ಮಂಡ್ಯ: ಕುಟುಂಬದಲ್ಲಿನ ಆಸ್ತಿ ಕಲಹ ಸವತಿ ಮಗಳ ಮೇಲೆ ಮಲತಾಯಿ ಅಟ್ಯಾಕ್ ಮಾಡಿರುವಂತ ಘಟನೆ ಮಂಡ್ಯ ಮದ್ದೂರಲ್ಲಿ ನಡೆದಿದೆ. ಇದೀಗ ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ ನಡೆಸಿರುವಂತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ. ಮಲ್ಲಿಗೆರೆ ಗ್ರಾಮದಲ್ಲಿ ಸವತಿ ಮಗಳನ್ನು ಜಮೀನನಲ್ಲಿ ಕೆಡವಿ ಎದೆ ಮೇಲೆ ಕುಳಿತು ಹಲ್ಲೆ ನಡೆಸಿ ಮಲತಾಯಿ ಬೆದರಿಕೆ ಹಾಕಿರುವಂತ ಘಟನೆ ನಡೆದಿದೆ.
ಆಸ್ತಿ ಕಲಹಕ್ಕಾಗಿ ಮಲ ಮಗಳ ಮೇಲೆ ಮಲತಾಯಿ ಭಾಗ್ಯ ದೌರ್ಜನ್ಯ, ದಬ್ಬಾಳಿಕೆ ನೆಡೆಸಿದ್ದಾರೆ. ಜಮೀನಿನ ಜಾಗದಲ್ಲಿ ವಿಚಾರದಲ್ಲಿ ಮಲಮಗಳ ರೋಜಾ ಮೇಲೆ ಜೊತೆ ಕದನಕ್ಕಿಳಿದ ಮಲತಾಯಿ. ಮೊದಲನೆ ಹೆಂಡತಿ ಮಗಳಾದ ರೋಜಾಳನ್ನು ಕೆಸರಿನ ಜಮೀನಲ್ಲಿ ಕೆಳಕ್ಕೆ ಕೆಡಿವಿ ಮಲತಾಯಿ ಭಾಗ್ಯ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ವೇಳೆ ಮಗಳು ಕಿರುಚಾಡಿದರು ಮಲತಾಯಿಯ ಮನಸ್ಸು ಮಾತ್ರ ಕರಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜಡೆ ಜಗಳದ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ಹಲ್ಲೆಗೊಳದಾ ಮಗಳಿಂದ ಮಲತಾಯಿ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್