Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹೊಸ ಷರತ್ತುಗಳೊಂದಿಗೆ `ನೊವಾವ್ಯಾಕ್ಸ್ ಕೋವಿಡ್ ಲಸಿಕೆ’ಗೆ FDA ಅನುಮೋದನೆ | Novavax Covid vaccine

18/05/2025 10:50 AM

BREAKING : ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು : ಕೊಲೆ ಶಂಕೆ.!

18/05/2025 10:44 AM

Shocking : ಸಹ ಪೈಲಟ್ ಗೆ ಮೂರ್ಚೆ : ಮಾನವ ನಿಯಂತ್ರಣವಿಲ್ಲದೆ 10 ನಿಮಿಷಗಳ ಕಾಲ ಹಾರಾಟ ನಡೆಸಿದ ವಿಮಾನ

18/05/2025 10:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಪಿಪಿಇ ಕಿಟ್ ಹಗರಣ: ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಆರ್ಥಿಕ ಸಲಹೆಗಾರ ಸಸ್ಪೆಂಡ್
KARNATAKA

BREAKING: ಪಿಪಿಇ ಕಿಟ್ ಹಗರಣ: ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಆರ್ಥಿಕ ಸಲಹೆಗಾರ ಸಸ್ಪೆಂಡ್

By kannadanewsnow0907/10/2024 6:08 PM

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ಆಗಿರುವಂತ ಅಕ್ರಮಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿಂದಿನ ಆರ್ಥಿಕ ಸಲಹೆಗಾರ ಹಾಗೂ ಪ್ರಸ್ತುತ ಕಿದ್ವಾಯಿ ಸ್ಮರಕ ಗ್ರಂಥಿ ಸಂಸ್ಥೆಯ ಆರ್ಥಿಕ ಸಲಹೆಗಾರ ರಘು ಜಿ.ಪಿ ಎಂಬುವರನ್ನು ರಾಜ್ಯ ಸರ್ಕಾರ ಅಮಾತನಗೊಳಿಸಿ ಆದೇಶಿಸಿದೆ.

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಸರ್ಕಾರದ ಅನುಮೋದನ ಇಲ್ಲದ ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳನ್ನು ಖರೀದಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಕುರಿತಂತೆ ತನಿಖೆ ನಡೆಸಲು ಕುರಿತಂತೆ ರಚಿಸಲಾದ ತನಿಖಾ ಸಮಿತಿಯು ನೀಡಿರುವ ವರದಿಯನ್ವಯ ಸದರಿ ಅವಧಿಯಲ್ಲಿ ಅಥಿಕ ಸಲಹೆಗಾರರು (ಜಂಟಿ ನಿಯಂತ್ರಕರು), ವೈದ್ಯಕೀಯ ಶಿಕ್ಷಣ ಇಲಾಖೆ, ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ರಘು ಜಿ.ಪಿ., ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 13ರಡಿ ಜಂಟಿ ಇಲಾಖಾ ವಿಚಾರಣೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ. ಆದುದರಿಂದ, ಇದೇ ನಿಯಮಾವಳಿಯ ನಿಯಮ 15ರಡಿ ಶ್ರೀ ರಘು ಜಿ.ಪಿ., ಆರ್ಥಿಕ ಸಲಹೆಗಾರರು (ಜಂಟಿ ನಿಯಂತ್ರಕರು), ವಿರುದ್ಧ ಜಂಟಿ ಇಲಾಖಾ ವಿಚಾರಣೆ ಕೈಗೊಳ್ಳಲು, ಅನುಮತಿ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ, ಸರ್ಕಾರದ ಆಡಳಿತಾತ್ಮಕ ಅನುಮೋದನ ಇಲ್ಲದ ಸಾಮಗ್ರಿಗಳ ಖರೀದಿ ಮತ್ತು ಕೆಲವು ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ಕುರಿತಂತ ತನಿಖೆ ನಡೆಸಲು ನೇಮಿಸಲಾದ ಸಮಿತಿಯು ಕೋವಿಡ್-19 ಮೊದಲನೇ ಅಲೆ ಮತ್ತು ಎರಡನೇ ಅಲೆಗೆ ಸಂಬಂಧಪಟ್ಟ ಕಡತಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ದಿನಾಂಕ: 27.12.2023ರಂದು ನೀಡಿದ ತನಿಖಾ ವರದಿಯಲ್ಲಿ ಪಿಪಿಇ ಕಿಟ್‌ ಹಾಗೂ ಇತರ ಸಾಮಾತ್ರಿಗಳನ್ನು ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ KTPP ಕಾಯ್ದೆಯ ಉಲ್ಲಂಘನೆ, ಕರ್ತವ್ಯಲೋಪ ಹಾಗೂ ಕಾರ್ಯವಿಧಾನಗಳನ್ನು ಪಾಲಿಸದೆ ಇರುವುದು ಮೋಲ್ನೋಟಕ್ಕೆ ಕಂಡುಬಂದಿದೆ. ಈ ಉಲ್ಲಂಘನೆಗೆ ಕಾರಣರಾದ ಅಂದಿನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆರ್ಥಿಕ ಸಲಹೆಗಾರರು ಹಾಗೂ ಆರೋಗ್ಯ ಸಲಕರಣಾಧಿಕಾರಿರವರ ವಿರುದ್ಧ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬಹುದಾಗಿರುತ್ತದೆ ಎಂದು ಅಭಿಪ್ರಾಯ ನೀಡಿರುತ್ತದೆ ಎಂದು ಹೇಳಿದ್ದಾರೆ.

ತನಿಖಾ ಸಮಿತಿಯ ತನಿಖಾ ವರದಿ ದಿನಾಂಕ: 27.12.2023 ನ್ನು ಪರಿಶೀಲಿಸಲಾಗಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಮತ್ತು ಇತರ ಸಾಮಾಗ್ರಿಗಳನ್ನು ಖರೀದಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖಾ ವರದಿಯಿಂದ ಸ್ಪಷ್ಟವಾಗುತ್ತದೆ. ಶ್ರೀ ಜಿ.ಪಿ. ರಘು, ಜಂಟಿ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪ್ರಸ್ತುತ ಆರ್ಥಿಕ ಸಲಹೆಗಾರರು, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬೆಂಗಳೂರು, ಇವರು ಈ ಪ್ರಕರಣ ನಡೆದ ಅವಧಿಯನ್ನು ಒಳಗೊಂಡಂತೆ ದಿನಾಂಕ: 03.08.2021ರವರೆಗೆ ಆರ್ಥಿಕ ಸಲಹೆಗಾರರು (ಜಂಟಿ ನಿಯಂತ್ರಕರು), ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಕರ್ತವ್ಯನಿರ್ವಹಿಸಿದ್ದು ಅಕ್ರಮವೆಸಗಿರುವುದು ತನಿಖಾ ವರದಿ ಹಾಗೂ ದಾಖಲಾತಿಗಳಿಂದಕಂಡುಬರುತ್ತದೆ. ಆದ್ದರಿಂದ, ಇವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10(3) ನ್ನು ಓದಿಕೊಂಡಂತೆ ಇದೇ ನಿಯಮಗಳ ನಿಯಮ 10 (1) (ಡಿ) ರನ್ವಯ ಅಮಾನತ್ತಿನಲ್ಲಿರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಜಿ.ಪಿ. ರಘು, ಜಂಟಿ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪ್ರಸ್ತುತ ಆರ್ಥಿಕ ಸಲಹೆಗಾರರು, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬೆಂಗಳೂರು, ಇವರು ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಆರ್ಥಿಕ ಸಲಹೆಗಾರರು (ಜಂಟಿ ನಿಯಂತ್ರಕರು), ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳನ್ನು ಖರೀದಿಸಿರುವ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10(3) ನ್ನು ಓದಿಕೊಂಡಂತೆ ಇದೇ ನಿಯಮಗಳ ನಿಯಮ 10 (1) (ಡಿ) ರನ್ವಯ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ಆರೋಪಿತ ಅಧಿಕಾರಿಯು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 98(1)ರನ್ವಯ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಆರೋಪಿತ ಅಧಿಕಾರಿಯು ಸಕ್ಷಮ ಪ್ರಾಧಿಕಾರದ ಲಿಖಿತ ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗದಂತೆ ಸೂಚಿಸಿದ್ದಾರೆ.

ಬೆಂಗಳೂರಲ್ಲಿ ಅನಧಿಕೃತವಾಗಿ ‘ಕೊಳವೆ ಬಾವಿ’ ಕೊರೆಯುವವರೇ ಹುಷಾರ್.!: BBMPಯಿಂದ ‘FIR’ ದಾಖಲು

ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು : ಕೊಲೆ ಶಂಕೆ.!

18/05/2025 10:44 AM1 Min Read

BREAKING: ಹವಾಮಾನ ವೈಪರೀತ್ಯ : CM ಸಿದ್ದರಾಮಯ್ಯರ ಇಂದಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಪ್ರವಾಸ ರದ್ದು.!

18/05/2025 9:48 AM1 Min Read

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ `ನೈತಿಕ ಶಿಕ್ಷಣ’ ಬೋಧನೆ : ಸಚಿವ ಮಧು ಬಂಗಾರಪ್ಪ

18/05/2025 9:44 AM1 Min Read
Recent News

BIG NEWS : ಹೊಸ ಷರತ್ತುಗಳೊಂದಿಗೆ `ನೊವಾವ್ಯಾಕ್ಸ್ ಕೋವಿಡ್ ಲಸಿಕೆ’ಗೆ FDA ಅನುಮೋದನೆ | Novavax Covid vaccine

18/05/2025 10:50 AM

BREAKING : ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು : ಕೊಲೆ ಶಂಕೆ.!

18/05/2025 10:44 AM

Shocking : ಸಹ ಪೈಲಟ್ ಗೆ ಮೂರ್ಚೆ : ಮಾನವ ನಿಯಂತ್ರಣವಿಲ್ಲದೆ 10 ನಿಮಿಷಗಳ ಕಾಲ ಹಾರಾಟ ನಡೆಸಿದ ವಿಮಾನ

18/05/2025 10:42 AM

ಭಾರತ-ಪಾಕ್ ಸಂಘರ್ಷ: ಇಂದು DGMO ಮಾತುಕತೆ ಇಲ್ಲ, ಕದನ ವಿರಾಮ ಒಪ್ಪಂದಕ್ಕೆ ಮುಕ್ತಾಯ ದಿನಾಂಕವಿಲ್ಲ: ಭಾರತೀಯ ಸೇನೆ

18/05/2025 10:21 AM
State News
KARNATAKA

BREAKING : ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು : ಕೊಲೆ ಶಂಕೆ.!

By kannadanewsnow5718/05/2025 10:44 AM KARNATAKA 1 Min Read

ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಯುವತಿಯೊಬ್ಬರು ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ…

BREAKING: ಹವಾಮಾನ ವೈಪರೀತ್ಯ : CM ಸಿದ್ದರಾಮಯ್ಯರ ಇಂದಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಪ್ರವಾಸ ರದ್ದು.!

18/05/2025 9:48 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ `ನೈತಿಕ ಶಿಕ್ಷಣ’ ಬೋಧನೆ : ಸಚಿವ ಮಧು ಬಂಗಾರಪ್ಪ

18/05/2025 9:44 AM

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

18/05/2025 9:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.