Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜಮೀನು ಒತ್ತುವರಿ ಆರೋಪ ಕೇಸ್ : ಹೆಚ್.ಡಿ.ಕುಮಾರಸ್ವಾಮಿಗೆ ಕೊಂಚ ರಿಲೀಫ್.!

05/08/2025 7:28 PM

BREAKING : ಬೆಂಗಳೂರಿನಲ್ಲಿ 3 ಅಂತಸ್ತಿನ ಫಿಟ್ನೆಸ್ ಸೆಂಟರ್ ಕಟ್ಟದಿಂದ ಬಿದ್ದು ಯುವತಿ ಸಾವು.!

05/08/2025 7:25 PM

BREAKING : ಉತ್ತರಾಖಂಡ್ ನಲ್ಲಿ ಭೀಕರ ಮೇಘಸ್ಪೋಟ : `ಗೂಗಲ್ ಅರ್ಥ್’ ನಲ್ಲಿ ವಿನಾಶದ ದೃಶ್ಯ ಸೆರೆ | WATCH VIDEO

05/08/2025 7:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆತಗೂರು ಹೋಬಳಿಯ ರೀ ಸರ್ವೆ, ವಿ.ಸಿ.ನಾಲೆಗಳ ಕೊನೆ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಸದನದಲ್ಲಿ ಚರ್ಚೆ: ಶಾಸಕ ಕೆ.ಎಂ.ಉದಯ್
KARNATAKA

ಆತಗೂರು ಹೋಬಳಿಯ ರೀ ಸರ್ವೆ, ವಿ.ಸಿ.ನಾಲೆಗಳ ಕೊನೆ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಸದನದಲ್ಲಿ ಚರ್ಚೆ: ಶಾಸಕ ಕೆ.ಎಂ.ಉದಯ್

By kannadanewsnow0917/07/2024 7:45 PM

ಮಂಡ್ಯ : ಸುಮಾರು 20 ವರ್ಷಗಳಿಂದ ತಲೆದೋರಿರುವ ಆತಗೂರು ಹೋಬಳಿಯ ರೀ ಸರ್ವೆ ಕಾರ್ಯ ವಿವಿಧ ಕಾರಣಗಳಿಂದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರೈತಾಪಿ ಜನರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಹೀಗಾಗಿ ಸದನದಲ್ಲಿ ಧ್ವನಿ ಎತ್ತಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ಚಾಮನಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿ 2023-24 ನೇ ಸಾಲಿನ ಮದ್ದೂರು ತಾಪಂ ಅನಿರ್ಬಂಧಿತ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಇಡೀ ರಾಜ್ಯದಲ್ಲೇ ಪ್ರಥಮವಾಗಿ ಆತಗೂರು ಹೋಬಳಿಯನ್ನು ರೀ ಸರ್ವೆ ಕಾರ್ಯವನ್ನು ಜಾರಿಗೊಳಿಸಿದ್ದರು. ಆದರೆ, ಕೆಲ ಕಾರಣಾಂತರಗಳಿಂದ ಈ ರೀ ಸರ್ವೆ ಕಾರ್ಯ ಲೋಪ ಉಂಟಾಗಿತ್ತು. ಇದರಿಂದ ಈ ವ್ಯಾಪ್ತಿಯ ಜನರು ಸುಮಾರು 20 ವರ್ಷಗಳಿಂದ ಜಮೀನಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರತಿನಿತ್ಯ ತಾಲೂಕು ಕಚೇರಿ ಹಾಗೂ ವಿವಿಧ ನ್ಯಾಯಾಲಯಗಳಿಗೆ ಅಲೆದಾಟ ನಡೆಸುತ್ತಾ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ರೂಪಿಸುವ ಉದ್ದೇಶದಿಂದ ತಾವುಸದನದಲ್ಲಿ ಪ್ರಸ್ತಾಪ ಮಾಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಉದಯ್ ಭರವಸೆ ನೀಡಿದರು.

ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ತೆಂಗಿನ ಮರಕ್ಕೆ ಕಪ್ಪು ತಲೆ ಹುಳು ಕೀಟ ಬಾಧೆ ಕಾಣಿಸಿಕೊಂಡು ತೆಂಗಿನ ಮರಗಳು ಒಣಗುವ ಮೂಲಕ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಕೀಟ ಬಾಧೆ ನಿಯಂತ್ರಣ ಹಾಗೂ ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ ಎಂದರು.

ತಾಲೂಕಿನ ಕೊನೆ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟು ನೀರು ಸರಾಗವಾಗಿ ತಲುಪದಿರುವ ಬಗ್ಗೆ ರೈತರು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ ಈ ವ್ಯಾಪ್ತಿಯ ನಾಲೆಗಳ ಆಧುನೀಕರಣಗೊಳಿಸಿ ಮೊದಲು ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿದು ಕೆರೆ ಕಟ್ಟೆಗಳನ್ನು ತುಂಬಿಸಿದ ಬಳಿಕ ಮೇಲ್ಭಾಗದ ವ್ಯಾಪ್ತಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸುವಂತೆ ಸದನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಕ್ರಮಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣ ಹಾಗೂ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದು, ಅಗತ್ಯ ಇರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್ ಮುಖಂಡರಾದ ಕುಚೇಲ, ಗೋಪಿ, ಶೇಖರ್, ರಾಜೇಶ್, ಮಾದೇಶ್, ರಾಜಯ್ಯ, ರವಿ, ಮೋಹನ್, ಅನಂತು ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

‘ಏರೋಸ್ಪೇಸ್ ಕ್ಷೇತ್ರ’ದಲ್ಲಿ ಲಕ್ಷ ಮಂದಿಗೆ ತರಬೇತಿ, 10,000 ಕೋಟಿ ಹೂಡಿಕೆಯ ಗುರಿ: ಸಚಿವ ಪ್ರಿಯಾಂಕ್ ಖರ್ಗೆ

‘ಕಾಂಗ್ರೆಸ್ ಪಕ್ಷ’ದ ಮುಖಂಡರು, ನಾಯಕರ ವಿರುದ್ಧ ಬಿಜೆಪಿಯ ‘ರತ್ನಾಕರ ಹೊನಗೋಡು’ ವಾಗ್ಧಾಳಿ

Share. Facebook Twitter LinkedIn WhatsApp Email

Related Posts

BREAKING : ಜಮೀನು ಒತ್ತುವರಿ ಆರೋಪ ಕೇಸ್ : ಹೆಚ್.ಡಿ.ಕುಮಾರಸ್ವಾಮಿಗೆ ಕೊಂಚ ರಿಲೀಫ್.!

05/08/2025 7:28 PM1 Min Read

BREAKING : ಬೆಂಗಳೂರಿನಲ್ಲಿ 3 ಅಂತಸ್ತಿನ ಫಿಟ್ನೆಸ್ ಸೆಂಟರ್ ಕಟ್ಟದಿಂದ ಬಿದ್ದು ಯುವತಿ ಸಾವು.!

05/08/2025 7:25 PM1 Min Read

ರಾಜ್ಯದ ಎಲ್ಲಾ ಶಾಲೆಯಲ್ಲಿ ಪ್ರತಿದಿನ `ಮುಖ್ಯ ಶಿಕ್ಷಕರು’ ಈ ಕೆಲಸ ಮಾಡುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

05/08/2025 7:15 PM2 Mins Read
Recent News

BREAKING : ಜಮೀನು ಒತ್ತುವರಿ ಆರೋಪ ಕೇಸ್ : ಹೆಚ್.ಡಿ.ಕುಮಾರಸ್ವಾಮಿಗೆ ಕೊಂಚ ರಿಲೀಫ್.!

05/08/2025 7:28 PM

BREAKING : ಬೆಂಗಳೂರಿನಲ್ಲಿ 3 ಅಂತಸ್ತಿನ ಫಿಟ್ನೆಸ್ ಸೆಂಟರ್ ಕಟ್ಟದಿಂದ ಬಿದ್ದು ಯುವತಿ ಸಾವು.!

05/08/2025 7:25 PM

BREAKING : ಉತ್ತರಾಖಂಡ್ ನಲ್ಲಿ ಭೀಕರ ಮೇಘಸ್ಪೋಟ : `ಗೂಗಲ್ ಅರ್ಥ್’ ನಲ್ಲಿ ವಿನಾಶದ ದೃಶ್ಯ ಸೆರೆ | WATCH VIDEO

05/08/2025 7:21 PM

ರಾಜ್ಯದ ಎಲ್ಲಾ ಶಾಲೆಯಲ್ಲಿ ಪ್ರತಿದಿನ `ಮುಖ್ಯ ಶಿಕ್ಷಕರು’ ಈ ಕೆಲಸ ಮಾಡುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

05/08/2025 7:15 PM
State News
KARNATAKA

BREAKING : ಜಮೀನು ಒತ್ತುವರಿ ಆರೋಪ ಕೇಸ್ : ಹೆಚ್.ಡಿ.ಕುಮಾರಸ್ವಾಮಿಗೆ ಕೊಂಚ ರಿಲೀಫ್.!

By kannadanewsnow5705/08/2025 7:28 PM KARNATAKA 1 Min Read

ಬೆಂಗಳೂರು: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಎಸ್ಐಟಿ…

BREAKING : ಬೆಂಗಳೂರಿನಲ್ಲಿ 3 ಅಂತಸ್ತಿನ ಫಿಟ್ನೆಸ್ ಸೆಂಟರ್ ಕಟ್ಟದಿಂದ ಬಿದ್ದು ಯುವತಿ ಸಾವು.!

05/08/2025 7:25 PM

ರಾಜ್ಯದ ಎಲ್ಲಾ ಶಾಲೆಯಲ್ಲಿ ಪ್ರತಿದಿನ `ಮುಖ್ಯ ಶಿಕ್ಷಕರು’ ಈ ಕೆಲಸ ಮಾಡುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

05/08/2025 7:15 PM

`BSNL’ ಗ್ರಾಹಕರಿಗೆ ಗುಡ್ ನ್ಯೂಸ್ : ಕೇವಲ 1 ರೂ.ಗೆ ಹೊಸ `ಫ್ರೀಡಂ ಪ್ಲಾನ್’ ಸಿಮ್.!

05/08/2025 7:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.