Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

23/08/2025 11:40 AM

Bihar SIR: ಚುನಾವಣಾ ಆಯೋಗಕ್ಕೆ ಆಧಾರ್ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

23/08/2025 11:40 AM

ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ

23/08/2025 11:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ
KARNATAKA

ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ

By kannadanewsnow0923/08/2025 11:35 AM

ಬೆಂಗಳೂರು: ನಗರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ʻಪರಮ್ ಕಲ್ಚರ್ʼ ತನ್ನ ಮಾಸಿಕ ಕಲಾ ಪ್ರದರ್ಶನವಾದ ʻಪರಮ್ ವಿಹಾರʼ ಕಾರ್ಯಕ್ರಮವನ್ನು ಸನಾತನ ಕಲಾಕ್ಷೇತ್ರದಲ್ಲಿ ಆಗಸ್ಟ್ 24ರಂದು ಆಯೋಜಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಮಿಶ್ರಣವುಳ್ಳ ಕಾರ್ಯಕ್ರಮ ಇದಾಗಿದ್ದು, ಜಗಲಿ ಟೇಲ್ಸ್‌, ತಂತ್ರ ಕಾರ್ಯಕ್ರಮಗಳು ಮಾಹಿತಿಯುಕ್ತ ಮನೋರಂಜನೆ ನೀಡಲು ಸಜ್ಜಾಗಿದೆ. ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ನಡೆಯುವ ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತತೆಯ ಸಾರವನ್ನೊಳಗೊಂಡಿರುವುದಲ್ಲದೆ, ಉದಯೋನ್ಮುಖ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ.

ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ‘ತಂತ್ರ’:

ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ 2:30ರಿಂದ 4:30ರವರೆಗೆ ‘ತಂತ್ರ’ ಎಂಬ ವಿಶೇಷ ಕಾರ್ಯಾಗಾರದ ಮೂಲಕ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಸಂಗೀತಗಾರರು ಮತ್ತು ಧ್ವನಿ ತಂತ್ರಜ್ಞರು ಲೈವ್ ಸೌಂಡ್ ಪ್ರೊಡಕ್ಷನ್ ಕುರಿತು ಅಗಾಧ ಮಾಹಿತಿಯನ್ನೊದಗಿಸುತ್ತಾರೆ. ಗೇರ್ ಹ್ಯಾಕ್‌ಗಳು ಮತ್ತು ಫೀಡ್‌ಬ್ಯಾಕ್ ನಿಯಂತ್ರಣದಂತಹ ಸೂಕ್ಷ್ಮ ತಾಂತ್ರಿಕ ವಿಷಯಗಳಿಂದ ಹಿಡಿದು ಅತ್ಯುತ್ತಮ ಗುಣಮಟ್ಟದ ಮತ್ತು ಸ್ಪಷ್ಟ ಆಡಿಯೋ ಮಿಕ್ಸಿಂಗ್‌ ಮಾಡುವವರೆಗಿನ ಹತ್ತು ಹಲವು ವಿಷಯಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ.

ಉದಯೋನ್ಮುಖ ಕಲಾವಿದರಿಗೆ ʻಜಗಲಿ ಟೇಲ್ಸ್ʼ ವೇದಿಕೆ

ಪರಮ್ ವಿಹಾರದ ಈ ಮಾಸಿಕ ಕಾರ್ಯಕ್ರಮದ ಭಾಗವಾಗಿ ಜಗಲಿ ಟೇಲ್ಸ್‌ ಎಲ್ಲರ ಗಮನ ಸೆಳೆಯಲಿದೆ. ‘ಜಗಲಿ ಕಟ್ಟೆ’ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಕಾರ್ಯಕ್ರಮವು ಸಂಭಾಷಣೆ ಮತ್ತು ಕಥೆಗಾರಿಕೆಗೆ ಮೀಸಲಾದ ಪ್ರಮುಖ ವೇದಿಕೆಯಾಗಿದೆ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ಅನುಭವಗಳನ್ನು ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಜಗಲಿ ಕಟ್ಟೆಯು ಉದಯೋನ್ಮುಖ ಕಲಾವಿದರಿಗೆ ಮೀಸಲಾದ ‘ಜಗಲಿ ಟೇಲ್ಸ್‌’ಗೆ ಪ್ರೇರಣೆಯಾಗಿದೆ.
ಈ ಕಾರ್ಯಕ್ರಮವು ಭಾನುವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಇಲ್ಲಿ ಹೊಸಬರು ಮತ್ತು ಮಕ್ಕಳನ್ನು ಒಳಗೊಂಡಂತೆ ಉದಯೋನ್ಮುಖ ಕಲಾವಿದರು ಪ್ರೇಕ್ಷಕರ ಮುಂದೆ ಹಾಡುಗಾರಿಕೆ, ನೃತ್ಯ ಮತ್ತು ಇತರ ಪ್ರದರ್ಶನಗಳನ್ನು ನೀಡಲೂ ವೇದಿಕೆಯಾಗಿದೆ. ಈ ಬಾರಿ ಜಗಲಿ ಟೇಲ್ಸ್‌ನಲ್ಲಿ ಶ್ರೀ ರೂಪಕ್ ವೈದ್ಯ ಅವರ ನೇತೃತ್ವದಲ್ಲಿ ವಿಶೇಷ ತಾಳವಾದ್ಯ ಮೇಳದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಬಳಿಕ ಗುರು ಶ್ರೀಮತಿ ರೋಹಿಣಿ ಮಂಜುನಾಥ್ ಅವರ ಕಲಾ ಸುರಭಿ ತಂಡದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ನಡೆಯಲಿದೆ.

‘ಸಂವಾದದಿಂದ ಸಂಯೋಜನೆ’ ಎಂಬ ವಿಶೇಷ ವಿಭಾಗದಲ್ಲಿ ವಿದ್ವಾನ್ ಎನ್.ಎಸ್.ಪ್ರಸಾದ್ ಅವರೊಂದಿಗೆ ಸಂವಾದ ನಡೆಯಲಿದೆ. ಇದರಲ್ಲಿ ನೃತ್ಯಗಾರರು ಹಾಗೂ ತಬಲಾ ವಾದಕರು ಭಾಗಿಯಾಗಲಿದ್ದಾರೆ. ಈ ವಿಭಾಗವು ಸಂಗೀತ ಸಂಯೋಜನೆಗಳ ಹಿಂದಿನ ಕ್ರಿಯೇಟಿವ್‌ ತಂತ್ರಗಳ ಸೂಕ್ಷ್ಮತೆಗಳನ್ನು ಅರಿಯಲು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ.

ಉಚಿತ ಪ್ರವೇಶ

ಪರಮ್‌ ಕಲ್ಚರ್ ಅರ್ಪಿಸುವ ಪರಮ್ ವಿಹಾರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ಉಚಿತವಾಗಿದೆ. ಪರಮ್ ವಿಹಾರ ಕಾರ್ಯಕ್ರಮ ಮತ್ತು ಮುಂದಿನ ಈವೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು @paramculture ಇನ್ಸ್ಟಾಗ್ರಾಮ್ ಪೇಜ್‌ಗೆ ಭೇಟಿ ನೀಡಬಹುದು.

ಏನಿದು ಪರಮ್ ವಿಹಾರ

ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪರಮ್ ಕಲ್ಚರ್ ʻಪರಮ್ ವಿಹಾರʼ ಎಂಬ ಕಾರ್ಯಕ್ರಮದೊಂದಿಗೆ ಸಾಂಪ್ರದಾಯಿಕ ಕಲೆಗಳು ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಅದ್ಭುತ ಸಮ್ಮಿಲನವನ್ನು ಸೃಷ್ಟಿಸುವ ಮೂಲಕ ಒಂದು ಅನನ್ಯ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಿಂತ ಹೆಚ್ಚಾಗಿ, ಜ್ಞಾನ ವಿನಿಮಯ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ.

ಇಲ್ಲಿ ಅನುಭವಿ ಕಲಾವಿದರು ಮತ್ತು ತಂತ್ರಜ್ಞಾನ ಪರಿಣತರಿಂದ ಮಾಸ್ಟರ್‌ ಕ್ಲಾಸ್‌ಗಳು ನಡೆಯುತ್ತವೆ. ಇದು ಕಲಾ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಹೊಸ ದೃಷ್ಟಿಕೋನ ನೀಡುತ್ತದೆ. ಜತೆಗೆ ‘ಜಗಲಿ ಟೇಲ್ಸ್’ ನಂತಹ ವಿಭಾಗಗಳ ಮೂಲಕ ಉದಯೋನ್ಮುಖ ಯುವ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸಲಾಗುತ್ತದೆ. ಇವೆಲ್ಲದರ ಜೊತೆಗೆ, ಶಾಸ್ತ್ರೀಯ ನೃತ್ಯ ಮತ್ತು ಸಂಗೀತದಂತಹ ಸಾಂಪ್ರದಾಯಿಕ ಕಲೆಗಳ ಪ್ರದರ್ಶನಗಳು ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ.

Share. Facebook Twitter LinkedIn WhatsApp Email

Related Posts

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

23/08/2025 11:40 AM3 Mins Read

BREAKING : ಧರ್ಮಸ್ಥಳ ಕೇಸ್ : ಎಸ್ಐಟಿ ವರದಿ ಬಂದ ಬಳಿಕವಷ್ಟೆ ಸತ್ಯಾಂಶ ಹೊರಬೀಳಲಿದೆ : ಗೃಹ ಸಚಿವ ಜಿ.ಪರಮೇಶ್ವರ್

23/08/2025 11:25 AM1 Min Read

BREAKING : ಧರ್ಮಸ್ಥಳ ಪ್ರಕರಣ : ಕೊನೆಗೂ ಮಾಸ್ಕ್ ಮ್ಯಾನ್ ಹೆಸರು, ಫೋಟೋ ರಿವಿಲ್ ಮಾಡಿದ ‘SIT’

23/08/2025 11:23 AM1 Min Read
Recent News

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

23/08/2025 11:40 AM

Bihar SIR: ಚುನಾವಣಾ ಆಯೋಗಕ್ಕೆ ಆಧಾರ್ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

23/08/2025 11:40 AM

ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ

23/08/2025 11:35 AM

BREAKING : ಧರ್ಮಸ್ಥಳ ಕೇಸ್ : ಎಸ್ಐಟಿ ವರದಿ ಬಂದ ಬಳಿಕವಷ್ಟೆ ಸತ್ಯಾಂಶ ಹೊರಬೀಳಲಿದೆ : ಗೃಹ ಸಚಿವ ಜಿ.ಪರಮೇಶ್ವರ್

23/08/2025 11:25 AM
State News
KARNATAKA

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

By kannadanewsnow0523/08/2025 11:40 AM KARNATAKA 3 Mins Read

ಸಕಲ ಸಂಪತ್ತು ತರುವ ಅವನಿ ಅಮಾವಾಸ್ಯೆ ದೀಪ ಪೂಜೆ ನಮ್ಮ ಜೀವನದಲ್ಲಿ ನಮಗೆ ಅಗತ್ಯವಿರುವ ಎಲ್ಲಾ ಅಗತ್ಯಗಳನ್ನು ಪೂರೈಸಲು ನಾವು…

ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ

23/08/2025 11:35 AM

BREAKING : ಧರ್ಮಸ್ಥಳ ಕೇಸ್ : ಎಸ್ಐಟಿ ವರದಿ ಬಂದ ಬಳಿಕವಷ್ಟೆ ಸತ್ಯಾಂಶ ಹೊರಬೀಳಲಿದೆ : ಗೃಹ ಸಚಿವ ಜಿ.ಪರಮೇಶ್ವರ್

23/08/2025 11:25 AM

BREAKING : ಧರ್ಮಸ್ಥಳ ಪ್ರಕರಣ : ಕೊನೆಗೂ ಮಾಸ್ಕ್ ಮ್ಯಾನ್ ಹೆಸರು, ಫೋಟೋ ರಿವಿಲ್ ಮಾಡಿದ ‘SIT’

23/08/2025 11:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.