ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಯಶಸ್ವಿ ಕಾರ್ಯಾಚರಣೆಯ ನಂತರ ಸ್ವದೇಶಕ್ಕೆ ಮರಳಿದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಗೌರವಿಸಲು ಸಂಸತ್ತು ಸಜ್ಜಾಗಿದೆ.
ಅವರ ಸಾಧನೆಯನ್ನು ಆಚರಿಸಲು ಮತ್ತು ಭಾರತದ ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಎತ್ತಿ ತೋರಿಸಲು ಉಭಯ ಸದನಗಳಲ್ಲಿ ವಿಶೇಷ ಚರ್ಚೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ನಿರ್ಧಾರವನ್ನು ದೃಢಪಡಿಸಿದ್ದು, ಶುಕ್ಲಾ ಅವರ ಸಾಧನೆಯನ್ನು “ರಾಷ್ಟ್ರಕ್ಕೆ ಐತಿಹಾಸಿಕ ಮೈಲಿಗಲ್ಲು” ಎಂದು ಕರೆದಿದ್ದಾರೆ.
“ನಮ್ಮ ಹೀರೋ ಗಗನಯಾತ್ರಿ ಕ್ಯಾಪ್ಟನ್ ಸುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಕಾರ್ಯಾಚರಣೆಯ ನಂತರ ಮನೆಗೆ ಮರಳಿದ್ದಾರೆ. ಈ ಗಮನಾರ್ಹ ಸಾಧನೆ ಮತ್ತು ನಕ್ಷತ್ರಗಳತ್ತ ನಮ್ಮ ಪ್ರಯಾಣದಲ್ಲಿ ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳ ಬಗ್ಗೆ ವಿಶೇಷ ಚರ್ಚೆಯೊಂದಿಗೆ ಸಂಸತ್ತು ಅವರನ್ನು ಗೌರವಿಸುತ್ತದೆ” ಎಂದಿದ್ದಾರೆ .