ನವದೆಹಲಿ: ಜುಲೈ 1ರಿಂದ ಹಲವು ಹಣಕಾಸು ಸೇವೆಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಪಾನ್ ಕಾರ್ಡ್ ಪಡೆಯಲು ಆಧಾರ್ ದೃಢೀಕರಣದಿಂದ ಹಿಡಿದು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕದವರೆಗೆ ಹಲವು ಬದಲಾವಣೆಗಳು ಆಗಲಿವೆ. ಹೀಗಾಗಿ ಜುಲೈ.1ರ ನಾಳೆಯಿಂದ ಎಲ್ಲೆಲ್ಲೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿ ಬಳಕೆಯಾಗಲಿದೆ. ಅಲ್ಲದೇ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಆ ಬಗ್ಗೆ ಮುಂದೆ ಓದಿ.
ಪಾನ್ಗೆ ಆಧಾರ್ ಕಡ್ಡಾಯ
ಹೊಸ ಪಾನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ. ಈವರೆಗೆ ಜನ್ಮದಿನಾಂಕ ದೃಢೀಕರಣಕ್ಕೆ ಜನನ ಪ್ರಮಾಣಪತ್ರ ಅಥವಾ ಜನ್ಮದಿನಾಂಕ ನಮೂದಾಗಿರುವ ಯಾವುದೇ ಗುರುತಿನ ಚೀಟಿ ನೀಡಿದ್ದರೆ ಸಾಕಿತ್ತು . ಈಗಾಗಲೇ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಜೋಡಣೆ ಪ್ರಕ್ರಿಯೆ ಮುಗಿಸದಿದ್ದರೆ, ಆಧಾರ್-ಪಾನ್ ಜೋಡಣೆಗೆ ಡಿ.31ರ ಗಡುವು ನಿಗದಿಯಾಗಿದೆ.
ಆಧಾರ್ ನಂಬರ್ ಕೊಟ್ರೆ ಮಾತ್ರ ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಸಾಧ್ಯ
ಜುಲೈ 1ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಐಆರ್ಸಿಟಿಸಿ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ದೃಢೀಕರಿಸಿಕೊಂಡ ಬಳಿಕವೇ ಬಳಕೆದಾರರು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ಹಾಗೆಯೇ, ಪಿಆರ್ಎಸ್ ಕೌಂಟರ್, ಆನ್ಲೈನ್ ಅಥವಾ ಅಧಿಕೃತ ಏಜೆಂಟರ ಮೂಲಕ ಆನ್ ಲೈನ್ ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ಗೆ ಜುಲೈ 15ರಿಂದ ಒಟಿಪಿ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಆದರೆ, ರೈಲ್ವೆ ಕೌಂಟರ್ಗಳಲ್ಲಿ ಬುಕಿಂಗ್ ಮಾಡುವಾಗ ಆಧಾರ್ ಪರಿಶೀಲನೆ ಕಡ್ಡಾಯವಲ್ಲ.
ರೈಲು ಪ್ರಯಾಣ ದರ ತುಸು ಏರಿಕೆ
ಜುಲೈ 1ರಿಂದ ರೈಲ್ವೆ ಪ್ರಯಾಣ ದರ ಪ್ರತಿ ಕಿ.ಮೀಗೆ ಸಾಮಾನ್ಯ ರೈಲುಗಳ ಎರಡನೇ ಶ್ರೇಣಿ ಬೋಗಿಗಳಲ್ಲಿ ಅರ್ಧ ಪೈಸೆ, ಮೇಲ್ | ಎಕ್ಸ್ ಪ್ರೆಸ್ ರೈಲುಗಳ ಸ್ತ್ರೀಪರ್ ಬೋಗಿಗಳಿಗೆ ಒಂದು ಪೈಸೆ ಹಾಗೂ ಹವಾನಿಯಂತ್ರಿತ ಬೋಗಿಗಳಿಗೆ ಎರಡು ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ.
ಜಿಎಸ್ಟಿ ನಿಯಮ ಬದಲು
ಜುಲೈನಿಂದ ಜಿಎಸ್ ಟಿ ಮಾಸಿಕ ರಿಟರ್ನ್ ಅನ್ನು ನಮೂನೆ 3ಬಿ ಮೂಲಕ ಸಲ್ಲಿಸಿದರೆ, ಅದನ್ನು ಪರಿಷ್ಕರಿಸುವಂತಿಲ್ಲ, ತೆರಿಗೆ ಪಾವತಿದಾರರು ಬಾಕಿಯನ್ನು ಮೂರು ವರ್ಷ ಉಳಿಸಿಕೊಂಡಿದ್ದರೆ ಅವರು ಮಾಸಿಕ ಇಲ್ಲವೇ ವಾರ್ಷಿಕ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸಲು ಅವಕಾಶವಿರುವುದಿಲ್ಲ.
ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೊಸ ಶುಲ್ಕ
ಎಚ್ಡಿಎಫ್ಸಿ ಸೇರಿದಂತೆ ಪ್ರಮುಖ ಕ್ರೆಡಿಟ್ ಕಾರ್ಡ್ಗಳು ಸೇವಾ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಿವೆ. ಕೆಲವು ಸೇವೆಗಳಿಗೆ ಶೇ.1 ರಷ್ಟು ಆದರೆ ಗರಿಷ್ಠತಿಂಗಳಿಗೆ 4,999 ರೂ. ಶುಲ್ಕ ವಿಧಿಸಲಾಗುತ್ತದೆ. ರಿವಾರ್ಡ್ ಪಾಯಿಂಟ್ ಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.
ವಾಟ್ಸ್ಆ್ಯಪ್ ನಿಯಮ ಬದಲು
ವಾಟ್ಸ್ಆ್ಯಪ್ನಲ್ಲಿ ವಾಣಿಜ್ಯ ಉದ್ದೇಶದ ಸಂದೇಶಗಳನ್ನು ಕಳುಹಿಸಲು ಜುಲೈ 1 ರಿಂದ ಶುಲ್ಕ ವಿಧಿಸುವುದಾಗಿ ಮೆಟಾ ಘೋಷಿಸಿದೆ. ಸಾಮಾನ್ಯ ಚಾಟ್ಗಳಿಗೆ ಶುಲ್ಕ ಇರುವುದಿಲ್ಲ.
BREAKING: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ನಿಧನ
BREAKING: ತೆಲಂಗಾಣ ಕೈಗಾರಿಕಾ ಘಟಕದಲ್ಲಿ ಭೀಕರ ಸ್ಫೋಟ: 10 ಮಂದಿ ಸಾವು, ಹಲವರಿಗೆ ಗಾಯ