Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘ಮೂಲವ್ಯಾಧಿ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ? ಈ ತರಕಾರಿ ಅದ್ಭುತ ಪರಿಹಾರ, ಹೀಗೆ ತಿಂದ್ರಂತೂ.!

08/08/2025 10:14 PM

ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ತಾಳಗುಪ್ಪ– ಯಶವಂತಪುರ ವಿಶೇಷ ರೈಲು ಹೊರಡುವ ಸಮಯ ಬದಲಾವಣೆ

08/08/2025 9:58 PM

ಬೇರೆ ದೇಶಕ್ಕೆ ಹಾರಿದ ಭಾರತೀಯರು, 2024ರಲ್ಲಿ ದೇಶದ ‘ಪೌರತ್ವ’ ತ್ಯಜಿಸಿದ 2 ಲಕ್ಷಕ್ಕೂ ಹೆಚ್ಚು ಮಂದಿ : ಕೇಂದ್ರ ಸರ್ಕಾರ

08/08/2025 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳಿದ ಛಲವಾದಿ ನಾರಾಯಣಸ್ವಾಮಿಗೆ ಈ ತಿರುಗೇಟು ಕೊಟ್ಟ ರಮೇಶ್ ಬಾಬು
KARNATAKA

ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳಿದ ಛಲವಾದಿ ನಾರಾಯಣಸ್ವಾಮಿಗೆ ಈ ತಿರುಗೇಟು ಕೊಟ್ಟ ರಮೇಶ್ ಬಾಬು

By kannadanewsnow0902/01/2025 8:55 PM

ಬೆಂಗಳೂರು: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಬೌದ್ಧಿಕವಾಗಿ ದಿವಾಳಿಯಾಗಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು, ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ ಅಂತ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯನವರನ್ನು, ಮಲ್ಲಿಕಾರ್ಜುನ ಖರ್ಗೆರವರನ್ನು, ಡಿ.ಕೆ. ಶಿವಕುಮಾರ್ ಅವರನ್ನು ತೇಜೋವದೆ ಮಾಡುವ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ಹಲವಾರು ನಾಯಕರಿಗೆ ಹಲವಾರು ಬಹುಮಾನಗಳನ್ನ ಬಿಜೆಪಿ ಬಳುವಳಿಯಾಗಿ ನೀಡಿರುತ್ತದೆ. ಅಂತಹ ಬಳುವಳಿಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನ ಗಳಿಸಿದ ಛಲವಾದಿ ನಾರಾಯಣಸ್ವಾಮಿ ರವರು, ಮತ್ತೊಮ್ಮೆ ಬಿಜೆಪಿ ಲಾಟರಿ ಯೋಜನೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆದಿರುತ್ತಾರೆ. ಸಂಘಪರಿವಾರದ ಅಣತಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯ ಮುಂದೆ ಸ್ವಾಭಿಮಾನವನ್ನು ಬಿಟ್ಟು ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಚಡ್ಡಿಯನ್ನು ತಲೆಯ ಮೇಲೆ ಹೊತ್ತು ಹೋರಾಟ ಮಾಡಿದ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ತಿನ ಸ್ಥಾನವನ್ನು ಕರುಣಿಸಿದ ಭಾರತೀಯ ಜನತಾ ಪಕ್ಷ, ಖರ್ಗೆರವರ ಕುಟುಂಬವನ್ನು ವ್ಯಕ್ತಿಗತ ನಿಂದನೆ ಮತ್ತು ಟೀಕೆಯ ಮಾಡುವ ಕಾರಣಕ್ಕಾಗಿ ಚಲವಾದಿ ನಾರಾಯಣಸ್ವಾಮಿ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕರುಣಿಸಿದೆ ಎಂಬುದಾಗಿ ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ವೈಫಲ್ಯದ ನಾಯಕರಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಒಬ್ಬರು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ಪದೇಪದೇ ಖರ್ಗೆ ರವರ ಕುಟುಂಬದ ಮೇಲೆ ವ್ಯಕ್ತಿಗತ ಟೀಕೆ ನಿಂದನೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಅವರು, ಅವರ ರಾಜಕೀಯ ಹಾದಿಯನ್ನು ಒಂದೊಮ್ಮೆ ಹಿಂತಿರುಗಿ ನೋಡಬೇಕಾಗುತ್ತದೆ. ಜನತಾ ಪರಿವಾರದ ಅಂದಿನ ನಾಯಕರಾದ  ಜೀವರಾಜ್ ಅಳ್ವರ ಮುಖಾಂತರ ರಾಜಕೀಯ ಹೋರಾಟವನ್ನು ಕಂಡುಕೊಂಡಂತಹ ಚಲವಾದಿ ನಾರಾಯಣಸ್ವಾಮಿ, ತದನಂತರ ರಾಜಕೀಯವಾಗಿ ಬಂಗಾರಪ್ಪನವರ ಆಶ್ರಯದಲ್ಲಿ ಬೆಳೆದು ಬಂದರು. ನಂತರ ಖರ್ಗೆ ರವರ ರಾಜಕೀಯ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಸ್ಥಾನಗಳನ್ನು ಗಳಿಸಿ ಮತ್ತೆ ಪದವಿ ಆಸೆಗಾಗಿ ಭಾರತೀಯ ಜನತಾ ಪಕ್ಷದ ಕದತಟ್ಟಿದ ಛಲವಾದಿ ನಾರಾಯಣಸ್ವಾಮಿ, ಕೇವಲ ವ್ಯಕ್ತಿಗತ ಟೀಕೆಯ ನಿಂದನೆ ಹಿನ್ನೆಲೆಯಲ್ಲಿ ಹಲವಾರು ನಾಯಕರನ್ನು ಹಿಂದಕ್ಕೆ ತಳ್ಳಿ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹೊಂದಿರುತ್ತಾರೆ . ಬಹುತೇಕ ರಾಜ್ಯದ ಇತಿಹಾಸದಲ್ಲಿ ಅತ್ಯಂತ ವೈಫಲ್ಯದ ವಿರೋಧ ಪಕ್ಷದ ನಾಯಕ ಎನ್ನುವ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ರಾಜ್ಯದ ವಿಷಯಗಳನ್ನು ವಿಧಾನಪರಿಷತ್ತಿನಲ್ಲಿ ಚರ್ಚಿಸಲು ಅಥವಾ ಗಮನಸೆಳೆಯಲು ವಿಫಲರಾಗಿರುವ ಇವರು ವೈಯಕ್ತಿಕ ಟೀಕೆಯ ನೆಲೆಗಟ್ಟಿನಲ್ಲಿ ರಾಜ್ಯನಾಯಕರಾಗಲು ಹಪಾಹಪಿತನವನ್ನು ಹೊಂದಿರುತ್ತಾರೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆೆ.

ಪ್ರಿಯಾಂಕ ಖರ್ಗೆ ರವರ ರಾಜೀನಾಮೆ ಕೇಳಲು ಮಲ್ಲಿಕಾರ್ಜುನ ಖರ್ಗೆರವರಿಗೆ ಮತ್ತು ರಾಹುಲ್ ಗಾಂಧಿ ರವರಿಗೆ ಮನವಿ ಮಾಡುವ ನಾಟಕವನ್ನು ತೇಲಿ ಬಿಟ್ಟಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಹೊಟ್ಟೆ ತುಂಬ ಉಂಡು ಪಕ್ಷ ಬಿಟ್ಟವರು. ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಪಾಠ ಮಾಡುವ ಮೊದಲು ಇವರು ಯಾವ ಸಿದ್ಧಾಂತ ಅಥವಾ ಯಾವ ಹೋರಾಟದ ಮುಖಾಂತರ ಭಾರತೀಯ ಜನತಾ ಪಕ್ಷದಲ್ಲಿ ಅಧಿಕಾರಗಳನ್ನು ಪಡೆದರು ಎಂಬುದನ್ನು ಮೊದಲು ತಿಳಿಸಲಿ ಎಂಬುದಾಗಿ ಆಗ್ರಹಿಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪಾಠ ಹೇಳುವ ಮೂಲಕ ನಗೆ ಪಾಟಲಿಗೆ ಒಳಗಾಗಿದ್ದಾರೆ. ಕರ್ನಾಟಕದ ಬಿಜೆಪಿ ಮಾಜಿ ಮುಖ್ಯಮಂತ್ರಿಗಳು ಪೋಸ್ಕೋ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರದೇ ಪಕ್ಷದ ನಾಯಕರು ಅನೇಕ ಸೆಕ್ಸ್ ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆಗಳನ್ನು ಪಡೆದುಕೊಂಡು ತಲೆ ತಗ್ಗಿಸಿಕೊಂಡು ಓಡಾಡುತ್ತಿದ್ದಾರೆ. ಅವರದೇ ಪಕ್ಷದ ಶಾಸಕರು ಪರಿಶಿಷ್ಟ ಜಾತಿಗಳ ಜಾತಿನಿಂದನೆಯ ಗಂಭೀರ ಆರೋಪದ ಮೇಲೆ ಜಾಮೀನು ಪಡೆದುಕೊಂಡು ಆಚೆ ಇರುತ್ತಾರೆ. ಇಂತಹ ಬಿಜೆಪಿ ನಾಯಕರ ರಾಜೀನಾಮೆ ಕೇಳಲು ನೈತಿಕ ಶಕ್ತಿಯನ್ನು ಇಟ್ಟುಕೊಳ್ಳದ ಛಲವಾದಿ ರವರು, ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳಲು ಬಂದಿರುವುದು ಅವರ ದಿವಾಳಿತನದ ಪರಮಾವಧಿಯಾಗಿರುತ್ತದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆತ್ಮಹತ್ಯೆಗೆ ಒಳಗಾಗಿರುವ ಸಚಿನ್ ಪಂಚಾಳ ರವರ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆರವರ ಮನವಿಯ ಮೇರೆಗೆ ರಾಜ್ಯ ಸರ್ಕಾರ ಸದರಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿರುತ್ತದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರವೃತ್ತವಾಗಿರುತ್ತದೆ . ಆದರೆ ರಾಜಕೀಯ ಲಾಭಕ್ಕಾಗಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಖರ್ಗೆ ಕುಟುಂಬವನ್ನು ತೇಜೋವದೆ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಯಾವ ಸಾಕ್ಷ್ಯವನ್ನು ಇಟ್ಟು ಈ ಪ್ರಕರಣದಲ್ಲಿ ರಾಜೀನಾಮೆ ಕೇಳುತ್ತಿದ್ದಾರೆ? ಇಂಥದೇ ಪ್ರಕರಣದಲ್ಲಿ ಬಿಜೆಪಿ ನಾಯಕರು ರಾಜೀನಾಮೆ ನೀಡುವುದಾದರೆ ಕೇಂದ್ರ ಸರ್ಕಾರದಿಂದ ರಾಜ್ಯ ಬಿಜೆಪಿಯವರಿಗೆ ಬಹುತೇಕ ನಾಯಕರು ಸಾಲಿನಲ್ಲಿ ನಿಂತು ರಾಜೀನಾಮೆಯನ್ನು ನೀಡಬೇಕಾಗುತ್ತದೆ ಎಂದಿದ್ದಾರೆ.

ಬಿಜೆಪಿ ರಾಜ್ಯ ಘಟಕದಲ್ಲಿರುವ ಗುಂಪುಗಾರಿಕೆಯನ್ನು ಮುಚ್ಚಿಕೊಳ್ಳಲು ಮತ್ತು ವಿಧಾನಪರಿಷತ್ತಿನಲ್ಲಿ ತಮ್ಮ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉಳಿಸಿಕೊಳ್ಳಲು ಛಲವಾದಿ ನಾರಾಯಣಸ್ವಾಮಿ ರವರು ಇಂತಹ ಎಳಸುತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಪಾಠವನ್ನು ಹೇಳುವ ಮೊದಲು ಅವರು ತಮ್ಮ ಹಿನ್ನೆಲೆಯನ್ನು ಮತ್ತು ಭಾರತೀಯ ಜನತಾ ಪಕ್ಷದ ನಾಯಕರ ಮೇಲಿರುವ ಆರೋಪಗಳನ್ನು ಒಮ್ಮೆ ಗಮನಿಸಲಿ. ಕರ್ನಾಟಕದ ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕವಾಗಿ ಭಾರತೀಯ ಜನತಾ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನರ ಮುಂದೆ ಇಡುತ್ತಿದ್ದು. ಪ್ರಿಯಾಂಕ ಖರ್ಗೆರವರು ಸಮರ್ಥವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ಇವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಛಲವಾದಿ ನಾರಾಯಣಸ್ವಾಮಿ ಅಂತಹ ನಾಯಕರನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಜನ ಹೋರಾಟ ತಿಳಿಯದ ಬಿಜೆಪಿ ಬೀದಿಯಲ್ಲಿ ನಿಂತು ಅಂಗಿ ಹರಿದುಕೊಳ್ಳುವ ಬದಲು ರಾಜ್ಯದ ಜನರ ಸಮಸ್ಯೆಗಳ ಮೇಲೆ ಭಾರತೀಯ ಜನತಾ ಪಕ್ಷದ ಹೋರಾಟ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದ್ದಾರೆ.

2024ನೇ ಸಾಲಿನ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಚಿವ ಎಂ.ಬಿ ಪಾಟೀಲ್ ಆಯ್ಕೆ: ಜ.12ರಂದು ಸಿಎಂ ಪ್ರದಾನ

BREAKING: ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್: ಸಾರಿಗೆ ಬಸ್ ಪ್ರಯಾಣ ದರ ಶೇ.15ರಷ್ಟು ಏರಿಕೆಗೆ ಸಂಪುಟ ಅಸ್ತು | KSRTC Bus Ticket Price Hike

ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ

Share. Facebook Twitter LinkedIn WhatsApp Email

Related Posts

ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ತಾಳಗುಪ್ಪ– ಯಶವಂತಪುರ ವಿಶೇಷ ರೈಲು ಹೊರಡುವ ಸಮಯ ಬದಲಾವಣೆ

08/08/2025 9:58 PM1 Min Read

ಮಂತ್ರಾಲಯದಲ್ಲಿ ‘ಪರಿಮಳ ತೀರ್ಥಂ’ ಪುಷ್ಕರಣಿ ಉದ್ಘಾಟನೆ: ಡಾ.ಕೆ.ಪ್ರಕಾಶ್ ಶೆಟ್ಟಿ ದಂಪತಿಗಳಿಂದ 4 ಕೋಟಿ ಮಹಾದಾನ

08/08/2025 9:44 PM1 Min Read

ಆ.15ರಂದು ಶಾಲಾ-ಕಾಲೇಜುಗಳಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಅನುಷ್ಠಾನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

08/08/2025 9:27 PM2 Mins Read
Recent News

ನೀವು ‘ಮೂಲವ್ಯಾಧಿ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ? ಈ ತರಕಾರಿ ಅದ್ಭುತ ಪರಿಹಾರ, ಹೀಗೆ ತಿಂದ್ರಂತೂ.!

08/08/2025 10:14 PM

ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ತಾಳಗುಪ್ಪ– ಯಶವಂತಪುರ ವಿಶೇಷ ರೈಲು ಹೊರಡುವ ಸಮಯ ಬದಲಾವಣೆ

08/08/2025 9:58 PM

ಬೇರೆ ದೇಶಕ್ಕೆ ಹಾರಿದ ಭಾರತೀಯರು, 2024ರಲ್ಲಿ ದೇಶದ ‘ಪೌರತ್ವ’ ತ್ಯಜಿಸಿದ 2 ಲಕ್ಷಕ್ಕೂ ಹೆಚ್ಚು ಮಂದಿ : ಕೇಂದ್ರ ಸರ್ಕಾರ

08/08/2025 9:51 PM

ಮಂತ್ರಾಲಯದಲ್ಲಿ ‘ಪರಿಮಳ ತೀರ್ಥಂ’ ಪುಷ್ಕರಣಿ ಉದ್ಘಾಟನೆ: ಡಾ.ಕೆ.ಪ್ರಕಾಶ್ ಶೆಟ್ಟಿ ದಂಪತಿಗಳಿಂದ 4 ಕೋಟಿ ಮಹಾದಾನ

08/08/2025 9:44 PM
State News
KARNATAKA

ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ತಾಳಗುಪ್ಪ– ಯಶವಂತಪುರ ವಿಶೇಷ ರೈಲು ಹೊರಡುವ ಸಮಯ ಬದಲಾವಣೆ

By kannadanewsnow0908/08/2025 9:58 PM KARNATAKA 1 Min Read

ಮೈಸೂರು: ಪ್ರಯಾಣಿಕರ ಸೌಕರ್ಯಕ್ಕಾಗಿ, ನೈಋತ್ಯ ರೈಲ್ವೆ ರೈಲು ಸಂಖ್ಯೆ. 06588 ತಾಳಗುಪ್ಪ – ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಹೊರಡುವ ಸಮಯವನ್ನು…

ಮಂತ್ರಾಲಯದಲ್ಲಿ ‘ಪರಿಮಳ ತೀರ್ಥಂ’ ಪುಷ್ಕರಣಿ ಉದ್ಘಾಟನೆ: ಡಾ.ಕೆ.ಪ್ರಕಾಶ್ ಶೆಟ್ಟಿ ದಂಪತಿಗಳಿಂದ 4 ಕೋಟಿ ಮಹಾದಾನ

08/08/2025 9:44 PM

ಆ.15ರಂದು ಶಾಲಾ-ಕಾಲೇಜುಗಳಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಅನುಷ್ಠಾನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

08/08/2025 9:27 PM

BREAKING: ನ್ಯಾಯಾಲಯದ ಆದೇಶದಂತೆ ನಟ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು: ವಕೀಲ ಕಾರ್ತಿಕ್ ಸ್ಪಷ್ಟನೆ

08/08/2025 9:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.