Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM

ಇನ್ಮುಂದೆ ಪಾಕಿಸ್ತಾನದ ಗುಂಡುಗಳಿಗೆ ನಾವು ಗುಂಡುಗಳಿಂದಲೇ ಉತ್ತರಿಸುತ್ತೇವೆ : ರಣಧೀರ ಜೈಸ್ವಾಲ್ ಹೇಳಿಕೆ

13/05/2025 7:35 PM

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೀಘ್ರದಲ್ಲೇ ಮದ್ದೂರು ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ: ಶಾಸಕ ಕೆ.ಎಂ.ಉದಯ್
KARNATAKA

ಶೀಘ್ರದಲ್ಲೇ ಮದ್ದೂರು ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ: ಶಾಸಕ ಕೆ.ಎಂ.ಉದಯ್

By kannadanewsnow0909/07/2024 9:08 PM

ಮಂಡ್ಯ: ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಮದ್ದೂರು ಪಟ್ಟಣದ ಪೇಟೆಬೀದಿಯ (ಎಂಸಿ ರಸ್ತೆ) ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.

ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೇಟೆ ಬೀದಿ ಅಗಲೀಕರಣ ಸಂಬಂಧ ಪುರಸಭೆ ಸದಸ್ಯರಾದ ಎಂ.ಬಿ.ಸಚಿನ್, ಟಿ.ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಸದಸ್ಯರು ಪ್ರಸ್ತಾಪ ಮಾಡಿದರು. ಇದಕ್ಕೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿದರು.

ಪಟ್ಟಣದ ಪೇಟೆಬೀದಿ ಈ ಹಿಂದೆ ವ್ಯಾಪಾರ ವಹಿವಾಟು ಜನಸಂಖ್ಯೆ, ವಾಹನಗಳು ಸೇರಿದಂತೆ ಇತ್ಯಾದಿ ಅಂಶಗಳ ಆಧಾರದ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಜನಸಂಖ್ಯೆ ವ್ಯಾಪಾರ ವಹಿವಾಟು ಅಭಿವೃದ್ಧಿ ಜತೆಗೆ ವಾಹನಗಳ ಸಂಚಾರವು ಹೆಚ್ಚಳವಾಗಿದೆ ಹೀಗಾಗಿ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ ಹೀಗಾಗಿ ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಈ ಕೂಡಲೇ ಪೇಟೆಬೀದಿಯ ರಸ್ತೆಯ ಅಗಲೀಕರಣ ಕೈಗೊಂಡು 100 ರಿಂದ 120 ಅಡಿಗೆ ವಿಸ್ತರಣೆ ಮಾಡುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸದಸ್ಯರುಗಳು ಒಕ್ಕೂರಿಲಿನಿಂದ ಆಗ್ರಹ ಮಾಡಿದರು.

ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ಮಾತನಾಡಿ, ಪೇಟೆಬೀದಿಯ ಅಗಲೀಕರಣ ವೇಳೆ ಎಸ್.ಬಿ.ಎಂ.ರಸ್ತೆಯ ಮೂಲಕ ಮೈಸೂರು ಬೆಂಗಳೂರು ಸರ್ವಿಸ್ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ರಸ್ತೆಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡ ಅಗಲೀಕರಣ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಈ ಸಂಬಂಧ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಸಾರ್ವಜನಿಕರ ದೃಷ್ಠಿಯಿಂದ ಪೇಟೆಬೀದಿಯ ರಸ್ತೆ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಅಗಲೀಕರಣ ಸಂಬಂಧ ಈಗಾಗಲೇ 100 ಕೋಟಿ ರೂ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದೆ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಗೊಂಡ ಕಾರಣ ಅಗಲೀಕರಣ ಕಾರ್ಯ ವಿಳಂಬವಾಗಿದೆ. ಪೇಟೆಬೀದಿ ರಸ್ತೆಯನ್ನು 100 ಅಥವಾ 120 ಅಡಿಗೆ ವಿಸ್ತರಣಾ ಮಾಡಬಹುದು ಎಂಬುವುದನ್ನು ಮತ್ತೊಮ್ಮ ಚರ್ಚಿಸಿ ಶೀಘ್ರವಾಗಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಸಭೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪಕ್ಷಾತೀತವಾಗಿ ಸದಸ್ಯರುಗಳು ಶಾಸಕರು ಹಾಗೂ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಪುರಸಭಾ ವ್ಯಾಪ್ತಿಯ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಜುಲೈ 20 ರಂದು ವಿಶೇಷ ಸಭೆ ನಡೆಸಿ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ ಸಭೆಗೆ ಸ್ಪಷ್ಟನೆ ನೀಡಿದ ಕುಡಿಯುವ ನೀರು ಮತ್ತು ಒಳಚರಂಡಿ ಎಇಇ ನಧಾಫ್ ಮಾತನಾಡಿ, ಪಟ್ಟಣಕ್ಕೆ ಮೀಸಲಾಗಿರುವ ಕಾವೇರಿ ನೀರು ಮಳವಳ್ಳಿಯ ಬಾಚಹಳ್ಳಿಯಿಂದ ಪಟ್ಟಣಕ್ಕೆ ಹರಿಯುವ ಸಂದರ್ಭದಲ್ಲಿ ಸುಮಾರು 12 ಗ್ರಾಮಗಳಿಗೆ ಕುಡಿಯುವ ನೀರು ಹರಿಯುತ್ತಿದೆ. ಆದ್ದರಿಂದ ಪಟ್ಟಣಕ್ಕೆ 24/7 ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಉದಯ್ ಅವರು, ಪಟ್ಟಣಕ್ಕೆ ಮೀಸಲಿರುವ ನೀರನ್ನು ಪಟ್ಟಣಕ್ಕೆ ಹರಿಸಿದರೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಹಳ್ಳಿಗಳಿಗೆ ಹೋಗುತ್ತಿರುವ ನೀರನ್ನು ನಿಲ್ಲಿಸಿ. ಆ ಹಳ್ಳಿಗಳಿಗೆ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಗೆ ಸೇರಿದ ನಿವೇಶಗಳನ್ನು ಸರ್ವೆ ಮಾಡಿ ಗುರುತಿಸಿ ನಾಮಫಲಕಗಳನ್ನು ಹಾಕಬೇಕು. ಸಾರ್ವಜನಿಕರು ಅಥವಾ ಪ್ರಭಾವಿಗಳು ಪುರಸಭಾ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪುರಸಭೆಯ ನೀರು ಸರಬರಾಜು ವಿಭಾಗಕ್ಕೆ ಸಬ್ ಮರ್ಸಿಬಲ್ ಪಂಪ್ಸೆಟ್ ನಿರ್ವಹಣೆಗೆ, ಒಳಚರಂಡಿ ನಿರ್ವಹಣೆ ಮತ್ತು ದುರಸ್ತಿ, ಪುರಸಭಾ ವ್ಯಾಪ್ತಿಯಲ್ಲಿ 1 ರಿಂದ 23 ವಾರ್ಡ್ಗಳ ಬೀದಿ ದೀಪಗಳ ನಿರ್ವಹಣೆ ಜತೆಗೆ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಆತಗೂರು ಹೋಬಳಿ ಹೂತಗೆರೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಸದಸ್ಯರಾದ ಎಸ್.ಮಹೇಶ್, ಎಂ.ಐ.ಪ್ರವೀಣ್, ಕೋಕಿಲ, ವನಿತಾ, ಪ್ರಮೀಳ, ಆದಿಲ್, ಮನೋಜ್, ಸರ್ವಮಂಗಳ ಸೇರಿದಂತೆ, ಪುರಸಭೆಯ ಕಂದಾಯ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಇಲ್ಲಿದೆ ಇವತ್ತಿನ ‘ಸಿಎಂ ಸಿದ್ಧರಾಮಯ್ಯ’ ಅವರ ಪತ್ರಿಕಾಗೋಷ್ಠಿಯ ಪ್ರಮುಖ ಹೈಲೈಟ್ಸ್ | CM Siddaramaiah

‘ಪ್ರವಾಸಿ’ಗರೇ ಹುಷಾರ್.! ‘ಪ್ರವಾಸಿ ತಾಣ’ಗಳಲ್ಲಿ ಪುಂಡಾಟಿಕೆ ಮೆರೆದ್ರೆ ಬೀಳುತ್ತೆ ಕೇಸ್, ವಾಹನವೂ ಸೀಜ್

Share. Facebook Twitter LinkedIn WhatsApp Email

Related Posts

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM1 Min Read

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM1 Min Read

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM1 Min Read
Recent News

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM

ಇನ್ಮುಂದೆ ಪಾಕಿಸ್ತಾನದ ಗುಂಡುಗಳಿಗೆ ನಾವು ಗುಂಡುಗಳಿಂದಲೇ ಉತ್ತರಿಸುತ್ತೇವೆ : ರಣಧೀರ ಜೈಸ್ವಾಲ್ ಹೇಳಿಕೆ

13/05/2025 7:35 PM

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM

ಈಗ ಪಾಕಿಸ್ತಾನದ ಮುಂದಿರುವುದು ಪಿಒಕೆ ತೆರವುಗೊಳಿಸುವುದು ಮಾತ್ರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

13/05/2025 7:15 PM
State News
KARNATAKA

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

By kannadanewsnow0913/05/2025 7:44 PM KARNATAKA 1 Min Read

ಹಾವೇರಿ: ಕೆರೆಯಲ್ಲಿ ಈಜಲು ತೆರಳಿದ್ದಂತ ಇಬ್ಬರು ಯುವಕರು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಹಾವೇರಿಯ ಚಿಕ್ಕಂಶಿಯಲ್ಲಿ ನಡೆದಿದೆ. ಹಾವೇರಿ…

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM

BREAKING : ಬಳ್ಳಾರಿ ಬಳಿಕ ಹಾವೇರಿ, ಗದಗದಲ್ಲೂ ಸಿಡಿಲು ಬಡಿದು ಮೂವರು ಸಾವು!

13/05/2025 7:13 PM

ಈ ‘ಮಿಯಾ ಜಾಕಿ’ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ಸುತ್ತೋದಂತೂ ಗ್ಯಾರಂಟಿ!

13/05/2025 6:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.