Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service

26/06/2025 3:32 PM

BREAKING : ‘ಮೈಕ್ರೋಸಾಫ್ಟ್’ 4ನೇ ಸುತ್ತಿನ ಉದ್ಯೋಗ ಕಡಿತ ಘೋಷಣೆ ; ಸಾವಿರಾರು ನೌಕಕರು ವಜಾ |Microsoft Layoffs

26/06/2025 3:22 PM

Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ

26/06/2025 3:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಶಾಸಕ ಮುನಿರತ್ನ ರಾಜೀನಾಮೆಗೆ ಒತ್ತಡ, ಮರು ಚುನಾವಣೆಗೆ ಷಡ್ಯಂತ್ರ: ಬಿ.ವೈ ವಿಜಯೇಂದ್ರ ಸ್ಟೋಟಕ ಹೇಳಿಕೆ | BY Vijayendra
KARNATAKA

BIG NEWS: ಶಾಸಕ ಮುನಿರತ್ನ ರಾಜೀನಾಮೆಗೆ ಒತ್ತಡ, ಮರು ಚುನಾವಣೆಗೆ ಷಡ್ಯಂತ್ರ: ಬಿ.ವೈ ವಿಜಯೇಂದ್ರ ಸ್ಟೋಟಕ ಹೇಳಿಕೆ | BY Vijayendra

By kannadanewsnow0925/12/2024 9:29 PM

ಬೆಂಗಳೂರು: ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು, ಹಲ್ಲೆ ಮಾಡುವ ಪ್ರಯತ್ನ ನಡೆದಿದ್ದು ಇದು ಸಣ್ಣ ಘಟನೆಯಲ್ಲ; ಅವರ ಮೇಲೆ ಒತ್ತಡ ಹಾಕಿ ಅವರು ರಾಜೀನಾಮೆ ಕೊಡಬೇಕು. ಮರುಚುನಾವಣೆ ಆಗಿ ಬೇಕಾದವರನ್ನು ಗೆಲ್ಲಿಸಬೇಕೆಂಬ ಷಡ್ಯಂತ್ರ ಇದರ ಹಿಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಶಾಸಕ ಹರೀಶ್ ಪೂಂಜ ಅವರ ಮೇಲೆ ಸಹ ಬೋಗಸ್ ಕೇಸನ್ನು ಹಾಕಿ ಅವರನ್ನು ಬಂಧಿಸಲು ಯತ್ನಿಸಿದ್ದರು. ಮೊನ್ನೆ ಸಿ.ಟಿ.ರವಿ ಅವರ ಪ್ರಕರಣದಲ್ಲಿ ಸದನದ ಹೊರಗಡೆ ಜನಪ್ರತಿನಿಧಿಯನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ; ಪೊಲೀಸರ ದುರ್ಬಳಕೆಯನ್ನು ನೋಡಿದ್ದೀರಿ. ಇದ್ಯಾವುದು ಕೂಡ ಸರಕಾರದ ಕುಮ್ಮಕ್ಕಿನಿಂದ ಆಗುತ್ತದೆಯೇ ವಿನಾ, ಸರಕಾರ ಅಥವಾ ಸಚಿವರ ಹಸ್ತಕ್ಷೇಪ ಇಲ್ಲದೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮುನಿರತ್ನ ಅವರ ಜೊತೆಗಿರುವ ಕಾರ್ಯಕರ್ತರು, ಮುಖಂಡರು ನೊಂದುಕೊಂಡಿದ್ದಾರೆ. ಅವರ ಮೇಲೂ ಸುಳ್ಳು ಕೇಸು ದಾಖಲಿಸಲಾಗುತ್ತಿದೆ. ಹಳೆ ಕೇಸುಗಳನ್ನು ರೀ ಓಪನ್ ಮಾಡುತ್ತಿದ್ದಾರೆ. ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.

ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಬಿಯರ್ ಬಾಟಲ್ ಒಡೆದು ಹಾಕಿ ಮನೆಯಲ್ಲಿರುವ ಹೆಣ್ಮಕ್ಕಳಿಗೆ ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಪುಡಾರಿಗಳು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ. ಶಾಸಕರ ಮೇಲೆ ಒತ್ತಡ, ಬೆದರಿಕೆ ತಂತ್ರ ಸಣ್ಣ ಘಟನೆಯೇನಲ್ಲ ಎಂದು ವಿಶ್ಲೇಷಿಸಿದರು. ಒತ್ತಡ ಹಾಕುವ ಕಾಂಗ್ರೆಸ್ ಪುಡಾರಿಗಳು, ಮುಖಂಡರು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಮುನಿರತ್ನ ಅವರ ವಿರುದ್ಧ ಇರುವ ಆರೋಪಗಳ ತನಿಖೆ ಆಗುತ್ತಿದೆ; ತನಿಖೆ ಆಗಲಿ. ಅದರ ಬಗ್ಗೆ ನಮ್ಮ ವಿರೋಧವಿಲ್ಲ; ಸತ್ಯ ಏನಿದೆಯೋ ಹೊರಗಡೆ ಬರುತ್ತದೆ. ಆದರೆ, ಅದನ್ನು ನೆಪವೊಡ್ಡಿ ಈ ರೀತಿ ದೌರ್ಜನ್ಯ ಮಾಡುವುದು ಖಂಡಿತವಾಗಿ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಜನಪ್ರತಿನಿಧಿಗಳನ್ನು ಬೆದರಿಸುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಮುನಿರತ್ನ ಅವರ ಗನ್‍ಮ್ಯಾನ್ ಅನ್ನೂ ಹಿಂಪಡೆದಿದ್ದಾರೆ. ಅವರು ಹಾಗಿದ್ದರೆ ಶಾಸಕರಲ್ಲವೇ; ಅವರು ಜನಪ್ರತಿನಿಧಿಯಲ್ಲವೇ ಎಂದು ಕೇಳಿದರು. ಅವರ ಗನ್‍ಮ್ಯಾನ್ ಅನ್ನು ಹಿಂದಕ್ಕೆ ಪಡೆದಿದ್ದೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಮೂವರು ‘IAS ಅಧಿಕಾರಿ’ಗಳ ವರ್ಗಾವಣೆ | IAS Officer Transfer

‘ನಟ ಶಿವರಾಜ್ ಕುಮಾರ್’ ಆರೋಗ್ಯದ ಬಗ್ಗೆ ಈ ಬಿಗ್ ಅಪ್ ಡೇಟ್ ಕೊಟ್ಟ ‘ಪುತ್ರಿ ನಿವೇದಿತಾ’ | Actor Shivarajkumar Health Update

Share. Facebook Twitter LinkedIn WhatsApp Email

Related Posts

ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service

26/06/2025 3:32 PM1 Min Read

Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ

26/06/2025 3:21 PM2 Mins Read

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

26/06/2025 3:18 PM3 Mins Read
Recent News

ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service

26/06/2025 3:32 PM

BREAKING : ‘ಮೈಕ್ರೋಸಾಫ್ಟ್’ 4ನೇ ಸುತ್ತಿನ ಉದ್ಯೋಗ ಕಡಿತ ಘೋಷಣೆ ; ಸಾವಿರಾರು ನೌಕಕರು ವಜಾ |Microsoft Layoffs

26/06/2025 3:22 PM

Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ

26/06/2025 3:21 PM

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

26/06/2025 3:18 PM
State News
KARNATAKA

ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service

By kannadanewsnow0926/06/2025 3:32 PM KARNATAKA 1 Min Read

ಬೆಂಗಳೂರು: ನಗರದ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಿಎಂಟಿಸಿಯಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮೂಲಕ ಜನತೆಗೆ…

Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ

26/06/2025 3:21 PM

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

26/06/2025 3:18 PM

BIG NEWS : ಹುಬ್ಬಳ್ಳಿಯಲ್ಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಇಬ್ಬರು ವ್ಯಕ್ತಿಗಳ ನರಳಾಟ : ಬದುಕಿದ್ದೆ ಪವಾಡ!

26/06/2025 3:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.