ಶಿವಮೊಗ್ಗ: ಇಂದು ಐಪಿಎಲ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ. ಐಪಿಎಲ್ ಫೈನಲ್ ಗೆ ಲಗ್ಗೆಯಿಟ್ಟಿರುವಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್ ಗೆದ್ದು ಬರಲಿ ಎಂಬುದು ಎಲ್ಲರ ಕೋರಿಕೆ. ಇತ್ತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಆರ್ ಸಿ ಬಿ ಪ್ರೇಮವನ್ನು ಹೊರ ಹಾಕಿದ್ದಾರೆ. ಸಾಗರದ ಗಾಂಧಿ ಮೈದಾನದಲ್ಲಿ RCB vs PBKS ನಡುವಿನ ಫೈನಲ್ ಪಂದ್ಯವನ್ನು ಅಭಿಮಾನಿಗಳು ಬೃಹತ್ ಸ್ಕ್ರೀನ್ ನಲ್ಲಿ ವೀಕ್ಷಿಸೋದಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು IPL-2025ರ ಫೈನಲ್ ಪಂದ್ಯ ನಡೆಯುತ್ತಿದೆ. ಆರ್ ಸಿ ಬಿ ವರ್ಸರ್ ಪಿಬಿಕೆಎಸ್ ನಡುವೆ ಕಪ್ ಗಾಗಿ ಹಾಣಾಹಣಿ ನಡೆಯಲಿದೆ. ಇಂತಹ ಪಂದ್ಯವನ್ನು ಇಂದು ಸಂಜೆ ಸಾಗರದ ಗಾಂಧಿ ಮೈದಾನ ದಲ್ಲಿ ಬೃಹತ್ ಎಲ್.ಇ.ಡಿ ವಾಲ್ ನಲ್ಲಿ ನೆರಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಇಂದು ಸಂಜೆ 7:00 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು, ಸಾರ್ವಜನಿಕರು ಸೇರಿ, ಐಪಿಎಲ್ ಫೈನಲ್ ಪಂದ್ಯಾವಳಿಯನ್ನು ವೀಕ್ಷಿಸುವಂತೆ ವಿನಂತಿಸಿದ್ದಾರೆ.
ಈ ಸಲ ಕಪ್ ನಮ್ಮದೆ. 18 ವರ್ಷಗಳ ನಿರಂತರ ಹೋರಾಟ, ಕೋಟ್ಯಂತರ ಅಭಿಮಾನಿಗಳ ಕನಸು. ಗೆದ್ದು ಬಾ ಆರ್ ಸಿ ಬಿ, ಗೆದ್ದು ಬಾ ಅಂತ ಸಾಗರ-ಹೊಸನಗರ ಶಾಸಕ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಶುಭ ಹಾರೈಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ನಟ ಕಮಲ್ ಹಾಸನ್ | Thug Life
BIG NEWS : ಬೆಂಗಳೂರಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ | IPL-2025 ಫೈನಲ್