ಶಿವಮೊಗ್ಗ: ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರೆದಿದೆ. ಹೀಗಾಗಿ ಪ್ರವಾಹದ ಭೀತಿ ಎದುರಾಗಿದ್ದು, ಜನರಿಗೆ ಆತಂಕ ಶುರುವಾಗಿದೆ. ಈಗಾಗಲೇ ಹಳ್ಳ, ನದಿ . ಕೆರೆ ತುಂಬಿ ತುಳುಕುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ.

BIGG NEWS: ಕಾವೇರಿ ನದಿ ಭೋರ್ಗರೆತ; ಕೋಟೆ ಗಣಪತಿ ದೇವಸ್ಥಾನ ಜಲಾವೃತ

 

ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಸಾಬದಲ್ಲಿ ಭವಾನಿ ಎಂಬುಬರು ನಿಧನ ಹೊಂದಿದ್ದರು. ಇವರ ಅಂತ್ಯಕ್ರಿಯೆಗೆ ಮಳೆ ಅಡ್ಡಿಯಾಗಿದೆ. ಯಾಕೆಂದರೆ ರುದ್ರಭೂಮಿಯಲ್ಲಿ ಯಾವುದೇ ಶೆಡ್‌ ಹಾಕಿಲ್ಲ. ಹಾಗಾಗಿ ಅಂತ್ಯಸಂಸ್ಕಾರ ಮಾಡೋದು ಕಷ್ಟವಾಗಿದೆ. ಜನರೇ ಟಾರ್ಪಲ್‌ ಹಾಕಿ ಅಂತ್ಯಕ್ರಿಯೆ ಮಾಡಿದ್ದಾರೆ. ಪ್ರತಿವರ್ಷ ಮಳೆ ಬಂದರೆ, ಇದೇ ರೀತಿ ಆಗುತ್ತದೆ. ಹೀಗಾಗಿ ಅಧಿಕಾರಿಗಳಿಗೆ ಶೆಡ್‌ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share.
Exit mobile version