Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

08/08/2025 7:52 PM

ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ

08/08/2025 7:50 PM

‘ಕೃಷಿ ಭೂಮಿ’ಯಲ್ಲಿ ‘ಫಾರ್ಮ್ ಹೌಸ್’ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಏನು? ಇಲ್ಲಿದೆ ಮಾಹಿತಿ

08/08/2025 7:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ
KARNATAKA

ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ

By kannadanewsnow0908/08/2025 7:50 PM

ಬೆಂಗಳೂರು: ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬಹುಶಃ ಒಬ್ಬ ಹುಡುಗಾಟದ ಹುಡುಗ. ಹೀಗೆ ಹುಡುಗಾಟ ಆಡುತ್ತಿದ್ದರೆ ಜನರು ನಿಮ್ಮನ್ನು ಪ್ರಬುದ್ಧ ನಾಯಕ ಎಂದು ತಿಳಿದುಕೊಳ್ಳುವುದಿಲ್ಲ ಎಂಬುದಾಗಿ ನೋವಿನಿಂದ ತಿಳಿಸಲು ಬಯಸುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ವಿಪಕ್ಷ ನಾಯಕ ಆರ್.ಅಶೋಕ್ ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮೊದಲೇ, ಮತ ಎಣಿಕೆ ನಡೆಯುತ್ತಿದ್ದಾಗ ಪತ್ರಕರ್ತರು ಪ್ರಶ್ನಿಸಿದಾಗ ಡಿ.ಕೆ.ಶಿವಕುಮಾರ್ ಅವರು, ನಮಗೆ 136 ಸೀಟ್ ಬಂದೇ ಬರಲಿದೆ ಎಂದಿದ್ದರು. ಇದು ಶಾಸ್ತ್ರದಲ್ಲಿ ಬರುತ್ತದೆಯೇ ಎಂದು ಕೇಳಿದರು. ಅಷ್ಟೇ ಸೀಟು ಬಂತಲ್ಲವೇ? ಚುನಾವಣಾ ಅಕ್ರಮ ಮಾಡಿ, 136 ಸೀಟ್ ಎಂಬುದಾಗಿ ಖಾತ್ರಿ ಪಡಿಸಿಕೊಂಡಿದ್ದೀರಾ ಎಂದು ವ್ಯಂಗ್ಯವಾಡಿದರು. ಹಾಗಿದ್ದರೆ ಈ ಮತದಾರರ ಪಟ್ಟಿಗೆ ನೀವೇ ಹೆಸರು ಸೇರಿಸಿದ್ದೀರಿ ಎಂದು ಈಗ ಗೊತ್ತಾಗುತ್ತದೆ ಎಂದು ತಿಳಿಸಿದರು.

ಇದು ಮುಕ್ತ ಮತದಾನವೇ ಅಥವಾ ಗೌಪ್ಯ ಮತದಾನವೇ? ಸೇರಿಸಿದ ಹೆಸರಿದ್ದರೆ ಅವರು ಯಾವ ಪಕ್ಷಕ್ಕೆ ಮತದಾನ ಮಾಡಿದ್ದಾರೆಂದು ಹೇಗೆ ಗೊತ್ತಾಗಲು ಸಾಧ್ಯ ಎಂದು ಕೇಳಿದರು. ಒಂದೇ ವ್ಯಕ್ತಿಯ ಭಾವಚಿತ್ರವುಳ್ಳ ಹೆಸರು ಬೇರೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಇದ್ದರೆ ಅಂಥ ವ್ಯಕ್ತಿಯ ವಾಸ ಪ್ರದೇಶ ಹೊರತುಪಡಿಸಿ ಎರಡನೇ ಅಥವಾ ಮೂರನೇ ಪ್ರದೇಶದ ಹೆಸರು ರದ್ದು ಮಾಡಲು ನಾವೇ ಹೋರಾಟ ಮಾಡಿದ್ದೆವು. ಇದೆಲ್ಲ ಕಾಂಗ್ರೆಸ್ ತಂತ್ರಗಳು ಎಂದು ಟೀಕಿಸಿದರು. ಈ ಹೋರಾಟವನ್ನು ಕಾಂಗ್ರೆಸ್ಸಿನವರು ವಿರೋಧಿಸಿದ್ದರು ಎಂದು ಆರೋಪಿಸಿದರು.

ದೆಹಲಿಯಿಂದ ಬಂದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಮತಗಳ್ಳತನದ ಆರೋಪ ಮಾಡಿದ್ದಾರೆ. ಹಾಗಿದ್ದರೆ ಇಲ್ಲಿನ ಕಾಂಗ್ರೆಸ್ಸಿಗರು ಕತ್ತೆ ಕಾಯುತ್ತಿದ್ದರೇ ಎಂದು ಕೇಳಿದರು. ನಿಮಗೆ ನಾಚಿಕೆ ಆಗಬೇಕು ಎಂದು ತಿಳಿಸಿದರು. ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಲೋಪದೋಷವನ್ನು ನೀವು ಹುಡುಕಿ ರಾಹುಲ್ ಗಾಂಧಿಯವರಿಗೆ ಕೊಟ್ಟಿರಾ ಅಥವಾ ಅವರು ಹುಡುಕಿ ಬಂದು ನಿಮಗೆ ಹೇಳಿದರೇ ಎಂದು ಪ್ರಶ್ನೆ ಹಾಕಿದರು.

ಮಹಾರಾಷ್ಟ್ರದಲ್ಲಿ ಮತ ಇರುವವನು ಇನ್ನೊಂದು ಹಂತದಲ್ಲಿ ಕರ್ನಾಟಕದಲ್ಲಿ ಮತ ಹಾಕುತ್ತಾನಾ? ಮತದಾನ ಪ್ರಮಾಣ ಹೆಚ್ಚಳಕ್ಕೆ ಮನೆಯಲ್ಲಿ ಕುಳಿತಿರದೆ ಮತದಾನ ಮಾಡಿ ಎಂದು ಟಿ.ವಿ.ಗಳಲ್ಲಿ ಬರುತ್ತಿರುತ್ತದೆ. ಹಲವೆಡೆ ಮತದಾನದ ಸಮಸ್ಯೆ ತಪ್ಪಿಸಲು ಒಂದೇ ವ್ಯಕ್ತಿಯ ಫೋಟೊ ಎಂಬುದನ್ನು ಆಧಾರ ಇಟ್ಟುಕೊಂಡು ಯಾಕೆ ರದ್ದು ಮಾಡಲು ನೀವು ಒಪ್ಪುವುದಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಜಾತಿಗÀಣತಿಗೆ ಮತದಾರರ ಪಟ್ಟಿಯನ್ನು ಆಧಾರವಾಗಿ ಇಟ್ಟುಕೊಂಡಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಮಾತಿಗೂ ಮುಖ್ಯಮಂತ್ರಿಗಳ ಮಾತಿಗೂ ವಿರೋಧಾಭಾಸ ಇದೆ ಎಂದು ಟೀಕಿಸಿದರು.

Share. Facebook Twitter LinkedIn WhatsApp Email

Related Posts

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

08/08/2025 7:52 PM4 Mins Read

‘ಕೃಷಿ ಭೂಮಿ’ಯಲ್ಲಿ ‘ಫಾರ್ಮ್ ಹೌಸ್’ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಏನು? ಇಲ್ಲಿದೆ ಮಾಹಿತಿ

08/08/2025 7:49 PM2 Mins Read

ಬೆಂಗಳೂರಲ್ಲಿ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

08/08/2025 7:27 PM1 Min Read
Recent News

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

08/08/2025 7:52 PM

ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ

08/08/2025 7:50 PM

‘ಕೃಷಿ ಭೂಮಿ’ಯಲ್ಲಿ ‘ಫಾರ್ಮ್ ಹೌಸ್’ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಏನು? ಇಲ್ಲಿದೆ ಮಾಹಿತಿ

08/08/2025 7:49 PM

ಬೆಂಗಳೂರಲ್ಲಿ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

08/08/2025 7:27 PM
State News
KARNATAKA

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

By kannadanewsnow0908/08/2025 7:52 PM KARNATAKA 4 Mins Read

ಬೆಂಗಳೂರು: “ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್…

ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ

08/08/2025 7:50 PM

‘ಕೃಷಿ ಭೂಮಿ’ಯಲ್ಲಿ ‘ಫಾರ್ಮ್ ಹೌಸ್’ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಏನು? ಇಲ್ಲಿದೆ ಮಾಹಿತಿ

08/08/2025 7:49 PM

ಬೆಂಗಳೂರಲ್ಲಿ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

08/08/2025 7:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.