Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ, ರಿಯಲ್ ಎಸ್ಟೇಟ್ ನಡೆಸಲು ಅವಕಾಶ ಇಲ್ಲ : ಹೈಕೋರ್ಟ್ ತೀರ್ಪು

21/11/2025 10:06 AM

miss Universe 2025 : 74 ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೆಕ್ಸಿಕೊದ ಫಾತಿಮಾ ಬಾಷ್

21/11/2025 9:59 AM

BIG NEWS : ಅಕ್ರಮ ಚಿನ್ನ ಸಾಗಾಣಿಕೆ ಕೇಸ್ : ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ಕೋರ್ಟಿಗೆ ಚಾರ್ಜ್​​ಶೀಟ್ ಸಲ್ಲಿಸಿದ ‘DRI’

21/11/2025 9:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಜ್ವಲ್ ತಾತ ದೇವೇಗೌಡರಿಗೆ ತಕ್ಕ ಮೊಮ್ಮಗ ಆಗಲಿಲ್ಲ, ತಂದೆಗೆ ತಕ್ಕ ಮಗ ಆದ: ಶಾಸಕ ಹೆಚ್.ಸಿ ಬಾಲಕೃಷ್ಣ
KARNATAKA

ಪ್ರಜ್ವಲ್ ತಾತ ದೇವೇಗೌಡರಿಗೆ ತಕ್ಕ ಮೊಮ್ಮಗ ಆಗಲಿಲ್ಲ, ತಂದೆಗೆ ತಕ್ಕ ಮಗ ಆದ: ಶಾಸಕ ಹೆಚ್.ಸಿ ಬಾಲಕೃಷ್ಣ

By kannadanewsnow0922/05/2024 3:03 PM

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ, ವಿದೇಶಕ್ಕೆ ಪರಾರಿಯಾಗಿದ್ದಾರೆ. ಪ್ರಜ್ವಲ್ ರೇವಣ್ಣ ತಾತ ದೇವೇಗೌಡರಿಗೆ ತಕ್ಕ ಮಗ ಆಗಲಿಲ್ಲ. ತಂದೆಗೆ ತಕ್ಕ ಮಗ ಆಗಿದ್ದಾನೆ. ಎಷ್ಟೇ ಆದ್ರೂ ನೂಲಿನಂತೆ ಸೀರೆ ಅಲ್ವ ಅಂತ ಶಾಸಕ ಹೆಚ್.ಸಿ ಬಾಲಕೃಷ್ಣ ಪ್ರಶ್ನಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ವಿಡಿಯೋ ಮಾಡು ಅಂತ ಪ್ರಜ್ವಲ್ ರೇವಣ್ಣಂಗೆ ಡಿ.ಕೆ. ಶಿವಕುಮಾರ್ ಫೋನ್ ಮಾಡಿ ಹೇಳಿದ್ರಾ..? ಇಲ್ಲ, ನಾವು ಅವನ ರೂಮಲ್ಲಿ ನಿಂತು ವಿಡಿಯೋ ಮಾಡಿದ್ವಾ? ಎಂದು ಕೇಳಿದರು.

ಪ್ರಜ್ವಲ್ ತಾತನಿಗೆ (ದೇವೇಗೌಡ) ತಕ್ಕ ಮೊಮ್ಮಗ ಆಗಲಿಲ್ಲ. ತಂದೆಗೆ ತಕ್ಕ ಮಗ ಆದ. ಎಷ್ಟೇ ಆಗಲಿ ನೂಲಿನಂತೆ ಸೀರೆಯಲ್ಲವೇ..?  ಕುಮಾರಸ್ವಾಮಿ ತಲೆ ಕೆಟ್ಟವರಂತೆ ಮಾತಾಡುತ್ತಿದ್ದಾರೆ. ಅವರು ಯಾವಾಗ ತಾನೇ ಸತ್ಯ ಮಾತಾಡಿದ್ದಾರೆ? ಒಂದೇ ಒಂದು ಉದಾಹರಣೆ ಕೊಡಿ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ವಿರುದ್ಧ ಮಾತಾಡುವುದೇ ಅವರ ಕೆಲಸ ಎಂಬುದಾಗಿ ವಾಗ್ಧಾಳಿ ನಡೆಸಿದರು.

ವಿರೋಧ ಪಕ್ಷದವರು ಏನು ಹೇಳಬೇಕೋ ಹೇಳ್ತಾ ಇದ್ದಾರೆ. ನಾವು ಏನು ಹೇಳಬೇಕೋ ಹೇಳ್ತಿದ್ದೇವೆ. ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ. ಕೆಲಸ ಮಾಡ್ತಿದ್ದಾವೆ. ಬಿಜೆಪಿಯವರು ಏನು ನಮ್ಮನ್ನ ಹೊಗಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹಾಳಾಗೋಕೆ ಕುಮಾರಸ್ವಾಮಿಯೇ ಕಾರಣ. ಪ್ರಮುಖವಾದ ಕಾರಣ ಕರ್ತರು ಅವರೇ. ಕುಮಾರಸ್ವಾಮಿ ಯಾವತ್ತೂ ಸತ್ಯ ಹೇಳಿಲ್ಲ. ಅವರು ಯಾವುತ್ತೂ ಹೇಳಿರೋದು ಸುಳ್ಳು. ಊಹೆ ಮಾಡಿಕೊಂಡು ಮಾತಾಡೋದೇ ಅವರ ಗುಣ ಎಂದರು.

ವಿಡಿಯೋ ಮಾಡು ಅಂತ ಪ್ರಜ್ವಲ್ ರೇವಣ್ಣಂಗೆ ಡಿ.ಕೆ. ಶಿವಕುಮಾರ್ ಫೋನ್ ಮಾಡಿ ಹೇಳಿದ್ರಾ..? ಇಲ್ಲ, ನಾವು ಅವನ ರೂಮಲ್ಲಿ ನಿಂತು ವಿಡಿಯೋ ಮಾಡಿದ್ವಾ?

ಪ್ರಜ್ವಲ್ ತಾತನಿಗೆ (ದೇವೇಗೌಡ) ತಕ್ಕ ಮೊಮ್ಮಗ ಆಗಲಿಲ್ಲ. ತಂದೆಗೆ ತಕ್ಕ ಮಗ ಆದ. ಎಷ್ಟೇ ಆಗಲಿ ನೂಲಿನಂತೆ ಸೀರೆಯಲ್ಲವೇ..?

ಕುಮಾರಸ್ವಾಮಿ ತಲೆ ಕೆಟ್ಟವರಂತೆ ಮಾತಾಡುತ್ತಿದ್ದಾರೆ. ಅವರು ಯಾವಾಗ… pic.twitter.com/AyE9rA8zmH

— Karnataka Congress (@INCKarnataka) May 22, 2024

ವಕೀಲ ದೇವರಾಜೇಗೌಡ ಯಾವ ರೀತಿ ಮಾತಾಡ್ತಿದ್ದಾರೆ ಅಂತ ಗೊತ್ತು. ಮೊದಲು ದೇವೇಗೌಡರ ಕುಟುಂಬದ ವಿರುದ್ಧ ಇದ್ದ. ಈಗ ಬಿಜೆಪಿಯವರು ಯಾವ ರೀತಿ ಕೀ ಕೊಡ್ತಿದ್ದಾರೋ ಆ ರೀತಿ ಕುಣಿಯುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸನ್ನು ಎಸ್ಐಟಿ ತನಿಖೆ ಆಗಲಿ. ಆಮೇಲೆ ನೋಡೋಣ. ಸಿಬಿಐ ಕೊಟ್ರೆ ನಾವು ಅದರಿಂದ ರಕ್ಷಣೆ ತಗೊಳ್ಳಬೇಕು ಅನ್ನೋ ಒತ್ತಡದಿಂದ ಹೀಗೆ ಮಾಡ್ತಿದ್ದಾರೆ ಎಂದು ಹೇಳಿದರು.

ನಾವು ಯಾರಾದ್ರೂ ಪ್ರಜ್ವಲ್ ಗೆ ಸಿಡಿ ಮಾಡು ಅಂತ ಡಿಕೆ ಶಿವಕುಮಾರ್ ಹೇಳಿದ್ರಾ.? ಆ ರೂಮಲ್ಲಿ ಕೂತು ವೀಡಿಯೋ ಮಾಡಿದ್ರಾ.? ಆರೋಪ ಮಾಡೋದೋ ಡಿಕೆಶಿ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಕೆಲಸ. ನಿದ್ದೆ ಗಣ್ಣಲ್ಲೂ ಡಿಕೆ ಶಿವಕುಮಾರ್ ಅಂತಿದ್ದಾರೆ ಎಂದರು.

ಒಕ್ಕಲಿಗ ನಾಯಕತ್ವ ಜೆಡಿಎಸ್ ನಲ್ಲಿ ಇತ್ತು. ಆದ್ರೆ ಅದು ಈಗ ಛಿದ್ರ ಛಿದ್ರವಾಗಿದೆ. ಹೆಚ್ಚು ಕಾಂಗ್ರೆಸ್ ನಲ್ಲಿ ಒಕ್ಕಲಿಗರ ನಾಯಕತ್ವವಿದೆ. ಜೆಡಿಎಸ್ ತಗೊಂಡೋಗಿ ಮೋದಿ ಪಾದಕ್ಕೆ ಒಕ್ಕಲಿಗ ನಾಯಕತ್ವ ಅಡ ಇಟ್ಟಿದ್ದಾರೆ. ಬಿಜೆಪಿಯಲ್ಲಿ ಇವರ ಪುರಾಣ ನಡೆಯೋದಿಲ್ಲ ಎಂದರು.

ಕರ್ನಾಟಕದಲ್ಲಿ ‘ಜೆಡಿಎಸ್ ಪಕ್ಷ’ದ ಕತೆ ಮುಗೀತು: ಕಾಂಗ್ರೆಸ್

BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು

Share. Facebook Twitter LinkedIn WhatsApp Email

Related Posts

BIG NEWS : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ, ರಿಯಲ್ ಎಸ್ಟೇಟ್ ನಡೆಸಲು ಅವಕಾಶ ಇಲ್ಲ : ಹೈಕೋರ್ಟ್ ತೀರ್ಪು

21/11/2025 10:06 AM1 Min Read

BIG NEWS : ಅಕ್ರಮ ಚಿನ್ನ ಸಾಗಾಣಿಕೆ ಕೇಸ್ : ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ಕೋರ್ಟಿಗೆ ಚಾರ್ಜ್​​ಶೀಟ್ ಸಲ್ಲಿಸಿದ ‘DRI’

21/11/2025 9:53 AM1 Min Read

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM1 Min Read
Recent News

BIG NEWS : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ, ರಿಯಲ್ ಎಸ್ಟೇಟ್ ನಡೆಸಲು ಅವಕಾಶ ಇಲ್ಲ : ಹೈಕೋರ್ಟ್ ತೀರ್ಪು

21/11/2025 10:06 AM

miss Universe 2025 : 74 ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೆಕ್ಸಿಕೊದ ಫಾತಿಮಾ ಬಾಷ್

21/11/2025 9:59 AM

BIG NEWS : ಅಕ್ರಮ ಚಿನ್ನ ಸಾಗಾಣಿಕೆ ಕೇಸ್ : ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ಕೋರ್ಟಿಗೆ ಚಾರ್ಜ್​​ಶೀಟ್ ಸಲ್ಲಿಸಿದ ‘DRI’

21/11/2025 9:53 AM

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM
State News
KARNATAKA

BIG NEWS : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ, ರಿಯಲ್ ಎಸ್ಟೇಟ್ ನಡೆಸಲು ಅವಕಾಶ ಇಲ್ಲ : ಹೈಕೋರ್ಟ್ ತೀರ್ಪು

By kannadanewsnow0521/11/2025 10:06 AM KARNATAKA 1 Min Read

ಬೆಂಗಳೂರು : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು…

BIG NEWS : ಅಕ್ರಮ ಚಿನ್ನ ಸಾಗಾಣಿಕೆ ಕೇಸ್ : ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ಕೋರ್ಟಿಗೆ ಚಾರ್ಜ್​​ಶೀಟ್ ಸಲ್ಲಿಸಿದ ‘DRI’

21/11/2025 9:53 AM

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM

ALERT : ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

21/11/2025 9:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.