ಬೆಂಗಳೂರು: ಬಿಎಂಎಸ್‌ ಟ್ರಸ್ಟ್‌ ಅವ್ಯವಹಾರ ಕುರಿತು ಬಿಜೆಪಿ- ಜೆಡಿಎಸ್‌ ಮಧ್ಯೆ ಕಲಾಪದಲ್ಲಿ ಗದ್ದಲ ಜೋರಾಗಿದೆ. ಸಚಿವ ಅಶ್ವತ್ಥ ನಾರಾಯಣ ಕೂಡಲೇ ರಾಜೀನಾಮೆ ನೀಡಲೇಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

BIGG NEWS: ತುಮಕೂರಿನಲ್ಲಿ ಗೋಡೆ ಬರಹದಲ್ಲಿ ತಪ್ಪು ಕನ್ನಡ ಪದ ಬಳಕೆ

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಟ್ರಸ್ಟ್‌ ಅನ್ನು ಖಾಸಗಿವರಿಗೆ ಹಸ್ತಾಂತರ ಮಾಡಿದ್ದಕ್ಕೆ ವಿರೋಧಿಸ ಜೆಡಿಎಸ್‌ ಹೋರಾಟ ನಡೆಸುತ್ತಿದೆ. ಟೆಸ್ಟ್‌ ಅನ್ನು ಮತ್ತೆ ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ನಾಯಕರ ಪಟ್ಟುಹಿಡಿದು ಕುಳಿತಿದ್ದಾರೆ. ಇಲ್ಲ ಅಂದರೆ ಸರ್ಕಾರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಮತ್ತೆ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.

 

BIGG NEWS: ತುಮಕೂರಿನಲ್ಲಿ ಗೋಡೆ ಬರಹದಲ್ಲಿ ತಪ್ಪು ಕನ್ನಡ ಪದ ಬಳಕೆ

ಇನ್ನು ಬಿಎಂಎಸ್‌ ಟ್ರಸ್ಟ್‌ ಮೇಲೆ ಅಕ್ರಮ ಆರೋಪ ವಿಚಾರವಾಗಿ ಸರಣಿ ಟ್ವೀಟ್‌ ಮೂಲಕ ಜೆಡಿಎಸ್‌ ಬೇಡಿಕೆ ಇಟ್ಟಿದ್ದಾರೆ. ಟ್ರಸ್ಟ್‌ ನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಬೆಳಗ್ಗೆ ಟ್ವೀಟ್‌ ಮೂಲಕ ಹೆಚ್.‌ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದರು.

 

Share.
Exit mobile version