Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಂಡರೆ ಪಾಕ್ ಜೊತೆ ಭಾರತ ಮಾತುಕತೆ ನಡೆಸಬಹುದು: ಶಶಿ ತರೂರ್

04/06/2025 10:40 AM

BREAKING : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಮರ್ಡರ್ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ!

04/06/2025 10:35 AM

BREAKING : ಟ್ರೊಫಿ ಸಮೇತ ನಾವು ಬೆಂಗಳೂರಿಗೆ ಆಗಮಿಸುತ್ತಿದ್ದೇವೆ : ವಿರಾಟ್ ಕೊಹ್ಲಿ ಹೇಳಿಕೆ ವೈರಲ್ | Watch Video

04/06/2025 10:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಸುಧಾಕರ್ ಮುಂದೆ ಈ ಪ್ರಶ್ನೆಗಳನ್ನಿಟ್ಟ ರಮೇಶ್ ಬಾಬು: ಉತ್ತರಿಸ್ತಾರಾ?
KARNATAKA

ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಸುಧಾಕರ್ ಮುಂದೆ ಈ ಪ್ರಶ್ನೆಗಳನ್ನಿಟ್ಟ ರಮೇಶ್ ಬಾಬು: ಉತ್ತರಿಸ್ತಾರಾ?

By kannadanewsnow0918/11/2024 5:03 PM

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಂಸದ ಸುಧಾಕರ್ ಅವರಿಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಈ ಕೆಳಕಂಡಂತೆ ಪ್ರಶ್ನೆಗಳನ್ನು ಮುಂದಿಡ್ಡಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅಶೋಕ್ ರವರು ಕರ್ನಾಟಕದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುಧಾಕರ್ ಅವರ ಜೊತೆಯಲ್ಲಿ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಭಲೇ ಜೋಡಿಯ ರೂಪದಲ್ಲಿ ಇಬ್ಬರು ಪ್ರತಿಭಟನೆಯ ನಾಯಕತ್ವವನ್ನು ವಹಿಸಿಕೊಂಡು ರಾಜ್ಯದ ಜನತೆಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಾಚಿಕೊಂಡಿರುವ ಅಶೋಕ್ ರವರು, ವಿರೋಧ ಪಕ್ಷದ ನಾಯಕನಾಗಿ ವಿಫಲವಾಗಿರುತ್ತಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪದೇಪದೇ ಅನವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವ ಇವರು ತಮ್ಮ ಮೇಲಿರುವಂತಹ ಗುರುತರವಾದ ಆರೋಪಗಳಿಗೆ ಸಾರ್ವಜನಿಕವಾಗಿ ಇದುವರೆಗೆ ಉತ್ತರವನ್ನು ಕೊಟ್ಟಿರುವುದಿಲ್ಲ ಎಂದಿದ್ದಾರೆ.

ಪಲಾಯನವಾದವನ್ನು ತಮ್ಮ ಧ್ಯೇಯ ವಾಕ್ಯ ಮಾಡಿಕೊಂಡಿರುವ ಆರ್.ಅಶೋಕ್ ರವರು, ತಾವೇ ಹಲವಾರು ಆರೋಪಗಳನ್ನು ಮೈತುಂಬಿಸಿಕೊಂಡಿದ್ದು, ಸಾರ್ವಜನಿಕವಾಗಿ ಉತ್ತರ ಕೊಡುವ ಶಕ್ತಿಯನ್ನು ಕಳೆದುಕೊಂಡು ಸರ್ಕಾರವನ್ನು ಟೀಕಿಸುವಂತಹ ನೈತಿಕತೆಯನ್ನು ಕಳೆದುಕೊಂಡಿರುತ್ತಾರೆ. ಇಂತಹ ಅಸಮರ್ಥ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಮೇಲೆ ಟೀಕೆ ಮಾಡುವುದು ಹಾಸ್ಯಾಸ್ಪದವಾಗಿರುತ್ತದೆ. ಬಿಜೆಪಿಯ ಗುಂಪುಗಾರಿಕೆಯನ್ನೇ ಅಸ್ತ್ರ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವ ಆರ್.ಅಶೋಕ್ ರವರು ಮೊದಲು ತಮ್ಮ ಪಕ್ಷದವರೇ ಅವರ ಮೇಲೆ ಮಾಡಿರುವಂತಹ ಆರೋಪಗಳಿಗೆ ಉತ್ತರವನ್ನು ನೀಡಲಿ. ಕರ್ನಾಟಕದ ವಿಧಾನಸಭೆಗೆ ತನ್ನದೇ ಆದಂತಹ ಹಿರಿಮೆ ಇರುತ್ತದೆ. ಆ ಹಿರಿಮೆಯನ್ನು ಸಂರಕ್ಷಣೆ ಮಾಡುವಲ್ಲಿ, ಗೌರವವನ್ನು ಕಾಪಾಡುವಲ್ಲಿ ವಿಫಲರಾಗಿರುವ ಆರ್. ಅಶೋಕ್ ರವರು ಒಬ್ಬ ಅಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕರ್ನಾಟಕದ ಜನರಿಗೆ ಕಾಣಿಸುತ್ತಿದ್ದಾರೆ. ಹಗರಣಗಳ ಕಳಂಕಿತರು ಮತ್ತು ಆರೋಪಿತರು ಆಗಿರುವಂತಹ ಆರ್.ಅಶೋಕ್ ಮತ್ತು ಸುಧಾಕರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕೆಲವೊಂದು ಪ್ರಶ್ನೆಗಳನ್ನು ಇಡಲು ಬಯಸುತ್ತದೆ. ಆರ್.ಅಶೋಕ್ ರವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮತ್ತು ಸುಧಾಕರ್ ರವರು ಲೋಕಸಭಾ ಸದಸ್ಯರಾಗಿ ಜನಸಾಮಾನ್ಯರಿಗೆ ಉತ್ತರ ನೀಡಬೇಕಾದಂತಹ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಎಂದಿದ್ದಾರೆ.

1. ಕೋವಿಡ್ ಹಗರಣದಲ್ಲಿ ಮೈಕಲ್ ಡಿಕುನ್ಹಾ ಆಯೋಗದ ವರದಿಗೆ ಅನುಗುಣವಾಗಿ ತನಿಖೆಗೆ ಅಥವಾ ಕಾನೂನು ಕ್ರಮಕ್ಕೆ ನೀವು ಸಮ್ಮತಿ ನೀಡುವಿರಾ?

2. ಆರ್. ಅಶೋಕ್ ರವರು ಕರ್ನಾಟಕದ ಪದ್ಮನಾಭನಗರ ಶಾಸಕರಾಗಿ ಪದ್ಮನಾಭನಗರದಲ್ಲಿ ಕೆರೆ ಒತ್ತುವವರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಒತ್ತಾಯ ಮಾಡುವರೇ ?

3. ಆರ್ .ಅಶೋಕ್ ರವರು ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದ ಬಗರ್ ಹುಕುಂ ಸಾಗುವಳಿಯ 2500 ಎಕರೆಯ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ತನಿಖೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವರೇ ?

4. ಹಿಂದಿನ ಬಿಜೆಪಿ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ ?

5. ಅಂದಿನ ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಂದಾಯ ಜಮೀನಿನ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ತನಿಖೆಗೆ ಒತ್ತಾಯಿಸುವರೇ?

6. ಹಿಂದಿನ ಬಿಜೆಪಿ ಸರ್ಕಾರದ ಪಿಎಸ್ಐ ಹಗರಣಗಳ ಮತ್ತು ಕೆಪಿಎಸ್ ಸಿ ಪರೀಕ್ಷಾ ಅಕ್ರಮಗಳ ಮೇಲೆ ತನಿಖೆಗೆ ಒತ್ತಾಯಿಸುವರೇ ?

7. ಹಿಂದಿನ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ಹಗರಣದ ತನಿಖೆಗೆ ಇವರು ಒತ್ತಾಯಿಸುವರೆ?

8. ಆರ್ ಅಶೋಕ್ ರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಪಟ್ಟಂತೆ ಅಕ್ರಮ ಭೂಮಿ ಹಂಚಿಕೆಯ ಸಂಬಂಧ ತನಿಖೆಗೆ ಒತ್ತಾಯಿಸುವರೆ ?

9. ಬಿಜೆಪಿ ನಾಯಕರು ಯತ್ನಾಳ್ ರವರು ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ 20,000 ಕೋಟಿ ರೂಪಾಯಿಗಳ ಆರೋಪವನ್ನು ವಿಜಯೇಂದ್ರರವರ ಮೇಲೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ?

10. ಯತ್ನಾಳ್ ರವರು ಈ ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಶೇಖರಣೆ ಮಾಡಿರುವುದಾಗಿ ವಿಜಯೇಂದ್ರ ಅವರ ಮೇಲೆ ಮಾಡಿರುವ ಆರೋಪವನ್ನು ತನಿಖೆ ಮಾಡಲು ಒತ್ತಾಯಿಸುವರೇ?

ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯನ್ನು ಮುಚ್ಚಿಕೊಳ್ಳಲು ಇವರು ಜಂಟಿಯಾಗಿ ಪ್ರಚಾರಕ್ಕೆ ಹೊರಟಿದ್ದಾರೆ. ಆದರೆ ಇವರ ಜಂಟಿ ಅಕ್ರಮಗಳ ಕುರಿತು ಸಾರ್ವಜನಿಕವಾಗಿ ಉತ್ತರ ನೀಡಲು ಇಬ್ಬರು ನಾಯಕರು ಹೊಣೆಗಾರಿಕೆಯನ್ನು ಹೊಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯದ ಹಿತಾಸಕ್ತಿಯಿಂದ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ.

ಆರ್ .ಅಶೋಕ್ ರವರು ಅವರ ಮೇಲೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವಂತಹ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಚುನಾವಣಾ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿರುತ್ತಾರೆ. ಕೇವಲ ಪ್ರಚಾರಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳನ್ನು ಮಾಡುವ ಬದಲು ಅವರು ತಮ್ಮ ಆತ್ಮ ಶುದ್ಧೀಕರಣ ಮಾಡಿಕೊಳ್ಳಲು ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆ ಸ್ಥಾನದ ಹಿರಿಮೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದಿದ್ದಾರೆ.

BIG NEWS: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ರುದ್ರೇಶ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಅನಾಮಧೇಯ ಪತ್ರ ಪತ್ತೆ

‘ಒಂದೇ ದಿನದಲ್ಲಿ 5 ಲಕ್ಷ ನಾಗರಿಕರು ಪ್ರಯಾಣ’ : ಇತಿಹಾಸ ನಿರ್ಮಿಸಿದ ‘ಭಾರತೀಯ ವಾಯುಯಾನ’

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಮರ್ಡರ್ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ!

04/06/2025 10:35 AM1 Min Read

BREAKING : ಟ್ರೊಫಿ ಸಮೇತ ನಾವು ಬೆಂಗಳೂರಿಗೆ ಆಗಮಿಸುತ್ತಿದ್ದೇವೆ : ವಿರಾಟ್ ಕೊಹ್ಲಿ ಹೇಳಿಕೆ ವೈರಲ್ | Watch Video

04/06/2025 10:27 AM1 Min Read

BIG NEWS : ಮದುವೆ ಮಂಟಪದಲ್ಲೂ ‘RCB’ ಹವಾ : ಟಿಶರ್ಟ್ ಹಿಡಿದು ಬೆಂಗಳೂರು ಗೆಲುವು ಸಂಭ್ರಮಿಸಿದ ನವಜೋಡಿ

04/06/2025 10:24 AM1 Min Read
Recent News

ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಂಡರೆ ಪಾಕ್ ಜೊತೆ ಭಾರತ ಮಾತುಕತೆ ನಡೆಸಬಹುದು: ಶಶಿ ತರೂರ್

04/06/2025 10:40 AM

BREAKING : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಮರ್ಡರ್ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ!

04/06/2025 10:35 AM

BREAKING : ಟ್ರೊಫಿ ಸಮೇತ ನಾವು ಬೆಂಗಳೂರಿಗೆ ಆಗಮಿಸುತ್ತಿದ್ದೇವೆ : ವಿರಾಟ್ ಕೊಹ್ಲಿ ಹೇಳಿಕೆ ವೈರಲ್ | Watch Video

04/06/2025 10:27 AM

BIG NEWS : ಮದುವೆ ಮಂಟಪದಲ್ಲೂ ‘RCB’ ಹವಾ : ಟಿಶರ್ಟ್ ಹಿಡಿದು ಬೆಂಗಳೂರು ಗೆಲುವು ಸಂಭ್ರಮಿಸಿದ ನವಜೋಡಿ

04/06/2025 10:24 AM
State News
KARNATAKA

BREAKING : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಮರ್ಡರ್ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ!

By kannadanewsnow0504/06/2025 10:35 AM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಕೊಲೆ ನಡೆದಿದ್ದು ವ್ಯಕ್ತಿ ಒಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ…

BREAKING : ಟ್ರೊಫಿ ಸಮೇತ ನಾವು ಬೆಂಗಳೂರಿಗೆ ಆಗಮಿಸುತ್ತಿದ್ದೇವೆ : ವಿರಾಟ್ ಕೊಹ್ಲಿ ಹೇಳಿಕೆ ವೈರಲ್ | Watch Video

04/06/2025 10:27 AM

BIG NEWS : ಮದುವೆ ಮಂಟಪದಲ್ಲೂ ‘RCB’ ಹವಾ : ಟಿಶರ್ಟ್ ಹಿಡಿದು ಬೆಂಗಳೂರು ಗೆಲುವು ಸಂಭ್ರಮಿಸಿದ ನವಜೋಡಿ

04/06/2025 10:24 AM

BREAKING : ಬೆಂಗಳೂರಲ್ಲಿ ಇಂದು ಅಭಿಮಾನಿಗಳಿಗೆ ಹಬ್ಬವೋ ಹಬ್ಬ : ಸಂಜೆ 5 ಗಂಟೆಗೆ ‘RCB’ ತಂಡದಿಂದ ‘ವಿಕ್ಟರಿ ಪರೇಡ್’

04/06/2025 10:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.