Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : BSY, HDK ಹಾಗೆ ನನ್ನನ್ನು ಉಚ್ಛಾಟಿಸಲಾಗಿದ್ದು, ನಾನು 2028ಕ್ಕೆ ‘CM’ ಆಗ್ತೀನಿ : ಶಾಸಕ ಯತ್ನಾಳ್ ಹೇಳಿಕೆ

06/09/2025 8:37 AM

ಹೂಡಿಕೆದಾರರಿಗೆ ಎಚ್ಚರ: ಹೂಡಿಕೆಯ ಜಗತ್ತಿನಲ್ಲಿ ಒಂದು ಸುಳ್ಳು: “ಗ್ಯಾರಂಟೀಡ್ 8-10% ಆದಾಯ”ದ ಹಿಂದಿನ ಸತ್ಯ

06/09/2025 8:35 AM

Shocking: ಪತ್ನಿಯ ಶಿರಚ್ಛೇದ ಮಾಡಿ ದೇಹವನ್ನು 17 ತುಂಡುಗಳಾಗಿ ಕತ್ತರಿಸಿದ ಪತಿ !

06/09/2025 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ‘ಹೊರಗುತ್ತಿಗೆ ನೇಮಕಾತಿ’ಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ
KARNATAKA

BIG NEWS: ಇನ್ಮುಂದೆ ‘ಹೊರಗುತ್ತಿಗೆ ನೇಮಕಾತಿ’ಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

By kannadanewsnow0904/04/2025 8:42 PM

ಬೆಂಗಳೂರು: ರಾಜ್ಯ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸಿಕೊಳ್ಳುವಂತೆ ಅಧಿಕೃತವಾಗಿ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಮೂಲಕ ಹೊರಗುತ್ತಿಗೆಯಲ್ಲಿ ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯಪತ್ರಿಕೆಯನ್ನು ಹೊರಡಿಸಲಾಗಿದೆ. ಅದರಲ್ಲಿ ರಾಜ್ಯ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸುವ ಕುರಿತ ದಿನಾಂಕ:20.05.2024ರ ಸುತ್ತೋಲೆಯಲ್ಲಿ ಕ್ರಮ ಸಂಖ್ಯೆ 60 ಬದಲಾಗಿ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು ಎಂದಿದೆ.

ಕ್ರಮ ಸಂಖ್ಯೆ -06ರಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು ಎಂಬುದಾಗಿ ತಿಳಿಸಲಾಗಿತ್ತು.

ಪರಿಷ್ಕೃತ ಕಂಡಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ಅಧಿನಿಯಮ 2024ರ ಸೆಕ್ಷನ್ 4ರ ಸಬ್ ಸೆಕ್ಷನ್ (5) ರಾಜ್ಯ ಸಿವಿಲ್ ಸೇವೆಗಳ ವೃಂದದಲ್ಲಿನ ಅಥವಾ ಸರ್ಕಾರಿ ವಲಯದ ಸಂಸ್ಥೆಗಳಲ್ಲಿನ ಯಾವುದೇ ಹುದ್ದೆಗೆ ನೇರ ನೇಮಕಾತಿ ಕೋಟಾದ ಎದುರು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಾ ಸರ್ಕಾರದಿಂದ ಮಾನ್ಯತೆ ಪಡೆದ ಮಾನವಶಕ್ತಿ ಪೂರೈಕೆ ಏಜೆನ್ಸಿಯು, ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರಿಗೆ ನಿಯಮಿಸಬಹುದಾದ ಅಂಥ ವ್ಯಾಪ್ತಿ ಮತ್ತು ವಿಧಾನದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು ಎಂದಿದೆ.

ಪರಂತು, ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ತಾತ್ಕಾಲಿಕ ಆಧಾರದಲ್ಲಿರತಕ್ಕದ್ದು ಮತ್ತು ಅದನ್ನು ನೇರ ನೇಮಕಾತಿ ಕೋಟಾದ ಎದುರು ಕ್ರಮಬದ್ಧಗೊಳಿಸತಕ್ಕದ್ದಲ್ಲ:

ಮತ್ತು ಪರಂತು, ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ನೇರ ನೇಮಕಾತಿ ಎದುರಾಗಿ ಮಂಜೂರಾದ ಹುದ್ದೆಗಳ ಶೇಕಡಾ ಹತ್ತರಷ್ಟನ್ನು ಮೀರತಕ್ಕದ್ದಲ್ಲ:
ವರ್ಗಗಳ ಅಲ್ಲದೆ ಪರಂತು, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ (ನೇಮಕಾತಿಗಳ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ಅಧಿನಿಯಮ, 2024ರ ಪ್ರಾರಂಭದ ದಿನಾಂಕದಂದು ಅಥವಾ ಅದಕ್ಕೆ ಮೊದಲು ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ಮಂಜೂರಾದ ಹುದ್ದೆಗಳ ಸಂಖ್ಯಾಬಲದ ಶೇಕಡಾ ಹತ್ತರಷ್ಟು ಮೀರಿದ್ದರೆ, ಆಗ ಅಂಥ ನೇಮಕಾತಿಗಳನ್ನು ಪ್ರತಿ ವರ್ಷ ಶೇಕಡಾ ಹತ್ತರಷ್ಟು ಕಡಿಮೆಗೊಳಿಸತಕ್ಕದ್ದು.
ಇನ್ನುಳಿದಂತೆ ಉಲ್ಲೇಖಿತ ಸುತ್ತೋಲೆಯ ಎಲ್ಲಾ ಅಂಶಗಳು ಯಥಾವತ್ತಾಗಿ ಜಾರಿಯಲ್ಲಿರುತ್ತವೆ ಎಂದು ಹೇಳಿದೆ.

ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ: ಉತ್ತರ ಭಾರತದಲ್ಲಿಯೂ ಕಂಪನದ ಅನುಭವ | Earthquake in Nepal

ಬೆಸ್ಕಾಂನಿಂದ ‘ವಿದ್ಯುತ್ ಸಮಸ್ಯೆ’ಗಳಿಗೆ ದೂರು ದಾಖಲಿಸಲು ‘ವಾಟ್ಸ್ ಆಪ್ ಸಹಾಯವಾಣಿ’ ಆರಂಭ | BESCOM WhatsApp Helpline Number

Share. Facebook Twitter LinkedIn WhatsApp Email

Related Posts

BIG NEWS : BSY, HDK ಹಾಗೆ ನನ್ನನ್ನು ಉಚ್ಛಾಟಿಸಲಾಗಿದ್ದು, ನಾನು 2028ಕ್ಕೆ ‘CM’ ಆಗ್ತೀನಿ : ಶಾಸಕ ಯತ್ನಾಳ್ ಹೇಳಿಕೆ

06/09/2025 8:37 AM1 Min Read

ಬೆಳಗಾವಿಯಲ್ಲಿ ಅಪ್ರಾಪ್ತೆಯನ್ನು ಪ್ರೀತಿಸೋಗೋಸ್ಕರ ಎರಡು ಗುಂಪುಗಳ ಮಧ್ಯ ಗಲಾಟೆ : ನಾಲ್ವರಿಗೆ ಚಾಕು ಇರಿತ!

06/09/2025 7:47 AM1 Min Read

BREAKING : ಮಾಸ್ಕ್ ಮ್ಯಾನ್ ಚಿನ್ನಯ್ಯನ 15 ದಿನಗಳ ಕಸ್ಟಡಿ ಅವಧಿ ಇಂದು ಅಂತ್ಯ : ಜೈಲು ಪಾಲಾಗೋ ಸಾಧ್ಯತೆ

06/09/2025 7:41 AM1 Min Read
Recent News

BIG NEWS : BSY, HDK ಹಾಗೆ ನನ್ನನ್ನು ಉಚ್ಛಾಟಿಸಲಾಗಿದ್ದು, ನಾನು 2028ಕ್ಕೆ ‘CM’ ಆಗ್ತೀನಿ : ಶಾಸಕ ಯತ್ನಾಳ್ ಹೇಳಿಕೆ

06/09/2025 8:37 AM

ಹೂಡಿಕೆದಾರರಿಗೆ ಎಚ್ಚರ: ಹೂಡಿಕೆಯ ಜಗತ್ತಿನಲ್ಲಿ ಒಂದು ಸುಳ್ಳು: “ಗ್ಯಾರಂಟೀಡ್ 8-10% ಆದಾಯ”ದ ಹಿಂದಿನ ಸತ್ಯ

06/09/2025 8:35 AM

Shocking: ಪತ್ನಿಯ ಶಿರಚ್ಛೇದ ಮಾಡಿ ದೇಹವನ್ನು 17 ತುಂಡುಗಳಾಗಿ ಕತ್ತರಿಸಿದ ಪತಿ !

06/09/2025 8:13 AM

ಸುಂಕ ಏರಿಕೆಗೆ ಭಾರತದ ಪ್ರತ್ಯುತ್ತರ: GST ದರ ಕಡಿತ, ರಷ್ಯಾದಿಂದ ತೈಲ ಖರೀದಿ ಮುಂದುವರಿಕೆ :ನಿರ್ಮಲಾ ಸೀತಾರಾಮನ್

06/09/2025 8:01 AM
State News
KARNATAKA

BIG NEWS : BSY, HDK ಹಾಗೆ ನನ್ನನ್ನು ಉಚ್ಛಾಟಿಸಲಾಗಿದ್ದು, ನಾನು 2028ಕ್ಕೆ ‘CM’ ಆಗ್ತೀನಿ : ಶಾಸಕ ಯತ್ನಾಳ್ ಹೇಳಿಕೆ

By kannadanewsnow0506/09/2025 8:37 AM KARNATAKA 1 Min Read

ವಿಜಯಪುರ : ಸಿಎಂ ಅವರು ಸದನದಲ್ಲಿ ನನಗೆ ಯತ್ನಾಳ್ ನೀವು ಉಚ್ಚಾಟಿತರಾಗಿದ್ದೀರಿ ಎಂದು ತಿಳಿಸಿದಾಗ, ನಿಮ್ಮನ್ನೂ ದೇವೇಗೌಡ ಉಚ್ಚಾಟಿಸಿದ್ದರು ಸಿಎಂ…

ಬೆಳಗಾವಿಯಲ್ಲಿ ಅಪ್ರಾಪ್ತೆಯನ್ನು ಪ್ರೀತಿಸೋಗೋಸ್ಕರ ಎರಡು ಗುಂಪುಗಳ ಮಧ್ಯ ಗಲಾಟೆ : ನಾಲ್ವರಿಗೆ ಚಾಕು ಇರಿತ!

06/09/2025 7:47 AM

BREAKING : ಮಾಸ್ಕ್ ಮ್ಯಾನ್ ಚಿನ್ನಯ್ಯನ 15 ದಿನಗಳ ಕಸ್ಟಡಿ ಅವಧಿ ಇಂದು ಅಂತ್ಯ : ಜೈಲು ಪಾಲಾಗೋ ಸಾಧ್ಯತೆ

06/09/2025 7:41 AM

BIG NEWS : ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣದ ಜೊತೆಗೆ ಜನನ ಪ್ರಮಾಣವೂ ಇಳಿಕೆ : ವರದಿ

06/09/2025 7:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.