Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಭಗವಾನ್ ಬುದ್ಧನ ಜೀವನವು ವಿಶ್ವ ಸಮುದಾಯವನ್ನು ಶಾಂತಿಯತ್ತ ಪ್ರೇರೇಪಿಸುತ್ತದೆ’ : ಬುದ್ಧ ಪೂರ್ಣಿಮೆಗೆ ಶುಭ ಕೋರಿದ ಪ್ರಧಾನಿ ಮೋದಿ | PM Modi

12/05/2025 10:31 AM

BREAKING : ಭಾರತೀಯ ಪೈಲಟ್ ಬಂಧನದಲ್ಲಿಲ್ಲ, ನಮ್ಮ ಒಂದು ಜೆಟ್ ಅನ್ನು ಹೊಡೆದುರುಳಿಸಲಾಗಿದೆ : ಪಾಕಿಸ್ತಾನ ಸೇನೆ ಸ್ಪಷ್ಟನೆ

12/05/2025 10:24 AM

BREAKING : ಧಾರ್ಮಿಕ ಕಾರಣಗಳಿಗಾಗಿ ಅಫ್ಘಾನಿಸ್ತಾನದಲ್ಲಿ `ಚೆಸ್’ ನಿಷೇಧಿಸಿದ ತಾಲಿಬಾನ್ | Chess ban

12/05/2025 10:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಶಾಸಕ ಮುನಿರತ್ನ ರಾಜೀನಾಮೆಗೆ ಒತ್ತಡ, ಮರು ಚುನಾವಣೆಗೆ ಷಡ್ಯಂತ್ರ: ಬಿ.ವೈ ವಿಜಯೇಂದ್ರ ಸ್ಟೋಟಕ ಹೇಳಿಕೆ | BY Vijayendra
KARNATAKA

BIG NEWS: ಶಾಸಕ ಮುನಿರತ್ನ ರಾಜೀನಾಮೆಗೆ ಒತ್ತಡ, ಮರು ಚುನಾವಣೆಗೆ ಷಡ್ಯಂತ್ರ: ಬಿ.ವೈ ವಿಜಯೇಂದ್ರ ಸ್ಟೋಟಕ ಹೇಳಿಕೆ | BY Vijayendra

By kannadanewsnow0925/12/2024 9:29 PM

ಬೆಂಗಳೂರು: ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು, ಹಲ್ಲೆ ಮಾಡುವ ಪ್ರಯತ್ನ ನಡೆದಿದ್ದು ಇದು ಸಣ್ಣ ಘಟನೆಯಲ್ಲ; ಅವರ ಮೇಲೆ ಒತ್ತಡ ಹಾಕಿ ಅವರು ರಾಜೀನಾಮೆ ಕೊಡಬೇಕು. ಮರುಚುನಾವಣೆ ಆಗಿ ಬೇಕಾದವರನ್ನು ಗೆಲ್ಲಿಸಬೇಕೆಂಬ ಷಡ್ಯಂತ್ರ ಇದರ ಹಿಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಶಾಸಕ ಹರೀಶ್ ಪೂಂಜ ಅವರ ಮೇಲೆ ಸಹ ಬೋಗಸ್ ಕೇಸನ್ನು ಹಾಕಿ ಅವರನ್ನು ಬಂಧಿಸಲು ಯತ್ನಿಸಿದ್ದರು. ಮೊನ್ನೆ ಸಿ.ಟಿ.ರವಿ ಅವರ ಪ್ರಕರಣದಲ್ಲಿ ಸದನದ ಹೊರಗಡೆ ಜನಪ್ರತಿನಿಧಿಯನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ; ಪೊಲೀಸರ ದುರ್ಬಳಕೆಯನ್ನು ನೋಡಿದ್ದೀರಿ. ಇದ್ಯಾವುದು ಕೂಡ ಸರಕಾರದ ಕುಮ್ಮಕ್ಕಿನಿಂದ ಆಗುತ್ತದೆಯೇ ವಿನಾ, ಸರಕಾರ ಅಥವಾ ಸಚಿವರ ಹಸ್ತಕ್ಷೇಪ ಇಲ್ಲದೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮುನಿರತ್ನ ಅವರ ಜೊತೆಗಿರುವ ಕಾರ್ಯಕರ್ತರು, ಮುಖಂಡರು ನೊಂದುಕೊಂಡಿದ್ದಾರೆ. ಅವರ ಮೇಲೂ ಸುಳ್ಳು ಕೇಸು ದಾಖಲಿಸಲಾಗುತ್ತಿದೆ. ಹಳೆ ಕೇಸುಗಳನ್ನು ರೀ ಓಪನ್ ಮಾಡುತ್ತಿದ್ದಾರೆ. ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.

ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಬಿಯರ್ ಬಾಟಲ್ ಒಡೆದು ಹಾಕಿ ಮನೆಯಲ್ಲಿರುವ ಹೆಣ್ಮಕ್ಕಳಿಗೆ ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಪುಡಾರಿಗಳು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ. ಶಾಸಕರ ಮೇಲೆ ಒತ್ತಡ, ಬೆದರಿಕೆ ತಂತ್ರ ಸಣ್ಣ ಘಟನೆಯೇನಲ್ಲ ಎಂದು ವಿಶ್ಲೇಷಿಸಿದರು. ಒತ್ತಡ ಹಾಕುವ ಕಾಂಗ್ರೆಸ್ ಪುಡಾರಿಗಳು, ಮುಖಂಡರು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಮುನಿರತ್ನ ಅವರ ವಿರುದ್ಧ ಇರುವ ಆರೋಪಗಳ ತನಿಖೆ ಆಗುತ್ತಿದೆ; ತನಿಖೆ ಆಗಲಿ. ಅದರ ಬಗ್ಗೆ ನಮ್ಮ ವಿರೋಧವಿಲ್ಲ; ಸತ್ಯ ಏನಿದೆಯೋ ಹೊರಗಡೆ ಬರುತ್ತದೆ. ಆದರೆ, ಅದನ್ನು ನೆಪವೊಡ್ಡಿ ಈ ರೀತಿ ದೌರ್ಜನ್ಯ ಮಾಡುವುದು ಖಂಡಿತವಾಗಿ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಜನಪ್ರತಿನಿಧಿಗಳನ್ನು ಬೆದರಿಸುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಮುನಿರತ್ನ ಅವರ ಗನ್‍ಮ್ಯಾನ್ ಅನ್ನೂ ಹಿಂಪಡೆದಿದ್ದಾರೆ. ಅವರು ಹಾಗಿದ್ದರೆ ಶಾಸಕರಲ್ಲವೇ; ಅವರು ಜನಪ್ರತಿನಿಧಿಯಲ್ಲವೇ ಎಂದು ಕೇಳಿದರು. ಅವರ ಗನ್‍ಮ್ಯಾನ್ ಅನ್ನು ಹಿಂದಕ್ಕೆ ಪಡೆದಿದ್ದೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಮೂವರು ‘IAS ಅಧಿಕಾರಿ’ಗಳ ವರ್ಗಾವಣೆ | IAS Officer Transfer

‘ನಟ ಶಿವರಾಜ್ ಕುಮಾರ್’ ಆರೋಗ್ಯದ ಬಗ್ಗೆ ಈ ಬಿಗ್ ಅಪ್ ಡೇಟ್ ಕೊಟ್ಟ ‘ಪುತ್ರಿ ನಿವೇದಿತಾ’ | Actor Shivarajkumar Health Update

Share. Facebook Twitter LinkedIn WhatsApp Email

Related Posts

GOOD NEWS : ಕಣ್ಣಿನ ಸಮಸ್ಯೆವುಳ್ಳ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಣ್ಣಿನ ಚಿಕಿತ್ಸೆ, ಕನ್ನಡಕ, ಲೆನ್ಸ್ ವಿತರಣೆಗೆ ರಾಜ್ಯಾದ್ಯಂತ ‘ಆಶಾಕಿರಣ’ ಯೋಜನೆ ವಿಸ್ತರಣೆ.!

12/05/2025 9:32 AM1 Min Read

BIG NEWS : ಗ್ಯಾರಂಟಿಗಳ ಮೂಲಕ 52,000 ಕೋಟಿ ರೂ. ಜನರಿಗೆ ತಲುಪಿಸುತ್ತಿದ್ದೇವೆ : DCM ಡಿ.ಕೆ. ಶಿವಕುಮಾರ್

12/05/2025 9:26 AM1 Min Read

BREAKING : ಬೆಂಗಳೂರಿನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿರುವ ವ್ಯಕ್ತಿ.!

12/05/2025 9:25 AM1 Min Read
Recent News

BREAKING : ‘ಭಗವಾನ್ ಬುದ್ಧನ ಜೀವನವು ವಿಶ್ವ ಸಮುದಾಯವನ್ನು ಶಾಂತಿಯತ್ತ ಪ್ರೇರೇಪಿಸುತ್ತದೆ’ : ಬುದ್ಧ ಪೂರ್ಣಿಮೆಗೆ ಶುಭ ಕೋರಿದ ಪ್ರಧಾನಿ ಮೋದಿ | PM Modi

12/05/2025 10:31 AM

BREAKING : ಭಾರತೀಯ ಪೈಲಟ್ ಬಂಧನದಲ್ಲಿಲ್ಲ, ನಮ್ಮ ಒಂದು ಜೆಟ್ ಅನ್ನು ಹೊಡೆದುರುಳಿಸಲಾಗಿದೆ : ಪಾಕಿಸ್ತಾನ ಸೇನೆ ಸ್ಪಷ್ಟನೆ

12/05/2025 10:24 AM

BREAKING : ಧಾರ್ಮಿಕ ಕಾರಣಗಳಿಗಾಗಿ ಅಫ್ಘಾನಿಸ್ತಾನದಲ್ಲಿ `ಚೆಸ್’ ನಿಷೇಧಿಸಿದ ತಾಲಿಬಾನ್ | Chess ban

12/05/2025 10:20 AM

ವಿದ್ಯಾರ್ಥಿಗಳೇ ಗಮನಿಸಿ : `CBSE’ 10, 12 ನೇ ತರಗತಿ ಫಲಿತಾಂಶದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

12/05/2025 10:15 AM
State News
KARNATAKA

GOOD NEWS : ಕಣ್ಣಿನ ಸಮಸ್ಯೆವುಳ್ಳ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಣ್ಣಿನ ಚಿಕಿತ್ಸೆ, ಕನ್ನಡಕ, ಲೆನ್ಸ್ ವಿತರಣೆಗೆ ರಾಜ್ಯಾದ್ಯಂತ ‘ಆಶಾಕಿರಣ’ ಯೋಜನೆ ವಿಸ್ತರಣೆ.!

By kannadanewsnow5712/05/2025 9:32 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂಧ ರಾಜ್ಯಾಧ್ಯಂತ…

BIG NEWS : ಗ್ಯಾರಂಟಿಗಳ ಮೂಲಕ 52,000 ಕೋಟಿ ರೂ. ಜನರಿಗೆ ತಲುಪಿಸುತ್ತಿದ್ದೇವೆ : DCM ಡಿ.ಕೆ. ಶಿವಕುಮಾರ್

12/05/2025 9:26 AM

BREAKING : ಬೆಂಗಳೂರಿನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿರುವ ವ್ಯಕ್ತಿ.!

12/05/2025 9:25 AM

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಎಚ್ಚರಿಕೆ ಸಂದೇಶ| WATCH VIDEO

12/05/2025 8:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.