ಬೆಂಗಳೂರು: ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ (SWRWWO) ಬೆಂಗಳೂರು ವಿಭಾಗವು ತನ್ನ ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಭಾಗವಾಗಿ ನಗರದ ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿ, ಹಿರಿಯ ಚೇತನಗಳಿಗೆ ಆಸರೆಯಾಗುವ ಮೂಲಕ ಅಪಾರ ಮಾನವೀಯತೆ ಮೆರೆದಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ‘ಲವಲವಿಕೆ ವೃದ್ಧಾಶ್ರಮ’ಕ್ಕೆ ಸಂಸ್ಥೆಯ ಪದಾಧಿಕಾರಿಗಳು ಇಂದು ವಿಶೇಷ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಯೋಗಕ್ಷೇಮ ವಿಚಾರಿಸಿದರು.
ಹಿರಿಯರೊಂದಿಗೆ ಸಂವಾದ – ಸೌಹಾರ್ದಯುತ ಸಮಯ:
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ರೀನಾ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಉಪಾಧ್ಯಕ್ಷರುಗಳಾದ ಅಮಿತಾ ಮೋಹನ್ ಪುರಿಯಾ ಮತ್ತು ಜಯಶ್ರೀ ಕಾತರಕಿ, ಕಾರ್ಯದರ್ಶಿ ಸ್ವಾತಿ ಪ್ರಿಯಾ, ಖಜಾಂಚಿ ಭಾಗ್ಯಶ್ರೀ ಹಾಗೂ ಸಂಸ್ಥೆಯ ಇತರ ಕಾರ್ಯಕಾರಿ ಸದಸ್ಯರು ಭಾಗವಹಿಸಿದ್ದರು. ಪದಾಧಿಕಾರಿಗಳೆಲ್ಲರೂ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರೊಂದಿಗೆ ಆತ್ಮೀಕವಾಗಿ ಸಂವಾದ ನಡೆಸಿ, ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ವೃದ್ಧರಲ್ಲಿ ಸಂತಸ ಮೂಡಿಸಿದರು.
₹75,000 ಮೌಲ್ಯದ ಸಾಮಗ್ರಿಗಳ ದೇಣಿಗೆ:
ವೃದ್ಧಾಶ್ರಮದ ನಿವಾಸಿಗಳ ದೈನಂದಿನ ಮತ್ತು ಆರೋಗ್ಯದ ಅಗತ್ಯತೆಗಳನ್ನು ಪೂರೈಸುವ ಮಹತ್ಕಾಂಕ್ಷೆಯೊಂದಿಗೆ, ಸಂಸ್ಥೆಯ ವತಿಯಿಂದ ₹75,000 ಒಟ್ಟು ಮೌಲ್ಯದ ದಿನಸಿ ಸಾಮಗ್ರಿಗಳು ಹಾಗೂ ವೈದ್ಯಕೀಯ ಬಳಕೆಯ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಬದ್ಧತೆಯ ಪ್ರತಿಬಿಂಬ: ಈ ಭೇಟಿಯು ಕೇವಲ ಒಂದು ಔಪಚಾರಿಕ ಕಾರ್ಯಕ್ರಮವಾಗಿರದೆ, ಸಮಾಜದ ಮುಖವಾಹಿನಿಯಿಂದ ದೂರವಿರುವ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣದತ್ತ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯು ಹೊಂದಿರುವ ನಿರಂತರ ಬದ್ಧತೆ ಹಾಗೂ ಕಾಳಜಿಗೆ ಸಾಕ್ಷಿಯಾಗಿದೆ. ಸಂಸ್ಥೆಯ ಈ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
BREAKING: ರಾಜ್ಯದ ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್: ಮರು ಅರ್ಜಿ ಸಲ್ಲಿಕೆ ಕಡ್ಡಾಯ








