ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎಂ.ಜಿ. ರಸ್ತೆಯಲ್ಲಿನ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ವಿಷಯವಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು (ಕೇಂದ್ರ) ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಪರೀಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ಅಹವಾಲು ಮತ್ತು ಆಕ್ಷೇಪಣೆ ಸಲ್ಲಿಸಲು ಸಂಬಂದಪಟ್ಟ ಕ್ಷೇತ್ರಗಳ ವ್ಯಾಪ್ತಿಗೊಳಪಡುವ ಮತದಾರರ ನೋಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2026 ಕ್ಕೆ ಸಂಬಂಧಿಸಿದಂತೆ ದಿನಾಂಕ: 19-01-2026 ರಂದು ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಚುರ ಪಡಿಸಲಾಗಿರುತ್ತದೆ. ಮುಂದುವರೆದು ಪರೀಷ್ಕೃತ ಕರಡು ಮತದಾರರ ಪಟ್ಟಿಯ ಪರಿಷ್ಕರಣೆ ಹಂತದಲ್ಲಿದ್ದು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಸಂಬಂಧಿಸಿದ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ದಿನಾಂಕ:09-03-2026 ರಂದು ಪ್ರಕಟಿಸಲಾಗುವುದು ಎಂದು ಕೇಂದ್ರ ನಗರ ಪಾಲಿಕೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದರು.
ಪರೀಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ದಿನಾಂಕ: 10-03-2026 ರಿಂದ 16-03-2026 ರ ಅವಧಿಯಲ್ಲಿ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು ಬೆಂಗಳೂರು ಕೇಂದ್ರ ನಗರ ಪಾಲಿಕೆ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮತದಾರರು ಬೇರೆ ಮತಗಟ್ಟೆಗಳಿಗೆ / ಬೇರೆ ವಾರ್ಡ ಗಳಿಗೆ ವಿಭಜನೆಯಾಗಿದಲ್ಲಿ, ಮತದಾರರ ವಿವರಗಳು ಅದಲು-ಬದಲು ಆಗಿರುವುದು ಹಾಗೂ ಮತದಾರರು ಭೌಗೋಳಿಕವಾಗಿ ಒಂದೇ ವಾರ್ಡ್ ನಲ್ಲಿ ವಾಸವಾಗಿದ್ದು, ಮತ್ತೊಂದು ವಾರ್ಡ್ ನ್ ಮತಗಟ್ಟೆಯಲ್ಲಿ ಸೇರ್ಪಡೆಗೊಂಡಿರುವ ಸಂಬಂಧ ಲೋಪದೋಷಗಳಿದ್ದಲ್ಲಿ ಅಹವಾಲು ಆಕ್ಷೇಪಣೆಗಳನ್ನು ವಿಧಾನಸಭಾ ಕ್ಷೇತ್ರಗಳಾದ 161- ಸಿ.ವಿ.ರಾಮನ್ ನಗರ, 162- ಶಿವಾಜಿನಗರ, 163-ಶಾಂತಿನಗರ, 164- ಗಾಂಧಿನಗರ, 168- ಚಾಮರಾಜಪೇಟೆ ಹಾಗೂ 169- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೊಸ 63 ವಾರ್ಡ್ ಗಳ ಮತದಾರರ ನೊಂದಣಾಧಿಕಾರಿಗಳಿಗೆ ಅಥವಾ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ತಿಳಿಸಿದರು.
ಸಂಪರ್ಕಿಸಬೇಕಾದ ವಿಧಾನಸಭಾ ಕ್ಷೇತರವಾರು ಮತದಾರರ ನೊಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳ ವಿಳಾಸ👇
(1) 161- ಸಿ.ವಿ.ರಾಮನ್ ನಗರ ಕ್ಷೇತ್ರದ ಹೊಸ ವಾರ್ಡ್ 9 ರಿಂದ 21 ರ ವ್ಯಾಪ್ತಿಯ ಮತದಾರರು: ಮತದಾರರ ನೊಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳು, ಪಾಲಿಕೆ ಕಟ್ಟಡ, ಮೊದಲನೇ ಮಹಡಿ, ಎಂ.ಎಂ.ರಸ್ತೆ, ಕಾಕ್ಸ್ ಟೌನ್, ಬೆಂಗಳೂರು-560005, Email: rocvr1@gmail.com
(2) 162- ಶಿವಾಜಿನಗರ ಕ್ಷೇತ್ರದ ಹೊಸ ವಾರ್ಡ್ 01 ರಿಂದ 08 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ರವರ ಕಛೇರಿ, 162- ಶಿವಾಜಿನಗರ ವಿಧಾನಸಭಾ ಕ್ಷೇತ್ರ,
ಕಟ್ಟಡ, ನೆಲ ಮಹಡಿ, ಕ್ವೀನ್ಸ್ ರಸ್ತೆ (ತಿಮ್ಮಯ್ಯ ರಸ್ತೆ) ಬೆಂಗಳೂರು-56052, Email: ro162shivajinagar@gmail.com
(3) 163-ಶಾಂತಿನಗರ ಕ್ಷೇತ್ರದ ಹೊಸ ವಾರ್ಡ್22 ರಿಂದ 31 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 163 – ವಿಧಾನಸಭಾ ಕ್ಷೇತ್ರ,12ನೇ ಮಹಡಿ, ಪಿ.ಯು. ಕಟ್ಟಡ, ಮೇಯೋಹಾಲ್, ಎಂ.ಜಿ. ರಸ್ತೆ, ಬೆಂಗಳೂರು: 560001, Email: ro163shanthinagar@gmail.com
(4) 164- ಗಾಂಧಿನಗರ ಕ್ಷೇತ್ರದ ಹೊಸ ವಾರ್ಡ್ 54 ರಿಂದ 63 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 164 – ಗಾಂಧಿನಗರ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಡಾ. ಟಿಸಿಎಂ ರಾಯನ್ ರಸ್ತೆ, ಬೆಂಗಳೂರು: 560053, (ಲ್ಯಾಂಡ್ ಮಾರ್ಕ್: ಡುಕಾಟಿ ಬೈಕ್ ಷೋರೂಮ್ ಪಕ್ಕ)
(5) 168- ಚಾಮರಾಜಪೇಟೆ ಕ್ಷೇತ್ರದ ಹೊಸ ವಾರ್ಡ್ 44 ರಿಂದ 53 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 168- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಡಾ. ಟಿಸಿಎಂ ರಾಯನ್ ರಸ್ತೆ, ಬೆಂಗಳೂರು: 56005, (ಲ್ಯಾಂಡ್ ಮಾರ್ಕ್: ಸಿಟಿ ರೈಲ್ವೇಸ್ ಗೂಡ್ಸ್ ಪಾರ್ಸೆಲ್ ಆಫೀಸ್ ಎದುರು), Email: ro168chamrajpet@gmail.com
(6) 169- ಚಿಕ್ಕಪೇಟೆ ಕ್ಷೇತ್ರದ ಹೊಸ ವಾರ್ಡ್ 32 ರಿಂದ 43 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 169- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಆರ್.ವಿ ರಸ್ತೆ, ಸೌತ್ ಎಂಡ್ ಸರ್ಕಲ್, ಜಯನಗರ 1ನೇ ಬ್ಲಾಕ್, ಬೆಂಗಳೂರು: 560011, (ಲ್ಯಾಂಡ್ ಮಾರ್ಕ್: ಸನ್ಮಾನ್ ಹೊಟೇಲ್ ಎದರು, ಸೌತ್ ಎಂಡ್ ಸರ್ಕಲ್) Email: rochickpet@gmail.com
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ರಂಗನಾಥ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಚುನಾವಣೆ ತಹಶೀಲ್ದಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರಲ್ಲಿ ನಿವೃತ್ತ IISC ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ








