Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಾಸಕ ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು

11/06/2025 11:02 AM

BREAKING : ವಿಶ್ವದ ಅತ್ಯಂತ ಜನಪ್ರಿಯ ಟಿಕ್ ಟಾಕರ್ ‘ಖಾಬಿ ಲ್ಯಾಮ್’ ಗೆ ಯುಎಸ್ ತೊರೆಯುವಂತೆ ಸೂಚನೆ

11/06/2025 10:47 AM

ಸರ್ವಪಕ್ಷ ನಿಯೋಗದ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

11/06/2025 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಪ್ರತಿ ಮನೆ ಮನೆಗೂ ದಿನದ 24 ಗಂಟೆ ನೀರು ಪೂರೈಕೆಗೆ ಯೋಜನೆ ಸಿದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಸಾಗರದ ಪ್ರತಿ ಮನೆ ಮನೆಗೂ ದಿನದ 24 ಗಂಟೆ ನೀರು ಪೂರೈಕೆಗೆ ಯೋಜನೆ ಸಿದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0901/05/2025 8:31 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಮನೆಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿ 250 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿಯಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಗುರುವಾರ ಯುವ ಸಬಲೀಕರಣ ಇಲಾಖೆಯಿಂದ ನವೀಕೃತಗೊಂಡ ಈಜುಕೊಳದ ಲೋಕಾರ್ಪಣೆ ಹಾಗೂ ಈಜು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜನರಿಗೆ ಶುದ್ದ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ತರುವ ಯೋಜನೆ ಇನ್ನಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು.

ವಿಜಯನಗರ ಬಡಾವಣೆ ಈಜುಕೊಳ 2008ರಲ್ಲಿ ನನ್ನ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿತ್ತು. ನಂತರ ಕಾಗೋಡು ತಿಮ್ಮಪ್ಪ ಅವರು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಂತರ ಬಂದವರು ತರಾತುರಿಯಲ್ಲಿ ಈಜುಕೋಳ ಉದ್ಘಾಟಿಸಿದ್ದರು. ಆದರೆ ಇಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರಲಿಲ್ಲ. ಈಜುಕೊಳ ಸಂಪೂರ್ಣ ಹಾಳಾಗಿದ್ದರಿಂದ ಮೂರು ವರ್ಷಗಳ ಕಾಲ ಮುಚ್ಚಿಹೋಗಿತ್ತು. ನಾನು ಶಾಸಕನಾಗಿ ಬಂದ ಮೇಲೆ ಮಕ್ಕಳಿಗೆ ಈಜು ತರಬೇತಿ ಅಗತ್ಯತೆ ಮನಗಂಡು 49 ಲಕ್ಷ ರೂ. ಮಂಜೂರು ಮಾಡಿಸಿ ಈಜುಕೊಳ ಪುನರ್ ನವೀಕರಣ ಮಾಡಿಸಿದ್ದೇನೆ. ಮಕ್ಕಳು ಬೇಸಿಗೆ ರಜೆ ಸಂದರ್ಭದಲ್ಲಿ ನದಿ ಕೆರೆ ಹೊಳೆಗಳಿಗೆ ಈಜಲು ಹೋಗಿ ಅಪಾಯ ತಂದಿಟ್ಟುಕೊಳ್ಳುತ್ತಾರೆ. ಪೋಷಕರು ಮಕ್ಕಳನ್ನು ಈಜುಕೊಳಕ್ಕೆ ಈಜು ಕಲಿಯಲು ಕಲಿಸಿ, ಮಕ್ಕಳ ಅಮೂಲ್ಯ ಪ್ರಾಣ ಉಳಿಸಿ ಎಂದು ಕರೆ ನೀಡಿದರು.

ತಾಲ್ಲೂಕನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. 190 ಕೋಟಿ ರೂ. ವೆಚ್ಚದಲ್ಲಿ ಜೋಗ ಜಲಪಾತ ಅಭಿವೃದ್ದಿ ಮಾಡಲಾಗುತ್ತಿದ್ದು 90 ಕೋಟಿ ರೂ. ಮಂಜೂರಾಗಿದೆ. ಸರ್ವಋತು ಜಲಪಾತದ ಜೊತೆಗೆ ರೋಪ್‍ವೇ, ಈಜುಕೊಳ, ರೈನ್ ಡ್ಯಾನ್ಸ್ ಇನ್ನಿತರೆ ಅಭಿವೃದ್ದಿ ಕೆಲಸಕ್ಕೆ ಯೋಜನೆ ರೂಪಿಸಿದೆ. ಸಿಂಗಾಪುರ ಮಾದರಿಯಲ್ಲಿ ಜೋಗ ಜಲಪಾತದ ಸಮೀಪ ಗ್ಲಾಸ್ ಹೌಸ್ ನಿರ್ಮಿಸಲು ಚಿಂತನೆ ನಡೆಸಿದೆ. ಸದ್ಯದಲ್ಲಿಯೆ ಸಿಂಗಾಪುರಕ್ಕ ಹೋಗಿ ಸ್ಥಳ ಪರಿಶೀಲನೆ ನಡೆಸಿಕೊಂಡು ಬರಲಾಗುತ್ತದೆ. ಒಳಚರಂಡಿ ವ್ಯವಸ್ಥೆ, ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸುವುದು, ಪ್ರತಿವಾರ್ಡ್‍ನಲ್ಲಿ ಪಕ್ಷಾತೀತವಾಗಿ ರಸ್ತೆ, ಪಾರ್ಕ್ ಅಭಿವೃದ್ದಿಗೆ ಒತ್ತು ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಮಧುಮಾಲತಿ, ನಾದೀರಾ, ಉಷಾ ಗುರುಮೂರ್ತಿ, ಉಮೇಶ್, ಜಾಕೀರ್, ಕುಸುಮ ಸುಬ್ಬಣ್ಣ, ಶಂಕರ ಅಳ್ವಿಕೋಡಿ, ಎಲ್.ಚಂದ್ರಪ್ಪ, ಹಮೀದ್, ಸರಸ್ವತಿ ನಾಗರಾಜ್, ರವಿಕುಮಾರ್, ಪ್ರಮುಖರಾದ ಎಂ.ಆರ್.ಹುಚ್ಚಪ್ಪ ರೇಖ್ಯಾನಾಯ್ಕರ್, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು. ಶ್ರೀಧರ ಅವಧಾನಿ ಪ್ರಾರ್ಥಿಸಿದರು. ಎಚ್.ಕೆ.ನಾಗಪ್ಪ ಸ್ವಾಗತಿಸಿದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

ಬೆಂಗಳೂರಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

BREAKING: ಪಹಲ್ಗಾಮ್ ಉಗ್ರರ ದಾಳಿ: ನ್ಯಾಯಾಂಗ ತನಿಖೆಗೆ ಕೋರಿದ್ದ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ | Pahalgam Terror Attack

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಬಳ್ಳಾಪುರದಲ್ಲಿ, ಕೇವಲ ಮೊಬೈಲ್ ಗೋಸ್ಕರ ಸ್ವಂತ ಅಣ್ಣನ ಮಗನನ್ನೆ ಹತ್ಯೆಗೈದ ಚಿಕ್ಕಪ್ಪ!

11/06/2025 10:28 AM1 Min Read

BREAKING : ಕಲಬುರ್ಗಿಯಲ್ಲಿ ಮತ್ತೊಂದು ಮರ್ಡರ್ : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ!

11/06/2025 10:16 AM1 Min Read

BREAKING : ಕೋಲಾರದಲ್ಲಿ 20 ಸಾವಿರ ಲಂಚ ಸ್ವೀಕಾರ : ‘PSI’ & ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

11/06/2025 10:05 AM1 Min Read
Recent News

BREAKING : ಶಾಸಕ ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು

11/06/2025 11:02 AM

BREAKING : ವಿಶ್ವದ ಅತ್ಯಂತ ಜನಪ್ರಿಯ ಟಿಕ್ ಟಾಕರ್ ‘ಖಾಬಿ ಲ್ಯಾಮ್’ ಗೆ ಯುಎಸ್ ತೊರೆಯುವಂತೆ ಸೂಚನೆ

11/06/2025 10:47 AM

ಸರ್ವಪಕ್ಷ ನಿಯೋಗದ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

11/06/2025 10:36 AM

BREAKING : ಚಿಕ್ಕಬಳ್ಳಾಪುರದಲ್ಲಿ, ಕೇವಲ ಮೊಬೈಲ್ ಗೋಸ್ಕರ ಸ್ವಂತ ಅಣ್ಣನ ಮಗನನ್ನೆ ಹತ್ಯೆಗೈದ ಚಿಕ್ಕಪ್ಪ!

11/06/2025 10:28 AM
State News
KARNATAKA

BREAKING : ಚಿಕ್ಕಬಳ್ಳಾಪುರದಲ್ಲಿ, ಕೇವಲ ಮೊಬೈಲ್ ಗೋಸ್ಕರ ಸ್ವಂತ ಅಣ್ಣನ ಮಗನನ್ನೆ ಹತ್ಯೆಗೈದ ಚಿಕ್ಕಪ್ಪ!

By kannadanewsnow0511/06/2025 10:28 AM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರ ಕೊಲೆ ನಡೆದಿದ್ದು, ಕೇವಲ ಮೊಬೈಲ್ ವಿಚಾರಕ್ಕೆ ಜಗಳ ಉಂಟಾಗಿ ಸ್ವಂತ ಅಣ್ಣನ ಮಗನನ್ನೇ ಚಿಕ್ಕಪ್ಪನೊಬ್ಬ…

BREAKING : ಕಲಬುರ್ಗಿಯಲ್ಲಿ ಮತ್ತೊಂದು ಮರ್ಡರ್ : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ!

11/06/2025 10:16 AM

BREAKING : ಕೋಲಾರದಲ್ಲಿ 20 ಸಾವಿರ ಲಂಚ ಸ್ವೀಕಾರ : ‘PSI’ & ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

11/06/2025 10:05 AM

BREAKING : ಮಾಜಿ ಸಚಿವ ಬಿ ನಾಗೇಂದ್ರಗೂ ‘ED’ ಶಾಕ್ : ಬೆಂಗಳೂರಿನ ಶಾಸಕರ ಭವನದಲ್ಲಿ ದಾಖಲೆ ಪರಿಶೀಲನೆ

11/06/2025 9:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.