ಬೆಂಗಳೂರು : ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರು, ಆ ಹೆಗ್ಗಳಿಕೆ ತಕ್ಕ ಸನ್ಮಾನ ದೊರೆತಿದೆ ಎಂದು ಪೌರ ಕಾರ್ಮಿಕರು ಸಂತಹ ಹಂಚಿಕೊಂಡರು.

ಪೌರ ಕಾರ್ಮಿಕರ ದಿನದ ಪ್ರಯುಕ್ತ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಪೌರ ಕಾರ್ಮಿಕರ ದಿನದ ನಿಮಿತ್ತ ಸಿಎಂ ಬೊಮ್ಮಾಯಿ ಕಾರ್ಮಿಕರ ಜೊತೆ ಕುಳಿತು ಉಪಹಾರ ಸೇವಿಸಿದರು, ಕಾರ್ಮಿಕರ ಜೊತೆ ಕೂತು ಸಿಎಂ ಬೊಮ್ಮಾಯಿ ಇಡ್ಲಿ, ವಡಾ. ಸಾಂಬಾರು., ಚಟ್ನಿ, ಉಪ್ಪಿಟ್ಟು, ಕೇಸರಿ ಬಾತ್ ಸವಿದರು.

ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರು   ಪೌರ ಕಾರ್ಮಿಕರು ಎಂಬ ಹೆಗ್ಗಳಿಕೆಗೆ ತಕ್ಕ ಸನ್ಮಾನ ದೊರೆತಿದೆ. ಮುಖ್ಯವಾಗಿ ಸಿಎಂ ಸಾಹೇಬರು ನಮಗೆ ನೆಮ್ಮದಿ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ಕಾರ್ಮಿಕರು ಸಂತಹ ಹಂಚಿಕೊಂಡರು.

ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ, ಪೌರ ಕಾರ್ಮಿಕ ಬಗ್ಗೆ ಕಾಳಜಿ ವಹಿಸಿವುದು ನಮ್ಮ ಕರ್ತವ್ಯ ಎಂದು ಹೇಳಿದರು,

ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರ ಖಾಯಂ

ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕ ಮಾಡಲಾಗುತ್ತದೆ ನಂತರ ಇನ್ನುಳಿದ ಕಾರ್ಮಿಕ ಖಾಯಂ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ, ಶೀಘ್ರ ಪೌರ ಕಾರ್ಮಿಕರ ಖಾಯಂ ಬಗ್ಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

BREAKING NEWS: ಬಿಜೆಪಿ-ಜೆಡಿಎಸ್‌ ಮಧ್ಯೆ ಜೋರಾದ BMS ಹಗರಣ; ಸದನದಲ್ಲಿ ಗದ್ದಲ

BIGG NEWS : ಮಲೆನಾಡ ಹೆಬ್ಬಾಗಿಲಲ್ಲಿ ‘ಶಂಕಿತ ಉಗ್ರರ ಜಾಲ’ : ಬಂಧಿತ ಯಾಸಿನ್ ಗೆ ಪಾಕ್ ನಂಟು : ಸ್ಪೋಟಕ ಮಾಹಿತಿ ರಿವೀಲ್

Share.
Exit mobile version