ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿರುವಂತ ನಟ ದರ್ಶನ್ ಹಾಗೂ ಪವಿತ್ರಾ ಗೌಡ, 2ನೇ ಬಾರಿಗೆ ಬಂಧನದ ಬಳಿಕ ಇದೇ ಮೊದಲ ಬಾರಿಗೆ 2 ತಿಂಗಳ ಬಳಿಕ ಮುಖಾಮುಖಿ ಭೇಟಿಯಾಗಿ ಮಾತನಾಡಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿರುವ ಹಿನ್ನಲೆಯಲ್ಲಿ ಇಂದು ಎಲ್ಲಾ ಆರೋಪಿಗಳನ್ನು ಬೆಂಗಳಿನ 64ನೇ ಸಿಸಿಹೆಚ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವಂತ ಪವಿತ್ರಾಗೌಡ, ಎ2 ಆರೋಪಿ ನಟ ದರ್ಶನ್ ಅವರನ್ನು ನ್ಯಾಯಾಲಯದ ಮುಂದೆ ಸಾಲಾಗಿ ನಿಲ್ಲಿಸಲಾಗಿತ್ತು. ಪವಿತ್ರಾಗೌಡ ಹಿಂದೆ ನಟ ದರ್ಶನ್ ನಿಂತಿದ್ದರು. ಈ ಸಂದರ್ಭದಲ್ಲಿ ಮುಂದೆ ಬಾ ಎಂಬುದಾಗಿ ದರ್ಶನ್ ಅವರನ್ನು ಪವಿತ್ರಾಗೌಡ ಕರೆದಿದ್ದಾರೆ.
ಆರೋಪಿ ಪವಿತ್ರಾಗೌಡ ಕರೆದ ಬೆನ್ನಲ್ಲೇ ನಟ ದರ್ಶನ್ ಮುಂದೆ ಹೋಗಿ ಪರಸ್ಪರ ಮಾತನಾಡಿದ್ದಾರೆ. 2 ತಿಂಗಳ ಬಳಿಕ ನಟ ದರ್ಶನ್ ಜೊತೆಗೆ ಪವಿತ್ರಾಗೌಡ ಮಾತನಾಡಿದ್ದಾರೆ.
BIG NEWS: ರಾಜ್ಯದಲ್ಲೊಂದು ‘ಹೃದಯ ವಿದ್ರಾವಕ’ ಘಟನೆ: ಮಾಲೀಕನ ಸಾವಿನಿಂದ ನೊಂದು ‘ಪ್ರಾಣಬಿಟ್ಟ ಶ್ವಾನ’








