ಮಟ್ಟದ ತನಿಖೆಗೆ ಆದೇಶ!

BREAKING: ರಾಜ್ಯಸಭೆಯ ಅರ್ಜಿಗಳ ಸಮಿತಿ ಪುನರ್ ರಚನೆ: ನೂತನ ಅಧ್ಯಕ್ಷರಾಗಿ ಸಂಸದ ರಾಘವ್ ಚಡ್ಡಾ ನೇಮಕ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ದ ಪದಾಧಿಕಾರಿಗಳ ಚುನಾವಣೆ: ಅಂತಿಮ ಕಣದಲ್ಲಿ ‘ಐವರು ಅಭ್ಯರ್ಥಿ’ಗಳು
KARNATAKA

‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ದ ಪದಾಧಿಕಾರಿಗಳ ಚುನಾವಣೆ: ಅಂತಿಮ ಕಣದಲ್ಲಿ ‘ಐವರು ಅಭ್ಯರ್ಥಿ’ಗಳು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಇನ್ನೂ ಅಧ್ಯಕ್ಷರು, ರಾಜ್ಯ ಪರಿಷತ್ ಸ್ಥಾನದ ಅಂತಿಮ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದಾರೆ.

ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಗರ ತಾಲ್ಲೂಕು ಶಾಖೆಯ ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಧ್ಯಕ್ಷರ ಸ್ಥಾನದಲ್ಲಿ ಅಂತಿಮ ಕಣದಲ್ಲಿ ಸುರೇಶ್.ಎಸ್.ಕೆ ಹಾಗೂ ಸಂತೋಷ್ ಕುಮಾರ್.ಎನ್ ಇದ್ದಾರೆ. ಇನ್ನುಳಿದಂತ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ.

ಇನ್ನೂ ರಾಜ್ಯ ಪರಿಷತ್ ಸ್ಥಾನಗಳಿಗೆ ಅಂತಿಮ ಕಣದಲ್ಲಿ ದೇವೇಂದ್ರಪ್ಪ.ಕೆ, ನಾಗರಾಜ್.ಕೆ ಹಾಗೂ ಮಂಜುನಾಥ ಎಂ.ಎಸ್ ಇದ್ದಾರೆ. ಖಜಾಂಚಿಯಾಗಿ ಅವಿರೋಧವಾಗಿ ಸಹದೇವ್ ಎಸ್ ಬಡಿಗೇರ್ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಅಂತಿಮ ಕಣದಲ್ಲಿರುವಂತ ಸುರೇಶ್ ಎಸ್ ಕೆ ಹಾಗೂ ಸಂತೋಷ್ ಕುಮಾರ್ ಎನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅರಣ್ಯ ಇಲಾಖೆಯ ಅಧ್ಯಕ್ಷರಾಗಿದ್ದಂತ ಸಂತೋಷ್ ಕುಮಾರ್.ಎನ್ ಬಗ್ಗೆ ಉತ್ತಮ ಒಲವನ್ನು ಚುನಾಯಿತ ಪ್ರತಿನಿಧಿಗಳು ಹೊಂದಿದ್ದಾರೆ. ಹೋರಾಟದ ಹಿನ್ನಲೆಯೊಂದಿಗೆ ಸರ್ಕಾರಿ ನೌಕರರ ಪರ ಧ್ವನಿ ಎತ್ತಿ, ಅವರ ಹಲವು ಬೇಡಿಕೆಗಳ ಈಡೇರಿಕೆಗೆ ಸಂತೋಷ್ ಕುಮಾರ್.ಎನ್ ಗಟ್ಟಿ ಧ್ವನಿಯಾಗಿ ನಿಂತಿದ್ದರು. ಎನ್ ಪಿಎಸ್ ರದ್ದು, ಒಪಿಎಸ್ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ನೌಕರರ ಇತರೆ ಬೇಡಿಕೆ ಈಡೇರಿಸಲು ಶ್ರಮ ವಹಿಸಿದ್ದರು. ಹೀಗಾಗಿಯೇ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪರ ಒಲವನ್ನು ಹೆಚ್ಚು ಚುನಾಯಿತ ಸದಸ್ಯರು ತೋರಿರೋದಾಗಿ ಹೇಳಲಾಗುತ್ತಿದೆ.

ಇನ್ನೂ ರಾಜ್ಯ ಪರಿಷತ್ ಸ್ಥಾನದ ಕಣದಲ್ಲಿರುವಂತ ದೇವೇಂದ್ರಪ್ಪ.ಕೆ ಅವರು ಶಿಕ್ಷಕರ ಬೇಕು ಬೇಡಗಳನ್ನು ಅರಿತವರಾಗಿದ್ದಾರೆ. ಈ ಕಾರಣದಿಂದಲೇ ಅತಿ ಹೆಚ್ಚು ಶಿಕ್ಷಕರ ಮತಗಳನ್ನು ಪಡೆದು ಗೆಲುವು ಸಾದಿಸಿದಂತವರಾಗಿದ್ದಾರೆ. ಶಿಕ್ಷಕರ ಸಮುದಾಯ ಹಾಗೂ ಇತರೆ ಕಷ್ಟಗಳ ಬಗ್ಗೆ ಪ್ರತಿಸ್ಪಂದಿಸು ನಿಲುವ ತಳೆದಿರುವಂತ ದೇವೇಂದ್ರಪ್ಪ.ಕೆ ಅವರು, ರಾಜ್ಯ ಪರಿಷತ್ತಿಗೆ ಆಯ್ಕೆಯಾಗುವ ವಿಶ್ವಾಸವಿದೆ ಎಂದೇ ಹೇಳಲಾಗುತ್ತಿದೆ. ಆ ಬಗ್ಗೆ ನವೆಂಬರ್.16ರಂದು ಮತದಾನದ ಬಳಿಕ ಪ್ರಕಟಗೊಳ್ಳುವಂತ ಫಲಿತಾಂಶದಿಂದ ಖಚಿತ ಮಾಹಿತಿ ಹೊರ ಬೀಳಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಿದೆ.

BREAKING: ಶಿಗ್ಗಾಂವಿ ‘ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್’ ಮೇಲೆ ಯಾವುದೇ ‘ರೌಡಿ ಶೀಟ್’ ಇರುವುದಿಲ್ಲ: ಹಾವೇರಿ SP ಮಾಹಿತಿ

BREAKING: ರಾಜ್ಯ ಸರ್ಕಾರದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಲ್ಲಿನ ಅಕ್ರಮಗಳ ಕುರಿತು ತನಿಖೆಗೆ ಆದೇಶ

ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ನೇಣಿಗೆ ಶರಣು

1 Min Read

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

2 Mins Read

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

2 Mins Read
Recent News

BIG NEWS: ‘ಖಾಸಗಿ ಶಾಲೆ’ಗಳ ಶುಲ್ಕ ಹೆಚ್ಚಳಕ್ಕೆ ‘ಸರ್ಕಾರದ ಮುಂಚಿತ ಅನುಮತಿ’ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

​ಟ್ವಿಶಾ ಶರ್ಮಾ ಪ್ರಕರಣ : ದೆಹಲಿ ‘ಏಮ್ಸ್’ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆ; ಉನ್ನತ ಮಟ್ಟದ ತನಿಖೆಗೆ ಆದೇಶ!

BREAKING: ರಾಜ್ಯಸಭೆಯ ಅರ್ಜಿಗಳ ಸಮಿತಿ ಪುನರ್ ರಚನೆ: ನೂತನ ಅಧ್ಯಕ್ಷರಾಗಿ ಸಂಸದ ರಾಘವ್ ಚಡ್ಡಾ ನೇಮಕ

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೀವ್ರ ನಿಗಾ: ಕಣ್ಗಾವಲು ನಡುವೆಯೂ 25ಕ್ಕೂ ಹೆಚ್ಚು ಹಡಗುಗಳ ಸುರಕ್ಷಿತ ಸಂಚಾರ; ಐಆರ್‌ಜಿಸಿ ನೌಕಾಪಡೆ ಘೋಷಣೆ!

State News
KARNATAKA

BREAKING: ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ನೇಣಿಗೆ ಶರಣು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ನಗರದಲ್ಲಿ ಮತ್ತೊಂದು ವಿಷಾದನೀಯ ಘಟನೆ ಸಂಭವಿಸಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಕಾನ್ಸ್‌ಟೇಬಲ್ ಅವರ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ…

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

BIG Alert: ಫ್ರಿಡ್ಜ್ ಕ್ಲೀನ್ ಮಾಡೋ ಮುನ್ನ ಎಚ್ಚರ! ದೊಡ್ಡಬಳ್ಳಾಪುರದಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.