Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆ ಖಾಯಿಲೆಗಳಿಗೆ ಇದು ಬ್ರಹ್ಮಾಸ್ತ್ರ.! ಹಾಲಿನಲ್ಲಿ ನೆನೆಸಿ ತಿಂದ್ರೆ ಸಮಸ್ಯೆಗಳೆಲ್ಲ ಮಾಯ!

01/08/2025 10:08 PM

“ನಿರ್ಜನ ಪ್ರದೇಶಗಳನ್ನ ತಪ್ಪಿಸಿ” : ಜನಾಂಗೀಯ ದಾಳಿ ಹೆಚ್ಚಳದ ನಡುವೆ ಐರ್ಲೆಂಡ್’ನಲ್ಲಿರೋ ತನ್ನ ಪ್ರಜೆಗಳಿಗೆ ಭಾರತ ಸಲಹೆ

01/08/2025 9:41 PM

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ನೂತನವಾಗಿ ’52 ಇಂದಿರಾ ಕ್ಯಾಂಟೀನ್’ ಆರಂಭ

01/08/2025 9:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
KARNATAKA

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

By kannadanewsnow0908/01/2025 6:10 PM

ಬೆಂಗಳೂರು: ಜನವರಿ 17 ರಿಂದ ಏಪ್ರಿಲ್ 16, 2025 ರವರೆಗೆ 90 ದಿನಗಳ ಕಾಲ, ಕ್ಯಾಸಲ್ ರಾಕ್-ಕುಲೆಮ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಹಿನ್ನಲೆ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದತಿ ಮತ್ತು ಬೇರೆ ಮಾರ್ಗದ ಮೂಲಕ ಚಲಿಸಲಿದೆ. ವಿವರಗಳು ಈ ಕೆಳಗಿನಂತಿವೆ:

ರೈಲುಗಳ ಸಂಚಾರ ಭಾಗಶಃ ರದ್ದು:

1. ಜನವರಿ 16 ರಿಂದ ಏಪ್ರಿಲ್ 15, 2025 ರವರೆಗೆ ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದವರೆಗೂ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.

2. ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ-ಶಾಲಿಮಾರ್ ಎಕ್ಸ್ ಪ್ರೆಸ್ ರೈಲು ಜನವರಿ 19 ರಿಂದ ಏಪ್ರಿಲ್ 18, 2025 ರವರೆಗೆ ವಾಸ್ಕೋ ಡ ಗಾಮಾ ನಿಲ್ದಾಣದ ಬದಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಂಡಿದೆ.

3. ಜನವರಿ 16, 23, 30; ಫೆಬ್ರವರಿ 6, 13, 20, 27; ಮಾರ್ಚ್ 6, 13, 20, 27; ಮತ್ತು ಏಪ್ರಿಲ್ 3, 10, 2025 ರಂದು ಹೊರಡುವ ರೈಲು ಸಂಖ್ಯೆ 17419/17021 ತಿರುಪತಿ / ಹೈದರಾಬಾದ್-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳುತ್ತದೆ.

4. ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ-ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜನವರಿ 17, 24, 31; ಫೆಬ್ರವರಿ 7, 14, 21, 28; ಮಾರ್ಚ್ 7, 14, 21, 28; ಮತ್ತು ಏಪ್ರಿಲ್ 4, 11, 2025 ರಂದು ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

5. ಜನವರಿ 17 ರಿಂದ ಏಪ್ರಿಲ್ 16, 2025 ರವರೆಗೆ ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.

6. ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ-ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜನವರಿ 18 ರಿಂದ ಏಪ್ರಿಲ್ 17, 2025 ರವರೆಗೆ ವಾಸ್ಕೋಡಗಾಮಾ ನಿಲ್ದಾಣದ ಬದಲಿಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ, ವಾಸ್ಕೋಡಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.

ರೈಲುಗಳ ಮಾರ್ಗ ಬದಲಾವಣೆ:

1. ಜನವರಿ 18 ರಿಂದ ಏಪ್ರಿಲ್ 12, 2025 ರವರೆ ಪುಣೆಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11097 ಪುಣೆ-ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸತಾರಾದಿಂದ ಸ್ಯಾನ್ವೊರ್ಡೆಮ್ ನಿಲ್ದಾಣಗಳವರೆಗೆ ತಪ್ಪಿರುತ್ತದೆ.

2. ಜನವರಿ 20 ರಿಂದ ಏಪ್ರಿಲ್ 14, 2025 ರವರೆಗೆ ಎರ್ನಾಕುಲಂ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಡ್ಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸ್ಯಾನ್ವೊರ್ಡೆಮ್ ನಿಲ್ದಾಣದಿಂದ ಸತಾರಾ ನಿಲ್ದಾಣಗಳವರೆಗೆ ಇರುವುದಿಲ್ಲ.

3. ಜನವರಿ 20 ರಿಂದ ಏಪ್ರಿಲ್ 14, 2025 ರವರೆಗೆ ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ ಡ ಗಾಮಾ-ವೆಲಂಕಣಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸ್ಯಾನ್ವೊರ್ಡೆಮ್ ನಿಲ್ದಾಣದಿಂದ ಸೇಲಂ ನಿಲ್ದಾಣಗಳವರೆಗೆ ಇರುವುದಿಲ್ಲ.

4. ಜನವರಿ 21 ರಿಂದ ಏಪ್ರಿಲ್ 15 ರವರೆಗೆ ವೆಲಂಕಣಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17316 ವೆಲಂಕಣಿ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸೇಲಂನಿಂದ ಸ್ಯಾನ್ವೊರ್ಡೆಮ್ ನಿಲ್ದಾಣಗಳವರೆಗೆ ಇರುವುದಿಲ್ಲ.

ಮುಂಬೈನಲ್ಲಿ ಮೊದಲ HMPV ವೈರಸ್ ಕೇಸ್ ಪತ್ತೆ: ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ | HMPV Case

BREAKING: ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ 6 ನಕ್ಸಲರು: ಕೆಲವೇ ಕ್ಷಣದಲ್ಲಿ ಶರಣಾಗತಿ

Share. Facebook Twitter LinkedIn WhatsApp Email

Related Posts

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ನೂತನವಾಗಿ ’52 ಇಂದಿರಾ ಕ್ಯಾಂಟೀನ್’ ಆರಂಭ

01/08/2025 9:41 PM1 Min Read

BREAKING: ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

01/08/2025 9:27 PM1 Min Read

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

01/08/2025 7:51 PM2 Mins Read
Recent News

ಆ ಖಾಯಿಲೆಗಳಿಗೆ ಇದು ಬ್ರಹ್ಮಾಸ್ತ್ರ.! ಹಾಲಿನಲ್ಲಿ ನೆನೆಸಿ ತಿಂದ್ರೆ ಸಮಸ್ಯೆಗಳೆಲ್ಲ ಮಾಯ!

01/08/2025 10:08 PM

“ನಿರ್ಜನ ಪ್ರದೇಶಗಳನ್ನ ತಪ್ಪಿಸಿ” : ಜನಾಂಗೀಯ ದಾಳಿ ಹೆಚ್ಚಳದ ನಡುವೆ ಐರ್ಲೆಂಡ್’ನಲ್ಲಿರೋ ತನ್ನ ಪ್ರಜೆಗಳಿಗೆ ಭಾರತ ಸಲಹೆ

01/08/2025 9:41 PM

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ನೂತನವಾಗಿ ’52 ಇಂದಿರಾ ಕ್ಯಾಂಟೀನ್’ ಆರಂಭ

01/08/2025 9:41 PM

BREAKING: ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್: ಇಬ್ಬರು ಭಯೋತ್ಪಾದಕರು ಸೆರೆ

01/08/2025 9:36 PM
State News
KARNATAKA

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ನೂತನವಾಗಿ ’52 ಇಂದಿರಾ ಕ್ಯಾಂಟೀನ್’ ಆರಂಭ

By kannadanewsnow0901/08/2025 9:41 PM KARNATAKA 1 Min Read

ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನಗರದಲ್ಲಿ ನೂತನ 52 ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಈ ಮೂಲಕ ಹಸಿದವರಿಗೆ…

BREAKING: ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

01/08/2025 9:27 PM

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

01/08/2025 7:51 PM

10 ದಿನದಲ್ಲಿ ಮದ್ದೂರು ಪುರಸಭಾ ವ್ಯಾಪ್ತಿಯ ಎ ಮತ್ತು ಬಿ ಖಾತಾ ವಿತರಿಸಿ: ಶಾಸಕ ಕೆ.ಎಂ.ಉದಯ್ ಸೂಚನೆ

01/08/2025 7:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.