ಬೆಂಗಳೂರು: ತಪ್ಪು ಕೇವಲ RCB,DNA ಮತ್ತು KSCA ಎಂದಿದ್ದ ಸಿದ್ದರಾಮಯ್ಯ ತಮ್ಮ ಪರಮಾಪ್ತ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ರವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದಕ್ಕೆ ಕಾರಣವನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂಬುದಾಗಿ ಬಿಜೆಪಿ ಮುಖಂಡ ಪ್ರಕಾಶ್.ಎಸ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ವಿಧಾನಸೌಧ ಮುಂಭಾಗ ಕಾರ್ಯಕ್ರಮ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು. ಈಗ ಕಾರ್ಯಕ್ರಮ ಎಡವಟ್ಚಾದ ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಿ ಮತ್ತೆ ತಮ್ಮ ತಲೆದಂಡ ತಪ್ಪಿಸಿಕೊಳ್ಳುವ ಧೂರ್ತತನ ಇದಾಗಿದೆ ಎಂದಿದ್ದಾರೆ.
ಪೋಲೀಸ್ ಅಧಿಕಾರಿಗಳಾಯಿತು ಈಗ ರಾಜಕೀಯ ಕಾರ್ಯದರ್ಶಿಯ ಮತ್ತು ADGP ಇಂಟಲಿಜೆನ್ಸ್ ತಲೆದಂಡವಾಗಿದೆ. ಇವರೊಬ್ಬರು ಉಳಿದುಕೊಳ್ಳಲು ಇನ್ನು ಯಾರ್ಯಾರು ಬಲಿಯಾಗುತ್ತಾರೊ ಭಗವಂತನೆ ಬಲ್ಲ ಎಂಬುದಾಗಿ ಹೇಳಿದ್ದಾರೆ.
ತಪ್ಪು ಕೇವಲ RCB,DNA ಮತ್ತು KSCA ಎಂದಿದ್ದ ಸಿದ್ದರಾಮಯ್ಯ ತಮ್ಮ ಪರಮಾಪ್ತ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ರವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದಕ್ಕೆ ಕಾರಣವನ್ನು ರಾಜ್ಯದ ಜನತೆಗೆ ತಿಳಿಸಬೇಕು.
ವಿಧಾನಸೌಧ ಮುಂಭಾಗ ಕಾರ್ಯಕ್ರಮ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು. ಈಗ ಕಾರ್ಯಕ್ರಮ ಎಡವಟ್ಚಾದ ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಿ…
— Prakash Sesharaghavachar 🇮🇳 (@sprakaashbjp) June 6, 2025
BREAKING: ಬೆಂಗಳೂರಲ್ಲಿ RCB ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳ ಸಾವು ಕೇಸ್: ಮತ್ತೆರಡು ದೂರು ದಾಖಲು
ದೇಶಿ ಫೌಂಡೇಶನ್ ಶ್ರೀಧರ್ ಮೂರ್ತಿ ನಿಧನ: ಸಾಗರ ತಾಲ್ಲೂಕು ಕರವೇ ಅಧ್ಯಕ್ಷ ಜಯರಾಮ್ ಸೂರನಗದ್ದೆ ಸಂತಾಪ