Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM

ಗಲ್ಲಿಯಿಂದ ಸೂಪರ್ ಸ್ಟಾರ್ ತನಕ; ‘ಸದರನ್ ಸ್ಟ್ರೀಟ್ ಪ್ರೀಮಿಯರ್ ಕ್ರಿಕೆಟ್ ಲೀಗ್‌’ಗೆ ಅದ್ಧೂರಿ ಚಾಲನೆ

01/06/2025 3:31 PM

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Shocking News: ಪೋಷಕರೇ ನಿಮ್ಮ ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸೋ ಮುನ್ನ ಎಚ್ಚರ.!: ‘ಕ್ಯಾನ್ಸರ್’ ಬರಬಹುದು ಹುಷಾರ್.!
KARNATAKA

Shocking News: ಪೋಷಕರೇ ನಿಮ್ಮ ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸೋ ಮುನ್ನ ಎಚ್ಚರ.!: ‘ಕ್ಯಾನ್ಸರ್’ ಬರಬಹುದು ಹುಷಾರ್.!

By kannadanewsnow0923/02/2024 5:15 AM

*ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬಹುತೇಕ ಮಕ್ಕಳಿಗೆ ಬಾಂಬೆ ಮಿಠಾಯಿ ಅಂದ್ರೆ ತುಂಬಾನೇ ಪ್ರೀತಿ. ದಾರಿಯಲ್ಲಿ ಕಂಡ್ರೆ ಸಾಕು ಪೋಷಕರನ್ನು ಕಾಡಿ ಬೇಡಿ ಕೊಡಿಸಿಕೊಂಡು ತಿನ್ನೋ ಮಕ್ಕಳೇ ಜಾಸ್ತಿ. ಆದರೇ ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸ್ತಾ ಇದ್ದೀರಿ ಅಂದ್ರೇ, ಈಗ ಎಚ್ಚರಿಕೆ ವಹಿಸಬೇಕಿದೆ. ಅದು ಯಾಕೆ ಅನ್ನೋ ಶಾಕಿಂಗ್ ನ್ಯೂಸ್ ಮುಂದೆ ಓದಿ.

ಗಂಟೆ ಅಲ್ಲಾಡಿಸಿಕೊಂಡು, ಬೀದಿ ಬೀದಿಯಲ್ಲಿ ಸುತ್ತುತ್ತಾ ಮಾರಾಟ ಮಾಡುವಂತ ಬಾಂಬೆ ಮಿಠಾಯಿ ಅರ್ಥಾತ್ ಕ್ಯಾಂಡಿಗೆ ಮಾರು ಹೋಗದ ಮಕ್ಕಳಿಲ್ಲ. ಅದರ ರುಚಿಗೆ ಜೋತು ಬಿದ್ದ ಅನೇಕ ಮಕ್ಕಳು ಗಂಟೆ ಶಬ್ದ ಕೇಳಿದರೇ ಸಾಕು ಪೋಷಕರಿಂದ ಹಣ ಪಡೆದು ಖರೀದಿಸಿ, ಬಾಯಿ ಚಪ್ಪರಿಸಿಕೊಂಡು ತಿಂದು ಬಿಡುತ್ತಾರೆ. ಈ ಮೂಲಕ ಕ್ಯಾಂಡಿಯ ಸ್ವಾದವನ್ನು ಸವಿಯುತ್ತಾರೆ.

ತಮಿಳುನಾಡು, ಪುದುಚೇರಿಯಲ್ಲಿ ಕ್ಯಾಂಡಿ ಬ್ಯಾನ್

ಆದರೇ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿಯನ್ನು ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳಲ್ಲಿ ಸರ್ಕಾರವು ನಿಷೇಧಿಸಿದೆ. ಇದಕ್ಕೆ ಕಾರಣ ಅದರ ಬಣ್ಣದಲ್ಲಿ ಮಾರಣಾಂತಿಕ ಕ್ಯಾನ್ಸರ್ ಅಂಶ ಪತ್ತೆಯಾಗಿರೋದಾಗಿದೆ. ಈ ಕಾರಣಕ್ಕೆ ಈ ಎರಡು ರಾಜ್ಯಗಳಲ್ಲಿ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ.

ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ರೋಡ್ ಮೈನ್ ಬಿ ಪತ್ತೆ

ಅಂದಹಾಗೇ ತಮಿಳುನಾಡು ಸರ್ಕಾರದಿಂದ ಪ್ರಯೋಗಾಲಯದ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ, ಬಾಂಬೆ ಮಿಠಾಯಿಯಲ್ಲಿ ಮಾರಣಾಂತಿಕ ಕ್ಯಾನ್ಸರ್ ಗೆ ಕಾರಣವಾಗಿರೋ ರೋಡ್ ಮೈನ್ ಬಿ ಎಂಬುದು ಪತ್ತೆಯಾಗಿದೆ. ಇದು ಕ್ಯಾನ್ಸರ್ ಗೆ ದೂಡಲಿದೆ ಎಂಬುದಾಗಿ ಹೇಳಲಾಗುತ್ತಿದೆ.

ಶೀಘ್ರವೇ ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ನಿಷೇಧ

ತಮಿಳುನಾಡು, ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟ ನಿಷೇಧಿಸಿದಂತೆ, ಕರ್ನಾಟಕದಲ್ಲೂ ರಾಜ್ಯ ಸರ್ಕಾರವು ಮಕ್ಕಳ ಫೇವರಿಟ್ ಕ್ಯಾಂಡಿಯನ್ನು ನಿಷೇಧಿಸೋ ಚಿಂತನೆಯನ್ನು ನಡೆಸಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಅದರಲ್ಲಿ ಕ್ಯಾನ್ಸರ್ ಗೆ ಕಾರಣವಾಗುವಂತ ರೋಡ್ ಮೈನ್ ಬಿ ಎಂಬ ಅಂಶವಿರೋದಾಗಿದೆ.

ಪೋಷಕರೇ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸಬೇಡಿ, ಕ್ಯಾನ್ಸರ್ ಗೆ ಕಾರಣವಾಗಬಹುದು

ಸೋ ಬಾಂಬೆ ಮಿಠಾಯಿಯನ್ನು ಮಕ್ಕಳು ಎಷ್ಟೇ ಇಷ್ಟ ಪಟ್ಟು ತಿನ್ನುತ್ತಾರೆ ಅಂದರೂ, ಪೋಷಕರಾದಂತ ನೀವು ಇನ್ಮುಂದೆ ಕೊಡಿಸಬೇಡಿ. ಕೊಡಿಸಿ ನಿಮ್ಮ ಮಕ್ಕಳ ದೇಹದೊಳಗೆ ಮಾರಕ ಕ್ಯಾನ್ಸರ್ ಗೆ ಕಾರಣವಾಗುವಂತ ರೋಡ್ ಮೈನ್ ಬಿ ಸೇರುವಂತೆ ಮಾಡಬೇಡಿ.

ಹೀಗಾಗಿ ಮಕ್ಕಳ ಪೋಷಕರಾದಂತ ನೀವು ಕ್ಯಾಂಡಿಯ ಬಗ್ಗೆ ಎಚ್ಚರಿಕೆ ವಹಿಸೋ ತುರ್ತು ಈಗ ಒದಗಿ ಬಂದಿದೆ. ಮಕ್ಕಳ ಆರೋಗ್ಯದ ಬಗ್ಗೆ ಹತ್ತು ಹಲವು ದೃಷ್ಠಿಕೋನಗಳಿಂದ ಕಾಳಜಿ ವಹಿಸೋ ನೀವು, ಈಗ ಬಾಂಬೆ ಮಿಠಾಯಿ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಡೋ ತುರ್ತು ಸಂದರ್ಭ ಎದುರಾಗಿದೆ. ಯಾವುದೇ ಕಾರಣಕ್ಕೂ ಬಾಂಬೆ ಮಿಠಾಯಿ ಕೊಡಿಸದೇ, ಮಕ್ಕಳು ತಿನ್ನದಂತೆ ಎಚ್ಚರಿಕೆ ವಹಿಸೋದು ಮರೆಯಬೇಡಿ.

Share. Facebook Twitter LinkedIn WhatsApp Email

Related Posts

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM1 Min Read

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM3 Mins Read

ನಂದಿನಿ ಉತ್ಪನ್ನ ಪ್ರಿಯರಿಗೆ ಸಂತಸದ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ | Nandini Products

01/06/2025 3:08 PM2 Mins Read
Recent News

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM

ಗಲ್ಲಿಯಿಂದ ಸೂಪರ್ ಸ್ಟಾರ್ ತನಕ; ‘ಸದರನ್ ಸ್ಟ್ರೀಟ್ ಪ್ರೀಮಿಯರ್ ಕ್ರಿಕೆಟ್ ಲೀಗ್‌’ಗೆ ಅದ್ಧೂರಿ ಚಾಲನೆ

01/06/2025 3:31 PM

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM

ನಂದಿನಿ ಉತ್ಪನ್ನ ಪ್ರಿಯರಿಗೆ ಸಂತಸದ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ | Nandini Products

01/06/2025 3:08 PM
State News
KARNATAKA

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

By kannadanewsnow0901/06/2025 3:47 PM KARNATAKA 1 Min Read

ಬೆಳಗಾವಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದಂತ ಕೂಲಿ ಕಾರ್ಮಿಕರ ಮೇಲೆ ಆಯಿಲ್ ಟ್ಯಾಂಕ್ ಹರಿದು ಉರುಳಿ ಬಿದ್ದ ಪರಿಣಾಮ,…

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM

ನಂದಿನಿ ಉತ್ಪನ್ನ ಪ್ರಿಯರಿಗೆ ಸಂತಸದ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ | Nandini Products

01/06/2025 3:08 PM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ರಸ್ತೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ನವವಿವಾಹಿತ ಸಾವು!

01/06/2025 3:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.