Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾಖಲೆಗಳ ‘ವಿರಾಟ’ ರೂಪ: 28 ಸಾವಿರ ರನ್ ಪೂರೈಸಿ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

12/01/2026 6:47 AM

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 650 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

12/01/2026 6:41 AM

GOOD NEWS: ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ಉಚಿತ: ಹೊಸ ಸದಸ್ಯರ ನೋಂದಣಿ ಆಂರಭ

12/01/2026 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಪ್ರಧಾನಿ ಮೋದಿ ‘ಪಂಬನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಲೋಕಾರ್ಪಣೆ: ವಿಶೇಷತೆ ಇಲ್ಲಿದೆ | Pamban Vertical Lifting Bridge
INDIA

ಇಂದು ಪ್ರಧಾನಿ ಮೋದಿ ‘ಪಂಬನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಲೋಕಾರ್ಪಣೆ: ವಿಶೇಷತೆ ಇಲ್ಲಿದೆ | Pamban Vertical Lifting Bridge

By kannadanewsnow0906/04/2025 6:17 AM

ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇಂತಹ ದೇಶದ ಮೊದಲ ಲಿಫ್ಟ್ ಸೇತುವೆ ರಾಮೇಶ್ವರಂನ ಪಂಬನ್ ಪ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ. ಅದರ ವಿಶೇಷತೆ ಏನು ಅಂತ ಮುಂದಿದೆ ಓದಿ.

ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ

ಒಂದು ಕಾಲದಲ್ಲಿ ಆ ಭೂ ಭಾಗ ಸುತ್ತಲೂ ಸಮುದ್ರದಿಂದ ಆವೃತ್ತವಾಗಿ ದ್ವೀಪವಾಗಿತ್ತು. ಆ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದು ರೈಲ್ವೆ ಸಾರಿಗೆ ಸಂಚಾರದ ಮೂಲಕ. ಈಗ ರಸ್ತೆ, ರೈಲು ಮಾರ್ಗದ ಮೂಲಕ ಜೊತೆಗೆ ಬೆಸೆದುಕೊಂಡಿರೋದೇ ರಾಮೇಶ್ವರಂ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪಟ್ಟಣಕ್ಕೆ ರೈಲು ಸಾರಿಗೆ ಮೂಲಕ ಮತ್ತೊಮ್ಮೆ ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ಸಿದ್ಧವಾಗಿದೆ. ಇದಕ್ಕಾಗಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

1914ರಲ್ಲಿ ನಿರ್ಮಿಸಿದ್ದ ಸೇತುವೆ ಹಾನಿ

1914ರಲ್ಲಿ ರಾಮೇಶ್ವರಂ ದ್ವೀಪಕ್ಕೆ ಮೀಟರ್ ಗೇಜ್ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. 1964ರಲ್ಲಿ ಉಂಟಾದಂತ ಚಂಡಮಾರುತಕ್ಕೆ ಸಿಕ್ಕು ರೈಲು ಸೇತುವೆ ಹಾನಿಯಾಗಿತ್ತು. ಆಗ ದುರಸ್ತಿಗೊಳಿಸಿ ರೈಲು ಮಾರ್ಗವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿತ್ತು. ಹೀಗೆ ನಿರ್ಮಿಸಿದ್ದಂತ ಸೇತುವೆಗೆ 110 ವರ್ಷಗಳಾಗುತ್ತಿವೆ. ಇಷ್ಟು ಹಳೆಯ ಸೇತುವೆಯು ಅಲ್ಲಲ್ಲಿ ಹಾನಿಗೊಂಡ ಪರಿಣಾಮ ಹೊಸ ಸೇತುವೆಯನ್ನು ಅದರ ಪಕ್ಕದಲ್ಲೇ ನಿರ್ಮಿಸಲು ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿತು.

ಫೆಬ್ರವರಿ 2019ರಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ನೂತನ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿತು. ಆ ಮೂಲಕ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಯಿತು.

ಫೆಬ್ರವರಿ 2019ರಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಆರಂಭ

ಕೇಂದ್ರ ರೈಲ್ವೆ ಸಚಿವಾಲಯವು ಬರೋಬ್ಬರಿ 531 ಕೋಟಿ ವೆಚ್ಚದಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನಂತ್ರ, ಫೆಬ್ರವರಿ 2019ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿತು. ಸಮುದ್ರದ ಆಳದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ಕಂಬಗಳನ್ನು ನಿರ್ಮಾಣ ಮಾಡಿ ಸೇತುವೆಯನ್ನು ನಿರ್ಮಿಸಲಾಗಿದೆ. RVNLನ ಬಿ.ಕೆ ರೆಡ್ಡಿ ಕಂಪನಿಯು ರಾಮೇಶ್ವರಂ ಸಮುದ್ರ ತೀರದಲ್ಲಿ ವರ್ಟಿಕಲ್ ರೈಲು ಸೇತುವೆ ನಿರ್ಮಾಣವನ್ನು ಆರಂಭಿಸಿ, ನವೆಂಬರ್ 2024ರಲ್ಲಿ ಮುಕ್ತಾಯಗೊಳಿಸಿದೆ.

333 ಕಂಭಗಳ ಮೇಲೆ ರೈಲು ಸಂಚಾರ

333 ಕಂಭಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ಹುದುಗಿಸಿ ವರ್ಟಿಕಲ್ ಸೇತುವೆಯನ್ನು ನಿರ್ಮಿಸಲಾಗಿದೆ. 2.10 ಕಿಲೋಮೀಟರ್ ದೂರದ ಈ ರೈಲು ಸೇತುವೆ ಮೇಲೆ ಸುಮಾರು 75 ರಿಂದ 80 ಕಿಲೋಮೀಟರ್ ವೇಗದ ಮಿತಿಯಲ್ಲಿ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ.

3,38,014 ಬ್ಯಾಗ್ ಸಿಮೆಂಟ್ ಬಳಕೆ

38 ಮೀಟರ್ ಆಳದವರೆಗೆ ಸಮುದ್ರದಲ್ಲಿ ಸೇತುವೆಯ ಕಂಭಗಳನ್ನು ನೆಟ್ಟು ಸುನಾಮಿ ಸೇರಿದಂತೆ ಇತರೆ ಪ್ರಕೃತಿ ವಿಕೋಪಗಳಂತ ಸಂದರ್ಭದಲ್ಲೂ ಹಾನಿಯಾಗದಂತೆ 4500 ಎಂಟಿ ಸಾಮರ್ಥ್ಯದ ಸ್ಟೇನ್ ಲೆಸ್ ಸ್ಟೀಲ್ ಬಳಸಿ ಕಂಭಗಳನ್ನು ನಿರ್ಮಿಸಲಾಗಿದೆ. 25,000 ಸಿಯುಎಂ ಕ್ವಾಲಿಟಿಯ ಸಿಮೆಂಟ್ ಅನ್ನು ಕಂಭಗಳ ನಿರ್ಮಾಣಕ್ಕೆ ಬಳಸಲಾಗಿದೆ. 333 ಪಿಲ್ಲೋಗಳನ್ನು ನಿರ್ಮಿಸಲು 3,38,014 ಬ್ಯಾಗ್ ಸಿಮೆಂಟ್ ಬಳಕೆ ಮಾಡಲಾಗಿದೆ.

ತುಕ್ಕು ಹಿಡಿಯದಂತೆ ಜಿಂಕ್ ದ್ರಾವಣ ಲೇಪನ

ಸಮುದ್ರದ ಕಡಲ ಅಲೆಗಳ ಕೊರೆತ, ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಇತರೆ ಕಾರಣಗಳಿಂದ ಬಹು ಬೇಗ ತುಕ್ಕು ಹಿಡಿದು ಪಿಲ್ಲೋಗಳು ಹಾನಿಗೊಳಗಾಗುತ್ತವೆ. ಹೀಗಾಗಿ ತುಕ್ಕು ಹಿಡಿಯುವುದನ್ನು ತಡೆಯಲು ಜಿಂಕ್ ಮೆಟಲಿಜಿನ್, ಎಪಿಲುಕ್ಸ್ ಜಿಂಕ್ ರಿಚ್ ಪ್ರೀಮೆರ್, ಎರಡು ಕೋಟ್ ಪಲಿಸಿಲೋಕ್ಸಿನ್ ಪೆಯಂಟ್ಸ್ ಅನ್ನು ಪ್ರತಿ ಕಂಬಗಳಿಗೂ ಮಾಡಲಾಗಿದೆ. ಯಾವೆಲ್ಲ ಕಂಬಗಳಿಗೆ ತುಕ್ಕು ಹಿಡಿದಿದ್ಯೋ ಅಂತ ಕಾಲ ಕಾಲಕ್ಕೆ ಪರಿಶೀಲಿಸಿ ಮರು ಲೇಪನ ಮಾಡಿ, ತುಕ್ಕು ಹಿಡಿಯೋದನ್ನು ತಡೆಯೋ ಕೆಲಸವನ್ನು ರೈಲ್ವೆ ಇಲಾಖೆ ಮಾಡಲಿದೆ.

ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್

ಇನ್ನೂ ರಾಮೇಶ್ವರಂ ಬಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವಂತ ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್. 17 ಮೀಟರ್ ಎತ್ತರದವರೆಗೆ ಕೇವಲ 5 ನಿಮಿಷ 30 ಸೆಕೆಂಡುಗಳಲ್ಲಿ ಸೇತುವೆಯ ಭಾಗವನ್ನು ಮೇಲೆತ್ತಬಹುದಾಗಿದೆ. ಇದರಿಂದ ರಾಮೇಶ್ವರಂನಿಂದ ಸಮುದ್ರಕ್ಕೆ ದೊಡ್ಡ ದೊಡ್ಡ ಬೋಟ್ ಗಳು ಮೀನುಗಾರಿಕೆಗೆ ತೆರಳೋದಕ್ಕೆ ಅನುಕೂಲ ಕಲ್ಪಿಸಲಾಗಿದೆ.

ತಿಂಗಳಿಗೆ ಒಂದೆರಡು ಬಾರಿ ಮಾತ್ರವೇ ವರ್ಟಿಕಲ್ ಸೇತುವೆಯನ್ನು ಮೇಲೆತ್ತಲಾಗುತ್ತದೆ. ಬಂದರು ಇಲಾಖೆಯಿಂದ ವರ್ಟಿಕಲ್ ಸೇತುವೆ ಬಳಸಿ ಹೋಗುವಂತೆ ಬೋಟ್ ಗಳ ಮಾಹಿತಿಯನ್ನು ರೈಲ್ವೆ ಇಲಾಖೆಗೆ ನೀಡಿದ ನಂತ್ರ, ಈ ಸೇತುವೆ ಹಾದು ಹೋಗೋದಕ್ಕೆ ಮೇಲೆತ್ತಿ ಅವಕಾಶ ನೀಡಲಾಗುತ್ತದೆ. ಆ ಮೂಲಕ ರಾಮೇಶ್ವರಂನ ಮೀನುಗಾರರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಅನುವಾಗಿದೆ.

ಅಂದಹಾಗೇ ಇದಕ್ಕೂ ಮೊದಲು ನಿರ್ಮಿಸಿದ್ದಂತ ಹಳೆಯ ಸೇತುವೆಯನ್ನು ಮಾನವ ಶಕ್ತಿಯನ್ನು ಬಳಸಿ ಸುಮಾರು ಅರ್ಧಗಂಟೆಯ ಸಮಯವನ್ನು ತೆಗೆದುಕೊಂಡು ಓಪನ್ ಮಾಡಬೇಕಿತ್ತು. ಆದರೇ ಹೊಸದಾಗಿ ನಿರ್ಮಿಸಿರುವಂತ ವರ್ಟಿಕಲ್ ಸೇತುವೆಯನ್ನು ಕೇವಲ 5 ನಿಮಿಷ 30 ಸೆಕೆಂಡ್ ಗಳಲ್ಲಿ ಬರೋಬ್ಬರಿ 17 ಮೀಟರ್ ಎತ್ತರದವರೆಗೆ ಮೇಲೆತ್ತಬಹುದಾಗಿದೆ.

ಒಮ್ಮೆ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಎತ್ತಿ ಇಳಿಸಲು 120 ಕೆವಿ ವಿದ್ಯುತ್ ಬೇಕು

ಸಂಪೂರ್ಣ ವಿದ್ಯುತ್ ಚಾಲಿತ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ಒಮ್ಮೆ ತೆರೆದು, ಮೀನುಗಾರಿಕೆಗೆ ತೆರಳುವಂತ ಬೋಟ್ ಗಳಿಗೆ ಅವಕಾಶ ಮಾಡಿಕೊಟ್ಟು, ಪುನಃ ರೈಲು ಸಂಚಾರಕ್ಕೆ ಕೆಳಗಿಳಿಸಿ ಅವಕಾಶ ನೀಡಲು 120 ಕೆವಿ ವಿದ್ಯುತ್ ಬೇಕು ಎಂಬುದು ಸೀನಿಯರ್ ಸೆಕ್ಷನ್ ಆಫೀಸರ್ ಮಾಹಿತಿ. ಹೀಗಾಗಿಯೇ ತಿಂಗಳಿಗೆ ಒಂದು ಎರಡು ಬಾರಿ ಇಲ್ಲವೇ ತುರ್ತು ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬಾರಿ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ತೆರೆದು ಮುಚ್ಚಲಾಗುತ್ತದೆ ಎಂಬುದಾಗಿಯೂ ತಿಳಿಸಿದ್ದಾರೆ.

ಇಂದು ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಲೋಕಾರ್ಪಣೆ

ಫೆಬ್ರವರಿ 2019ರಲ್ಲಿ 531 ಕೋಟಿ ರೂಪಾಯಿಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯದಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡಲಾಯಿತು. ನವೆಂಬರ್ 2024ರಲ್ಲಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮೇಶ್ವರಂನ ಪಂಬನ್ ಲಿಫ್ಟ್ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಿದ್ದಾರೆ.

ಇಂದಿನಿಂದ ರಾಮೇಶ್ವರಂಗೆ ರೈಲು ಸಂಚಾರವೂ ಪುನರಾರಂಭ

ಇನ್ನೂ ರಾಮೇಶ್ವರಂನ ಪಂಬಲನ್ ಸಮುದ್ರ ರೈಲು ಸೇತುವೆಯ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಈಗಾಗಲೇ ರೈಲ್ವೆ ಇಲಾಖೆಯಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆಯ ಮೇಲೆ ರೈಲು ಸಂಚಾರದ ಪರೀಕ್ಷೆಯನ್ನು ನಡೆಸಲಾಗಿದೆ. ಜೊತೆಗೆ 75ರಿಂದ 80 ಕಿಲೋಮೀಟರ್ ವೇಗದಲ್ಲಿ ಈ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆಗೂಡಿ ನೂತನ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಲೋಕಾರ್ಪಣೆ ಗೊಳಿಸಲಿದ್ದಾರೆ. ಆ ಬಳಿಕ ರಾಮೇಶ್ವರಂಗೆ ರೈಲು ಸಂಚಾರ ಪುನರಾರಂಭಗೊಳ್ಳಲಿದೆ.

ದಿನವೊಂದಕ್ಕೆ 12 ರೈಲುಗಳು ಸಂಚಾರ ನಡೆಸಲಿವೆ ಎಂಬುದಾಗಿ ರೈಲ್ವೆ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಈ ಸಂಖ್ಯೆ ವಿಶೇಷ ರೈಲುಗಳು ಸೇರಿದರೇ 18ಕ್ಕೆ ಏರುವ ಸಾಧ್ಯತೆ ಇದೆ. ಆ ಮೂಲಕ ರಾಮೇಶ್ವರಕ್ಕೆ ಭಾರತದ ಇತರೆ ಪ್ರದೇಶಗಳಿಂದ ರೈಲು ಸಂಚಾರದ ಮೂಲಕ ತಲುಪುವಂತ ಕಾರ್ಯ ಹಲವು ವರ್ಷಗಳ ಬಳಿಕ ಶುರುವಾಗಲಿದೆ.

ಸೋ ರಾಮೇಶ್ವರ ಬಳಿಯ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಾಳೆ ಲೋಕಾರ್ಪಣೆಗೊಳ್ಳಲಿ. ಪ್ರಯಾಣಿಕರಿಗೆ ರೈಲು ಸಂಚಾರದ ಸೇವೆಯೊಂದಿಗೆ ರಾಮೇಶ್ವರಕ್ಕೆ ತಲುಪುವ ಕಾರ್ಯ ಪುನರಾರಂಭಗೊಳ್ಳಲಿ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಆಶಿಸುತ್ತಿದೆ.

ಪಂಬನ್ ವರ್ಟಿಕಲ್ ಸೇತುವೆ ನೋಡಲು ಹೋಗೋದು ಹೇಗೆ.?

ನೀವು ಬೆಂಗಳೂರಿನಿಂದ ವಿಮಾನ ಮಾರ್ಗದ ಮೂಲಕ ಮಧುರೈಗೆ ತೆರಳಿ, ಅಲ್ಲಿಂದ ರಾಮೇಶ್ವರಕ್ಕೆ ರಸ್ತೆ ಮಾರ್ಗದ ಮೂಲಕ ಸಂಚರಿಸಬಹುದು. ಇಲ್ಲವೇ ರೈಲಿನ ಮೂಲಕ ತೆರಳೋದಾದರೇ ಬೆಂಗಳೂರಿನಿಂದ ಮಧುರೈಗೆ ನೇರವಾಗಿ ರೈಲು ಸಂಚಾರದ ವ್ಯವಸ್ಥೆಯಿದೆ. ಮಧುರೈಗೆ ತೆರಳಿ ರಾಮೇಶ್ವರಕ್ಕೆ ಕಾರು, ಬಸ್ ಮೂಲಕ ತಲುಪಬಹುದಾಗಿದೆ.

ರಾಮೇಶ್ವರಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಪಂಬನ್ ಸಮುದ್ರ ಸೇತುವೆ ನೋಡಿಕೊಂಡು ಮುಂದೆ ಸಾಗಿದ್ರೆ ನಿಮಗೆ ಡಾ.ಎಪಿಜೆ ಅಬ್ದುಲ್ ಕಾಲಂ ಮೆಮೋರಿಯಲ್ ಹಾಲ್ ಸಿಗಲಿದೆ. ಅದನ್ನು ವೀಕ್ಷಿಸಿ ರಾಮೇಶ್ವರದಲ್ಲಿ ಡಾ.ಎಪಿಜೆ ಅಬ್ದುಲ್ ಕಾಲಂ ಮನೆಗೂ ಭೇಟಿ ನೀಡಬಹುದು. ಇದಲ್ಲದೇ ರಾಮೇಶ್ವರದಿಂದ ಭಾರತದ ಕೊನೆಯ ಭೂ ಭಾಗವಾಗಿರುವಂತ ಧನುಷ್ ಕೋಟಿಗೂ ಭೇಟಿ ನೀಡಿ ಬರಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

ದಾಖಲೆಗಳ ‘ವಿರಾಟ’ ರೂಪ: 28 ಸಾವಿರ ರನ್ ಪೂರೈಸಿ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

12/01/2026 6:47 AM1 Min Read

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 650 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

12/01/2026 6:41 AM1 Min Read

BREAKING : ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ್ : ನುಗ್ಗಿ ಬಂದ ಡ್ರೋನ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ

12/01/2026 6:07 AM1 Min Read
Recent News

ದಾಖಲೆಗಳ ‘ವಿರಾಟ’ ರೂಪ: 28 ಸಾವಿರ ರನ್ ಪೂರೈಸಿ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

12/01/2026 6:47 AM

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 650 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

12/01/2026 6:41 AM

GOOD NEWS: ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ಉಚಿತ: ಹೊಸ ಸದಸ್ಯರ ನೋಂದಣಿ ಆಂರಭ

12/01/2026 6:30 AM

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

12/01/2026 6:27 AM
State News
KARNATAKA

GOOD NEWS: ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ಉಚಿತ: ಹೊಸ ಸದಸ್ಯರ ನೋಂದಣಿ ಆಂರಭ

By kannadanewsnow5712/01/2026 6:30 AM KARNATAKA 1 Min Read

ಬೆಂಗಳೂರು: 2025-26ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ,…

SHOCKING : ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ದುರಂತ : ಧಾರವಾಡದ KCD ಕಾಲೇಜು ಪ್ರೊಫೆಸರ್ ‘ಹೃದಯಾಘಾತಕ್ಕೆ’ ಬಲಿ!

12/01/2026 6:27 AM

ಸಾರ್ವಜನಿಕರೇ ಗಮನಿಸಿ: `ಸೈಟ್’ ಖರೀದಿಸುವಾಗ ಈ 7 ದಾಖಲೆಗಳು ಸರಿ ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ

12/01/2026 6:20 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಟ್ರ್ಯಾಕ್ಟರ್, ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ರೂ. ಸಹಾಯಧನ.!

12/01/2026 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.