Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತೀಯ ಸೇನೆಯಿಂದ `ಆಪರೇಷನ್ ಸಿಂಧೂರ್’ : ಗಡಿ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

08/05/2025 6:45 PM

BREAKING : ಭಾರತದ ಮೇಲೆ ದಾಳಿ ಮಾಡಿದರೆ ಪರಿಣಾಮಗಳನ್ನು ಎದುರಿಸಲು ಪಾಕಿಸ್ತಾನ ಸಿದ್ಧವಾಗಿರಬೇಕು : ವಿಕ್ರಮ್ ಮಿಶ್ರಿ ಎಚ್ಚರಿಕೆ

08/05/2025 6:37 PM

BREAKING : ಅಮೆರಿಕದ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಸೂಚನೆ ನೀಡಿದ ಸಿಂಗಾಪುರ | Operation Sindoor

08/05/2025 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ಮೌಡ್ಯತೆ, ಮೂಢನಂಬಿಕೆಯಿಂದಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿದರೆ ಶಿಕ್ಷಾರ್ಹ ಅಪರಾಧ.!
KARNATAKA

ಪೋಷಕರೇ ಗಮನಿಸಿ : ಮೌಡ್ಯತೆ, ಮೂಢನಂಬಿಕೆಯಿಂದಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿದರೆ ಶಿಕ್ಷಾರ್ಹ ಅಪರಾಧ.!

By kannadanewsnow5708/03/2025 9:02 AM

ಮೌಡ್ಯತೆ, ಮೂಢನಂಬಿಕೆಗೆ ಒಳಗಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವುದು ಕಾನೂನು ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಭಾರತ ಸಂವಿಧಾನದಲ್ಲಿ ಪರಿಚ್ಛೇದ 21ರಲ್ಲಿ ದೇಶದ ಸಮಸ್ತರಿಗೂ ಬದುಕುವ ಹಕ್ಕನ್ನು ನೀಡಿದೆ ಪರಿಚ್ಛೇಧ 15(3)ರಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯವನ್ನು ಕಲ್ಪಿಸಲು ಅವಕಾಶವನ್ನು ನೀಡಿದೆ. ಪರಿಚ್ಛೇದ 39(ಎಫ್)ನಲ್ಲಿ ಆರೋಗ್ಯಯುತವಾಗಿ ಮಕ್ಕಳು ಅಭಿವೃದ್ಧಿಯನ್ನು ಹೊಂದಲು ಅವಕಾಶಗಳನ್ನು ಹಾಗೂ ಯಾವುದೇ ರೀತಿಯ ದೌರ್ಜನ್ಯಗಳಿಂದ ರಕ್ಷಣೆಯನ್ನು ನೀಡಿದೆ. ಭಾರತ ಸರಕಾರವು “ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ” 11 ಡಿಸೆಂಬರ್ 1992ರಲ್ಲಿ ಸಹಿ ಮಾಡಿದ್ದು, ದೇಶದ ಸಮಸ್ತ ಮಕ್ಕಳಿಗೆ ಸುರಕ್ಷತೆ. ಮಕ್ಕಳಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಕಾರ್ಯನಿರ್ವಹಿಸುವಂತೆ ಸೂಚಿಸುತ್ತದೆ. ಜಿಲ್ಲಾಡಳಿತವು ಮಕ್ಕಳಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪ್ರಕರಣ ದಾಖಲು: ಜಿಲ್ಲೆಯ ಗ್ರಾಮವೊಂದರಲ್ಲಿ ಮಗುವಿನ ಆರೋಗ್ಯ ಸುಧಾರಣೆಗಾಗಿ ಎಂದು ತಾಯಿಯೊಬ್ಬಳು ಮಗುವಿಗೆ ಉದ್ದಿನ ಕಡ್ಡಿ (ಅಗರಬತ್ತಿ) ಯಿಂದ ಸುಟ್ಟಿರುವ ಮತ್ತು ಕಾಲಿಗೆ ಬೊಬ್ಬೆ ಬರುವ ಹಾಗೆ ಬಟ್ಟೆಯಿಂದ ಕಾವು ಕೊಟ್ಟಿದ್ದು, ಇದರಿಂದ ಮಗುವಿಗೆ ನಂಜಾಗಿ ಚಿಕಿತ್ಸೆಯು ಫಲಿಸದೇ ಆ ಮಗು ಮೃತಪಟ್ಟಿರುವ ಘಟನೆಯು ತಡವಾಗಿ ಶಿಶು ಮರಣ ಪರಿಶೋಧನಾ ಸಭೆಯಲ್ಲಿ ವರದಿಯಾಗಿದೆ. ಈ ಮಗುವಿನ ಸಾವಿಗೆ ಕಾರಣಳಾದ ತಾಯಿಯ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಢನಂಬಿಕೆಗೆ ಒಳಗಾಗಿ ಮೂಢನಂಬಿಕೆ ಮೌಡ್ಯಾಚರಣೆಗಳಿಂದ ಮಕ್ಕಳಿಗೆ ಬರೆ ಹಾಕುವುದು, ಲೋಹಗಳಿಂದ ಚುಚ್ಚುವುದು, ಸುಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡಿದರೆ, ಅಂತಹವರಿಗೆ ಕಾನೂನು ಮೂಲಕ ಶಿಕ್ಷಾರ್ಹ ಅಪರಾಧವಿದೆ ಎಂದು ಪ್ರಕಟಣೆ ತಿಳಿಸಿದೆ.

Parents take note: Physical abuse of children due to ignorance and superstition is a punishable offense!
Share. Facebook Twitter LinkedIn WhatsApp Email

Related Posts

BREAKING : ‘ಆಪರೇಷನ್ ಸಿಂಧೂರ್’ : ಭಾರತೀಯ ಸೈನಿಕರ ಯೋಗಕ್ಷೇಮಕ್ಕಾಗಿ ನಾಳೆ ರಾಜ್ಯಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ.!

08/05/2025 5:48 PM1 Min Read

ಕೆಪಿಎಸ್‍ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ಛಲವಾದಿ ನಾರಾಯಣಸ್ವಾಮಿ ಘೋಷಣೆ

08/05/2025 3:13 PM1 Min Read

ರಾಜ್ಯದಲ್ಲಿ ಕೇಂದ್ರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ: ಸಿಎಂ ಸಿದ್ಧರಾಮಯ್ಯ

08/05/2025 3:08 PM1 Min Read
Recent News

BREAKING : ಭಾರತೀಯ ಸೇನೆಯಿಂದ `ಆಪರೇಷನ್ ಸಿಂಧೂರ್’ : ಗಡಿ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

08/05/2025 6:45 PM

BREAKING : ಭಾರತದ ಮೇಲೆ ದಾಳಿ ಮಾಡಿದರೆ ಪರಿಣಾಮಗಳನ್ನು ಎದುರಿಸಲು ಪಾಕಿಸ್ತಾನ ಸಿದ್ಧವಾಗಿರಬೇಕು : ವಿಕ್ರಮ್ ಮಿಶ್ರಿ ಎಚ್ಚರಿಕೆ

08/05/2025 6:37 PM

BREAKING : ಅಮೆರಿಕದ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಸೂಚನೆ ನೀಡಿದ ಸಿಂಗಾಪುರ | Operation Sindoor

08/05/2025 6:21 PM

ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಚಾಪ್ಟರ್-2: ಕೇಂದ್ರ ಗೃಹ ಸಚಿವಾಲಯ | Operation Sindoor

08/05/2025 6:06 PM
State News
KARNATAKA

BREAKING : ‘ಆಪರೇಷನ್ ಸಿಂಧೂರ್’ : ಭಾರತೀಯ ಸೈನಿಕರ ಯೋಗಕ್ಷೇಮಕ್ಕಾಗಿ ನಾಳೆ ರಾಜ್ಯಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ.!

By kannadanewsnow5708/05/2025 5:48 PM KARNATAKA 1 Min Read

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ನಡೆಸಲಾದ ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ ಭಾರತೀಯ ಸೈನಿಕರ ಯೋಗಕ್ಷೇಮಕ್ಕಾಗಿ ರಾಜ್ಯಾದ್ಯಂತ ಮಸೀದಿಗಳಲ್ಲಿ ವಿಶೇಷ…

ಕೆಪಿಎಸ್‍ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ಛಲವಾದಿ ನಾರಾಯಣಸ್ವಾಮಿ ಘೋಷಣೆ

08/05/2025 3:13 PM

ರಾಜ್ಯದಲ್ಲಿ ಕೇಂದ್ರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ: ಸಿಎಂ ಸಿದ್ಧರಾಮಯ್ಯ

08/05/2025 3:08 PM

BIG NEWS: ಪಾಕಿಸ್ತಾನದ ಬಹುತೇಕ ಪ್ರಜೆಗಳು ರಾಜ್ಯದಿಂದ ಗಡಿಪಾರು: ಸಿಎಂ ಸಿದ್ಧರಾಮಯ್ಯ ಮಾಹಿತಿ

08/05/2025 2:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.