ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ರನ್ನು ಇಂದು ತಾಯಿ ಮೀನಾ ಹಾಗೂ ಸಹೋದರ ದಿನಕರ್‌ ತೂಗುದೀಪ ಅವರು ಭೇಟಿ ಮಾಡಿ ಧೈರ್ಯ ತುಂಬಲಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಗೆ ಇತ್ತೀಚೆಗಷ್ಟೇ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಭೇಟಿ ನೀಡಿದ್ದರು. ಇಂದು ತಾಯಿ ಮೀನಾ ಹಾಗೂ ದಿನಕರ್‌ ತೂಗುದೀಪ ಭೇಟಿಯಾಗಲಿದ್ದಾರೆ.

ಇನ್ನು ನಟ ದರ್ಶನ್‌ ಗೆ ಜೈಲಿನ ಮೆನವಿನಂತೆ ಇಂದು ಉಪ್ಪಿಟ್ಟು ನೀಡಲಾಗಿದ್ದು, ಒಗ್ಗದಿದ್ರೂ ದರ್ಶನ್‌ ಜೈಲೂಟ ಸೇವಿಸುತ್ತಿದ್ದಾರೆ.

Share.
Exit mobile version