ರಾಯಚೂರು : ಮದುವೆಯಾಗುವುದಕ್ಕೆ ಪ್ರಿಯಕರ ನಿರಾಕರಿಸಿದ ಹಿನ್ನೆಲೆಯಲ್ಲಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಪ್ರಿಯಕರ ವಿನಯ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ ೨೧ ರಂದು ರಾಯಚೂರಿನ ಮಹಿಳಾ ಸಾಂತ್ವನ ಕೇಂದ್ರ ಕಟ್ಟಡದಿಂದ ಹಾರಿ ಯುವತಿ ಅನುರಾಧ ಆತ್ಮಹತ್ಯೆ ಮಾಡಿಕೊಂಡಿದ್ದರು. ಯುವತಿ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಯುವಕ ವಿನಯ್ ರೆಡ್ಡಿ ಜೊತೆಗೆ ಮನೆ ಬಿಟ್ಟು ಹೋಗಿದ್ದ ಅನುರಾಧಳನ್ನು ಬಿಟ್ಟು ವಿನಯ್ ರೆಡ್ಡಿ ಪರಾರಿಯಾಗಿದ್ದ. ಬಳಿಕ ಠಾಣೆಗೆ ಬಂದ ಪೋಷಕರ ಜೊತೆಗೆ ಹೋಗಲು ಅನುರಾಧ ನಿರಾಕರಣೆ ಹಿನ್ನೆಲೆಯಲಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ವಿನಯ್ ರೆಡ್ಡಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನುರಾಧ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ರಾಯಚೂರು ಪಶ್ಚಿಮ ವಿಭಾಗದ ಪೊಲೀಸರು ಆರೋಪಿ ವಿನಯ್ ರೆಡ್ಡಿಯನ್ನು ಬಂಧಿಸಿದ್ದಾರೆ.